ಎತ್ತಿ ಮುದ್ದಾಡು

ಯಾರು ಏನಂದರೇನು
ಯಾರಿಗೆ ಹೇಗಿದ್ದರೇನು
ಅವರವರ ಮಗು ಅವರಿಗೇ ಚೆನ್ನ
ಪುಟಿಕಿಟ್ಟ ಚೊಕ್ಕ ಚಿನ್ನ

ಮೂಗು ಮೊಂಡಾಗಿದೆಯೆಂದಿರಾ?
ಬೇಟೆಗಾರನ ಕೈಯ ಬಾಣ ಜೋಕೆ

ಕಣ್ಣು ಗುಲಗುಂಜಿಯೇ?
ದೇವರ ಮುಂದೆ ಹಚ್ಚಿಟ್ಟ ದೀಪ
ದೂರವಿರಿ

ನಕ್ಕರೆ ಭಯವೇತಕೆ?
ಮೊಗ್ಗು ಬಿರಿದರೆ ಹೂವ
ಮುಡಿದುಕೊ

ಅತ್ತರೆ ಕೆರೆ ಕೋಡಿಬಿತ್ತೆ?
ಸ್ವಾತಿ ಮುತ್ತುಗಳ ಸುರಿಮಳೆಯದು
ಬೊಗಸೆಯೊಡ್ಡು

ಮೈ ಬಣ್ಣ ಯರೆ ಮಣ್ಣೆ?
ಶ್ರೀ ಕೃಷ್ಣನ ರೂಪ ಇವನಲ್ವೆ
ಮಂಕೇ ತಿಳಿಲಿಲ್ವೆ

ಎತ್ತಿ ಮುದ್ದಾಡು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ನಾನು ಎಂಬ ಮಾಯೆ
Next post ನನ್ನೊಂದಿಗೆ ಪುಸ್ತಕಗಳ ಮಾತು

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…