Home / ಕವನ / ಕವಿತೆ / ನನ್ನೊಂದಿಗೆ ಪುಸ್ತಕಗಳ ಮಾತು

ನನ್ನೊಂದಿಗೆ ಪುಸ್ತಕಗಳ ಮಾತು

ಮೊನ್ನೆ Referenceಗೆಂದು Library ಹೊಕ್ಕಾಗ
ಫುಸ್ತಕಗಳು ಮೋಕ್ಷಗೊಂಡವರಂತೆ
ಅವುಗಳ ಮುಳುಮುಳು ಧ್ವನಿಕೇಳಿ
ಚಕಿತಳಾದೆ.

“ಬನ್ನಿ ಬನ್ನಿ ನಿಮಗೆ ಕಿವಿಗಳಿದ್ದರೆ
ಅವಕ್ಕೊಂದು ಆತ್ಮ ಇದ್ದರೆ
ಆತ್ಮಕ್ಕೂ ಒಂದು ಕಣ್ಣು ಇದ್ದರೆ, – ಕ್ಷಮಿಸಿ
ನಮ್ಮ ಧ್ವನಿ ಕೇಳಬೇಕೆಂದಿದ್ದರೆ ಬನ್ನಿ
ನಮ್ಮ ಧೂಳು ತುಂಬಿದ ಕಪಾಟಿನರಮನೆಗೆ”-
ಎನ್ನಬೇಕೆ ಅವು.

‘ಸಮಯ ಇಲ್ಲ’ – ನುಣುಚಿಕೊಳ್ಳದಿರಿ
ಗೊತ್ತು ಟಿ.ವಿ. ನೋಡಲೂ ನಿಮಗೆ
ಸಮಯ ಇಲ್ಲೆಂದು, ಪಾಪ!
ಮುಳುಗಿರಬೇಕು ಹಣಗಳಿಸಿ
ಕಾರು ಬಂಗ್ಲೋ ಕೊಂಡು ಆಳುಗಳನಿಟ್ಟುಕೊಳ್ಳಲು.

ನಿಮ್ಮ ಕಣ್ಣುಗಳಲಿ ನಾವಿದ್ದರೂ
ನೀವೇ ಕುರುಡಾಗುತ್ತಿರುವಿರಿ
ನಿಮ್ಮ ತಲೆಗಳಲಿ ನಾವು ಬರಬೇಕೆಂದರೂ
ನೀವೇ ದಡ್ಡರಾಗಿ ಬಿಸಿಲುಗುದುರೆಯ ಬೆನ್ನುಹತ್ತಿ
ಹಳ್ಳ ಕೆರೆಗೆ ಬೀಳುತ್ತಿರುವಿರಿ.

ಮೂಲೆಯಲಿ ಬಿದ್ದಿದ್ದರೆ ರದ್ದಿಪುಸ್ತಕಗಳು
ನೀವು ಓದತೊಡಗಿದರೆ
ಜ್ಞಾನಭಂಡಾರಿಗಳು ನಾವು
ಎಷ್ಟೊಂದು ದಿನಸಿಗಳು ನಮ್ಮಲ್ಲಿ ನೋಡಿ
ನೋಡಿದ್ದೆಲ್ಲ ಸಿಗುವ ಕೇಳಿದ್ದೆಲ್ಲಾ ಕೊಡುವ
ನಮಗೆ ಲಕ್ವಾ ಹೊಡೆಸದಿರಿ.

ಹುಳಹುಪ್ಪಡಿಗಳಾಡಲು ಪ್ರಶಸ್ಥ ಸ್ಥಳಮಾಡಿ
ಗಾಳಿಬೆಳಕಿಲ್ಲದ ಕೋಣೆಗೆ ನೂಕಿ
ಜೇಡರ ಹುಳಗಳ ಸ್ನೇಹಿತರಾಗಿ ಮಾಡಿ
ಕಣ್ಣೀರು ಹಾಕದಂತೆ ಮಾಡದಿರಿ
ನಮಗೆ ಬೇಕೊಂದು
ನಿಮ್ಮ ಸ್ನೇಹದ ಸ್ಪರ್ಶ, ಉಸಿರು.

‘ಮತ್ತೆ ಬರುವೆ’ ಎಂದೆ.
ನಮ್ಮ ತೊಳಲಾಟಕೆ ಬೇಸರಿಸಿದಿರಾ!
ಆದರೂ ನಿಮ್ಮನ್ನು ಕ್ಷಮಿಸುವದಿಲ್ಲ –
ಹೋಗಿ ನಮ್ಮ ಸ್ನೇಹಿತರು ಬಂದಿದ್ದಾರಲ್ಲಿ
(ಪುಸ್ತಕ) ಮೇಳದಲ್ಲಿ.
ವಸಂತ ಋತುವಿನ ಸಂಭ್ರಮದಂತೆ
ದಾಂಗುಡಿ ಇಟ್ಟಿದ್ದಾರಲ್ಲಿ.

‘ಚಿವುಟದಿರಿ ಅವುಗಳನು
ಕಳಿಸದಿರಿ ಮತ್ತೆ ಇಲ್ಲಿ
ಒಂದಿಷ್ಟಾದರೂ ಪ್ರೀತಿ ವಾತ್ಸಲ್ಯ ಕೊಡಿ
ನಾವು ನಿಮಗೆ ಏನೆಲ್ಲ ಕೊಟ್ಟೇವು’

ತಲೆಬಾಗಿ ವಂದಿಸಿದೆ,
ಹಾರೈಸಿದವು.
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...