ಬಾಬರ

ಘೋರಿಯ ಮಹಮದನಿದ್ದ
ಘಜನಿಯ ಮಹಮದನಿದ್ದ
ಬಾಬರನೂ ಇದ್ದ
ಬಾಬರ ಮಾತ್ರ ಬೇರೆಯಾಗಿದ್ದ
ಅವನು ಕವಿಯಾಗಿದ್ದ

ಕಾಬೂಲಿನ ಎತ್ತರದಲ್ಲಿ ನಿಂತು
ಅವನು ದಕ್ಷಿಣದತ್ತ ನೋಡಿದನು
ಪರ್ವತಗಳ ಆಚೆ ನದಿಗಳ ಕೆಳಗೆ
ಹರಡಿತ್ತು ಉಪಖಂಡ
ಕೊನೆಯಿಲ್ಲದಂತೆ-ಆ ಘಳಿಗೆ
ಕವಿ-ಯೋಧ-ಅಶ್ವಾರೋಹಿ
ಅವನ ಚಿತ್ತದಲಿ ಮೂಡಿದುದೇನು
ಆ ಹುಚ್ಚಿಗೆ ಅರ್ಥವೇನು-
ಯಾರಿಗೂ ತಿಳಿದಿರಲಿಲ್ಲ!

ಬಾಬರ! ನಾನೂ ಬರೆಯುವೆನು ಕವಿತೆಗಳ
ಖೈಬರಿನ ಕಣಿವೆ ಕಾಬೂಲಿನ ಹೆಣ್ಣುಗಳ
ಕಲ್ಪನೆಯ ಕೆರಳಿಸುವ ನೆಲ ಮುಗಿಲುಗಳ
ಬಯಸುವೆನು ಕೈಗೆಟುಕದ ಖರ್ಜೂರ ಹಣ್ಣುಗಳ

ಅಶ್ವಾರೋಹಿಗಳಿಲ್ಲ ಅಶ್ವಗಳಿಲ್ಲ
ಹಿಂಬಾಲಿಸುವ ಪದಾತಿಯಿಲ್ಲ-ನನ್ನ ಬಳಿ
ಅದಮ್ಯ ಬಯಕೆಯೊಂದಲ್ಲದೆ ಇನ್ನೇನೂ ಇಲ್ಲ
ಬಾಬರ! ಏನು ಹೇಳಲಿ

ಹುಡುಕುತ್ತ ಕಣ್ಣಿಗೆ ಕಾಣಿಸದ ಸ್ವರ್ಗ
ಮನಸ್ಸು ಹತ್ತುವುದು ಖೈಬರಿನ ಮಾರ್ಗ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಸೆ
Next post ಕೊಲೆ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys