ಕೊನೆಯ ತೀರ್ಪಿನ ದಿನ

ದೈವ ದೇವರು
ಸ್ವರ್ಗ ನರಕ
ಎಲ್ಲವೂ ಕಟ್ಟುಕತೆ ಆರಂಭದಿಂದ
ಕೊನೆಯ ತೀರ್ಪಿನ ತನಕ
ಎಂದೇಕೆ ಎಲ್ಲ ತಿಳಿದವನಂತೆ
ತಿಳಿಯದವರ ಬೆಪ್ಪಾಗಿಸುವೆ ?

ಮಾಡದಿದ್ದರೆ ಬೇಡ
ನಮ್ಮ ನಜರಿನಲಿ ನಿನ್ನ ನಮಾಜು
ನಿನಗೆ ನಿನ್ನದೇ ಆವಾಜು
ಕೇಳುವುದು ಖುಷಿಯಾದರೆ
ಎಬ್ಬಿಸು ಸ್ವಂತದ
ನೆಲ ಮುಗಿಲು ಗಾಳಿಗಳ
ಬಿಚ್ಚಿಬಿಡು ಹಾಯಿಗಳ
ಆದರೇಕೆ ಇತರರ ಸಮುದ್ರಗಳಲ್ಲಿ
ನಡೆಸುವ ಹಟ ನಿನಗೆ
ನಿನ್ನ ವಿಧ್ವಂಸಕ ಜಹಜು?

ಅವರವರ ತಪ್ಪಿಗೆ ಅವರವರ
ಸಾಕ್ಷಿ ನೀಡುವ ದಿನ
ಕಳೆದು ಕೊಂಡವರ ಸೇರುವ
ಮಾಫಿ ಪಡೆಯುವ ಕೊಡುವ
ಕೊನೆಯ ತೀರ್ಪಿನ ದಿನ
ಇನ್ನೂ ಬಹಳ ದೂರ-
ಅಲ್ಲಗಳೆಯುವೆಯೇಕೆ ಆ ದಿನವ?
ಕಲ್ಪನೆಯ ಅಗತ್ಯ
ಅವರವರ ಪ್ರತ್ಯೇಕ ಸತ್ಯ
ಹೀಗಿರುವಾಗ ಅಷ್ಟು ದೀರ್ಘಕಾಲ
ಸಾಧಿಸಬೇಕೆಂದಿರುವೆಯ
ಕೇವಲ ವೈರ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಡಿಪಸ್ ಕಾಂಪ್ಲೆಕ್ಸನ ಡಿ.ಎಚ್ ಲಾರೆನ್ಸ್ – ರಮ್ಯ ಆದರೆ ಅಸ್ತವ್ಯಸ್ತ ಬದುಕು
Next post ಜಗತ್ತು @ ೨೦೩೦

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

cheap jordans|wholesale air max|wholesale jordans|wholesale jewelry|wholesale jerseys