ನಾಡ ಹಬ್ಬ

ಅದ್ದೂರಿಯಿಂದ ನಾಡ ಹಬ್ಬ ಆಚರಿಸಲು ಯುವಕರು, ಯುವತಿಯರು ಜೊತೆಗೆ ಎಲ್ಲಾ ವಯಸ್ಸಿನವರು ಸೇರಿದ್ದರು. ದೊಡ್ಡ ಸಭೆಯಲ್ಲಿ ರಾಜಕೀಯ ಹಿರಿಯರು, ಸಾಂಸ್ಕೃತಿಕ ರಾಯಭಾರಿಗಳು ವೇದಿಕೆಯಲ್ಲಿ ಮಂಡಿಸಿದ್ದರು. ನಾಡ ಜನರು ಉತ್ಸುಕತೆಯಿಂದ ಕಾದವರು ಬೆನ್ನು ತಿರಿಗಿಸಿ ಹೊರಟು ಹೋದರು. ಅಲ್ಲಿ ಮಧ್ಯ ರಾತ್ರಿವರೆಗೂ ನಾಡಹಬ್ಬದ ಹೆಸರಿನಲ್ಲಿ ನಡೆದ ತುಂಡು ಉಡುಪು ಧರಿಸಿದ ಅಶ್ಲೀಲ ನೃತ್ಯಗಳು, ಕರ್ಣ ಕಠೋರ ಹಾಡುಗಳನ್ನು ಶಿಲ್ಲೆ ಹೊಡೆದು ವೀಕ್ಷಿದವರು ವೇದಿಕೆಯ ಸುಖಾಸನವನ್ನು ಅಲಂಕರಿಸಿದ್ದ ಅಧಿಕಾರಿಗಳು, ಅಥಿತಿಗಳು ಹಾಗೂ ಅಧ್ಯಕ್ಷರು. ನಾಡ ಜನರು ಮನೆಯಲ್ಲಿ ಹಾಯಾಗಿ ನಿದ್ರಿಸಿದ್ದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂಟಿ ಗಿಡ
Next post ತೆರೆಯ ಮೇಲೆ ತೆರೆಯು ನೆರೆಯು

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…