ಎತ್ತಿ ಮುದ್ದಾಡು

ಯಾರು ಏನಂದರೇನು
ಯಾರಿಗೆ ಹೇಗಿದ್ದರೇನು
ಅವರವರ ಮಗು ಅವರಿಗೇ ಚೆನ್ನ
ಪುಟಿಕಿಟ್ಟ ಚೊಕ್ಕ ಚಿನ್ನ

ಮೂಗು ಮೊಂಡಾಗಿದೆಯೆಂದಿರಾ?
ಬೇಟೆಗಾರನ ಕೈಯ ಬಾಣ ಜೋಕೆ

ಕಣ್ಣು ಗುಲಗುಂಜಿಯೇ?
ದೇವರ ಮುಂದೆ ಹಚ್ಚಿಟ್ಟ ದೀಪ
ದೂರವಿರಿ

ನಕ್ಕರೆ ಭಯವೇತಕೆ?
ಮೊಗ್ಗು ಬಿರಿದರೆ ಹೂವ
ಮುಡಿದುಕೊ

ಅತ್ತರೆ ಕೆರೆ ಕೋಡಿಬಿತ್ತೆ?
ಸ್ವಾತಿ ಮುತ್ತುಗಳ ಸುರಿಮಳೆಯದು
ಬೊಗಸೆಯೊಡ್ಡು

ಮೈ ಬಣ್ಣ ಯರೆ ಮಣ್ಣೆ?
ಶ್ರೀ ಕೃಷ್ಣನ ರೂಪ ಇವನಲ್ವೆ
ಮಂಕೇ ತಿಳಿಲಿಲ್ವೆ

ಎತ್ತಿ ಮುದ್ದಾಡು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು ನಾನು ಎಂಬ ಮಾಯೆ
Next post ನನ್ನೊಂದಿಗೆ ಪುಸ್ತಕಗಳ ಮಾತು

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys