ಅದ್ದೂರಿಯಿಂದ ನಾಡ ಹಬ್ಬ ಆಚರಿಸಲು ಯುವಕರು, ಯುವತಿಯರು ಜೊತೆಗೆ ಎಲ್ಲಾ ವಯಸ್ಸಿನವರು ಸೇರಿದ್ದರು. ದೊಡ್ಡ ಸಭೆಯಲ್ಲಿ ರಾಜಕೀಯ ಹಿರಿಯರು, ಸಾಂಸ್ಕೃತಿಕ ರಾಯಭಾರಿಗಳು ವೇದಿಕೆಯಲ್ಲಿ ಮಂಡಿಸಿದ್ದರು. ನಾಡ ಜನರು ಉತ್ಸುಕತೆಯಿಂದ ಕಾದವರು ಬೆನ್ನು ತಿರಿಗಿಸಿ ಹೊರಟು ಹೋದರು. ಅಲ್ಲಿ ಮಧ್ಯ ರಾತ್ರಿವರೆಗೂ ನಾಡಹಬ್ಬದ ಹೆಸರಿನಲ್ಲಿ ನಡೆದ ತುಂಡು ಉಡುಪು ಧರಿಸಿದ ಅಶ್ಲೀಲ ನೃತ್ಯಗಳು, ಕರ್ಣ ಕಠೋರ ಹಾಡುಗಳನ್ನು ಶಿಲ್ಲೆ ಹೊಡೆದು ವೀಕ್ಷಿದವರು ವೇದಿಕೆಯ ಸುಖಾಸನವನ್ನು ಅಲಂಕರಿಸಿದ್ದ ಅಧಿಕಾರಿಗಳು, ಅಥಿತಿಗಳು ಹಾಗೂ ಅಧ್ಯಕ್ಷರು. ನಾಡ ಜನರು ಮನೆಯಲ್ಲಿ ಹಾಯಾಗಿ ನಿದ್ರಿಸಿದ್ದರು.
*****
Related Post
ಸಣ್ಣ ಕತೆ
-
ದುರಾಶಾ ದುರ್ವಿಪಾಕ
"ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…
-
ದೇವರು ಮತ್ತು ಅಪಘಾತ
ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…
-
ಅಮ್ಮ
‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…
-
ಮಿಂಚಿನ ದೀಪ
ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…