Home / ಕವನ / ಕವಿತೆ / ನನ್ನೊಂದಿಗೆ ಪುಸ್ತಕಗಳ ಮಾತು

ನನ್ನೊಂದಿಗೆ ಪುಸ್ತಕಗಳ ಮಾತು

ಮೊನ್ನೆ Referenceಗೆಂದು Library ಹೊಕ್ಕಾಗ
ಫುಸ್ತಕಗಳು ಮೋಕ್ಷಗೊಂಡವರಂತೆ
ಅವುಗಳ ಮುಳುಮುಳು ಧ್ವನಿಕೇಳಿ
ಚಕಿತಳಾದೆ.

“ಬನ್ನಿ ಬನ್ನಿ ನಿಮಗೆ ಕಿವಿಗಳಿದ್ದರೆ
ಅವಕ್ಕೊಂದು ಆತ್ಮ ಇದ್ದರೆ
ಆತ್ಮಕ್ಕೂ ಒಂದು ಕಣ್ಣು ಇದ್ದರೆ, – ಕ್ಷಮಿಸಿ
ನಮ್ಮ ಧ್ವನಿ ಕೇಳಬೇಕೆಂದಿದ್ದರೆ ಬನ್ನಿ
ನಮ್ಮ ಧೂಳು ತುಂಬಿದ ಕಪಾಟಿನರಮನೆಗೆ”-
ಎನ್ನಬೇಕೆ ಅವು.

‘ಸಮಯ ಇಲ್ಲ’ – ನುಣುಚಿಕೊಳ್ಳದಿರಿ
ಗೊತ್ತು ಟಿ.ವಿ. ನೋಡಲೂ ನಿಮಗೆ
ಸಮಯ ಇಲ್ಲೆಂದು, ಪಾಪ!
ಮುಳುಗಿರಬೇಕು ಹಣಗಳಿಸಿ
ಕಾರು ಬಂಗ್ಲೋ ಕೊಂಡು ಆಳುಗಳನಿಟ್ಟುಕೊಳ್ಳಲು.

ನಿಮ್ಮ ಕಣ್ಣುಗಳಲಿ ನಾವಿದ್ದರೂ
ನೀವೇ ಕುರುಡಾಗುತ್ತಿರುವಿರಿ
ನಿಮ್ಮ ತಲೆಗಳಲಿ ನಾವು ಬರಬೇಕೆಂದರೂ
ನೀವೇ ದಡ್ಡರಾಗಿ ಬಿಸಿಲುಗುದುರೆಯ ಬೆನ್ನುಹತ್ತಿ
ಹಳ್ಳ ಕೆರೆಗೆ ಬೀಳುತ್ತಿರುವಿರಿ.

ಮೂಲೆಯಲಿ ಬಿದ್ದಿದ್ದರೆ ರದ್ದಿಪುಸ್ತಕಗಳು
ನೀವು ಓದತೊಡಗಿದರೆ
ಜ್ಞಾನಭಂಡಾರಿಗಳು ನಾವು
ಎಷ್ಟೊಂದು ದಿನಸಿಗಳು ನಮ್ಮಲ್ಲಿ ನೋಡಿ
ನೋಡಿದ್ದೆಲ್ಲ ಸಿಗುವ ಕೇಳಿದ್ದೆಲ್ಲಾ ಕೊಡುವ
ನಮಗೆ ಲಕ್ವಾ ಹೊಡೆಸದಿರಿ.

ಹುಳಹುಪ್ಪಡಿಗಳಾಡಲು ಪ್ರಶಸ್ಥ ಸ್ಥಳಮಾಡಿ
ಗಾಳಿಬೆಳಕಿಲ್ಲದ ಕೋಣೆಗೆ ನೂಕಿ
ಜೇಡರ ಹುಳಗಳ ಸ್ನೇಹಿತರಾಗಿ ಮಾಡಿ
ಕಣ್ಣೀರು ಹಾಕದಂತೆ ಮಾಡದಿರಿ
ನಮಗೆ ಬೇಕೊಂದು
ನಿಮ್ಮ ಸ್ನೇಹದ ಸ್ಪರ್ಶ, ಉಸಿರು.

‘ಮತ್ತೆ ಬರುವೆ’ ಎಂದೆ.
ನಮ್ಮ ತೊಳಲಾಟಕೆ ಬೇಸರಿಸಿದಿರಾ!
ಆದರೂ ನಿಮ್ಮನ್ನು ಕ್ಷಮಿಸುವದಿಲ್ಲ –
ಹೋಗಿ ನಮ್ಮ ಸ್ನೇಹಿತರು ಬಂದಿದ್ದಾರಲ್ಲಿ
(ಪುಸ್ತಕ) ಮೇಳದಲ್ಲಿ.
ವಸಂತ ಋತುವಿನ ಸಂಭ್ರಮದಂತೆ
ದಾಂಗುಡಿ ಇಟ್ಟಿದ್ದಾರಲ್ಲಿ.

‘ಚಿವುಟದಿರಿ ಅವುಗಳನು
ಕಳಿಸದಿರಿ ಮತ್ತೆ ಇಲ್ಲಿ
ಒಂದಿಷ್ಟಾದರೂ ಪ್ರೀತಿ ವಾತ್ಸಲ್ಯ ಕೊಡಿ
ನಾವು ನಿಮಗೆ ಏನೆಲ್ಲ ಕೊಟ್ಟೇವು’

ತಲೆಬಾಗಿ ವಂದಿಸಿದೆ,
ಹಾರೈಸಿದವು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...