ಬಾಬರ

ಘೋರಿಯ ಮಹಮದನಿದ್ದ
ಘಜನಿಯ ಮಹಮದನಿದ್ದ
ಬಾಬರನೂ ಇದ್ದ
ಬಾಬರ ಮಾತ್ರ ಬೇರೆಯಾಗಿದ್ದ
ಅವನು ಕವಿಯಾಗಿದ್ದ

ಕಾಬೂಲಿನ ಎತ್ತರದಲ್ಲಿ ನಿಂತು
ಅವನು ದಕ್ಷಿಣದತ್ತ ನೋಡಿದನು
ಪರ್ವತಗಳ ಆಚೆ ನದಿಗಳ ಕೆಳಗೆ
ಹರಡಿತ್ತು ಉಪಖಂಡ
ಕೊನೆಯಿಲ್ಲದಂತೆ-ಆ ಘಳಿಗೆ
ಕವಿ-ಯೋಧ-ಅಶ್ವಾರೋಹಿ
ಅವನ ಚಿತ್ತದಲಿ ಮೂಡಿದುದೇನು
ಆ ಹುಚ್ಚಿಗೆ ಅರ್ಥವೇನು-
ಯಾರಿಗೂ ತಿಳಿದಿರಲಿಲ್ಲ!

ಬಾಬರ! ನಾನೂ ಬರೆಯುವೆನು ಕವಿತೆಗಳ
ಖೈಬರಿನ ಕಣಿವೆ ಕಾಬೂಲಿನ ಹೆಣ್ಣುಗಳ
ಕಲ್ಪನೆಯ ಕೆರಳಿಸುವ ನೆಲ ಮುಗಿಲುಗಳ
ಬಯಸುವೆನು ಕೈಗೆಟುಕದ ಖರ್ಜೂರ ಹಣ್ಣುಗಳ

ಅಶ್ವಾರೋಹಿಗಳಿಲ್ಲ ಅಶ್ವಗಳಿಲ್ಲ
ಹಿಂಬಾಲಿಸುವ ಪದಾತಿಯಿಲ್ಲ-ನನ್ನ ಬಳಿ
ಅದಮ್ಯ ಬಯಕೆಯೊಂದಲ್ಲದೆ ಇನ್ನೇನೂ ಇಲ್ಲ
ಬಾಬರ! ಏನು ಹೇಳಲಿ

ಹುಡುಕುತ್ತ ಕಣ್ಣಿಗೆ ಕಾಣಿಸದ ಸ್ವರ್ಗ
ಮನಸ್ಸು ಹತ್ತುವುದು ಖೈಬರಿನ ಮಾರ್ಗ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸೆ
Next post ಕೊಲೆ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…