ನನ್ನೊಂದಿಗೆ ಪುಸ್ತಕಗಳ ಮಾತು

ಮೊನ್ನೆ Referenceಗೆಂದು Library ಹೊಕ್ಕಾಗ
ಫುಸ್ತಕಗಳು ಮೋಕ್ಷಗೊಂಡವರಂತೆ
ಅವುಗಳ ಮುಳುಮುಳು ಧ್ವನಿಕೇಳಿ
ಚಕಿತಳಾದೆ.

“ಬನ್ನಿ ಬನ್ನಿ ನಿಮಗೆ ಕಿವಿಗಳಿದ್ದರೆ
ಅವಕ್ಕೊಂದು ಆತ್ಮ ಇದ್ದರೆ
ಆತ್ಮಕ್ಕೂ ಒಂದು ಕಣ್ಣು ಇದ್ದರೆ, – ಕ್ಷಮಿಸಿ
ನಮ್ಮ ಧ್ವನಿ ಕೇಳಬೇಕೆಂದಿದ್ದರೆ ಬನ್ನಿ
ನಮ್ಮ ಧೂಳು ತುಂಬಿದ ಕಪಾಟಿನರಮನೆಗೆ”-
ಎನ್ನಬೇಕೆ ಅವು.

‘ಸಮಯ ಇಲ್ಲ’ – ನುಣುಚಿಕೊಳ್ಳದಿರಿ
ಗೊತ್ತು ಟಿ.ವಿ. ನೋಡಲೂ ನಿಮಗೆ
ಸಮಯ ಇಲ್ಲೆಂದು, ಪಾಪ!
ಮುಳುಗಿರಬೇಕು ಹಣಗಳಿಸಿ
ಕಾರು ಬಂಗ್ಲೋ ಕೊಂಡು ಆಳುಗಳನಿಟ್ಟುಕೊಳ್ಳಲು.

ನಿಮ್ಮ ಕಣ್ಣುಗಳಲಿ ನಾವಿದ್ದರೂ
ನೀವೇ ಕುರುಡಾಗುತ್ತಿರುವಿರಿ
ನಿಮ್ಮ ತಲೆಗಳಲಿ ನಾವು ಬರಬೇಕೆಂದರೂ
ನೀವೇ ದಡ್ಡರಾಗಿ ಬಿಸಿಲುಗುದುರೆಯ ಬೆನ್ನುಹತ್ತಿ
ಹಳ್ಳ ಕೆರೆಗೆ ಬೀಳುತ್ತಿರುವಿರಿ.

ಮೂಲೆಯಲಿ ಬಿದ್ದಿದ್ದರೆ ರದ್ದಿಪುಸ್ತಕಗಳು
ನೀವು ಓದತೊಡಗಿದರೆ
ಜ್ಞಾನಭಂಡಾರಿಗಳು ನಾವು
ಎಷ್ಟೊಂದು ದಿನಸಿಗಳು ನಮ್ಮಲ್ಲಿ ನೋಡಿ
ನೋಡಿದ್ದೆಲ್ಲ ಸಿಗುವ ಕೇಳಿದ್ದೆಲ್ಲಾ ಕೊಡುವ
ನಮಗೆ ಲಕ್ವಾ ಹೊಡೆಸದಿರಿ.

ಹುಳಹುಪ್ಪಡಿಗಳಾಡಲು ಪ್ರಶಸ್ಥ ಸ್ಥಳಮಾಡಿ
ಗಾಳಿಬೆಳಕಿಲ್ಲದ ಕೋಣೆಗೆ ನೂಕಿ
ಜೇಡರ ಹುಳಗಳ ಸ್ನೇಹಿತರಾಗಿ ಮಾಡಿ
ಕಣ್ಣೀರು ಹಾಕದಂತೆ ಮಾಡದಿರಿ
ನಮಗೆ ಬೇಕೊಂದು
ನಿಮ್ಮ ಸ್ನೇಹದ ಸ್ಪರ್ಶ, ಉಸಿರು.

‘ಮತ್ತೆ ಬರುವೆ’ ಎಂದೆ.
ನಮ್ಮ ತೊಳಲಾಟಕೆ ಬೇಸರಿಸಿದಿರಾ!
ಆದರೂ ನಿಮ್ಮನ್ನು ಕ್ಷಮಿಸುವದಿಲ್ಲ –
ಹೋಗಿ ನಮ್ಮ ಸ್ನೇಹಿತರು ಬಂದಿದ್ದಾರಲ್ಲಿ
(ಪುಸ್ತಕ) ಮೇಳದಲ್ಲಿ.
ವಸಂತ ಋತುವಿನ ಸಂಭ್ರಮದಂತೆ
ದಾಂಗುಡಿ ಇಟ್ಟಿದ್ದಾರಲ್ಲಿ.

‘ಚಿವುಟದಿರಿ ಅವುಗಳನು
ಕಳಿಸದಿರಿ ಮತ್ತೆ ಇಲ್ಲಿ
ಒಂದಿಷ್ಟಾದರೂ ಪ್ರೀತಿ ವಾತ್ಸಲ್ಯ ಕೊಡಿ
ನಾವು ನಿಮಗೆ ಏನೆಲ್ಲ ಕೊಟ್ಟೇವು’

ತಲೆಬಾಗಿ ವಂದಿಸಿದೆ,
ಹಾರೈಸಿದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎತ್ತಿ ಮುದ್ದಾಡು
Next post ಪಕ್ಷ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys