ಅದ್ದೂರಿಯಿಂದ ನಾಡ ಹಬ್ಬ ಆಚರಿಸಲು ಯುವಕರು, ಯುವತಿಯರು ಜೊತೆಗೆ ಎಲ್ಲಾ ವಯಸ್ಸಿನವರು ಸೇರಿದ್ದರು. ದೊಡ್ಡ ಸಭೆಯಲ್ಲಿ ರಾಜಕೀಯ ಹಿರಿಯರು, ಸಾಂಸ್ಕೃತಿಕ ರಾಯಭಾರಿಗಳು ವೇದಿಕೆಯಲ್ಲಿ ಮಂಡಿಸಿದ್ದರು. ನಾಡ ಜನರು ಉತ್ಸುಕತೆಯಿಂದ ಕಾದವರು ಬೆನ್ನು ತಿರಿಗಿಸಿ ಹೊರಟು ಹೋದರು. ಅಲ್ಲಿ ಮಧ್ಯ ರಾತ್ರಿವರೆಗೂ ನಾಡಹಬ್ಬದ ಹೆಸರಿನಲ್ಲಿ ನಡೆದ ತುಂಡು ಉಡುಪು ಧರಿಸಿದ ಅಶ್ಲೀಲ ನೃತ್ಯಗಳು, ಕರ್ಣ ಕಠೋರ ಹಾಡುಗಳನ್ನು ಶಿಲ್ಲೆ ಹೊಡೆದು ವೀಕ್ಷಿದವರು ವೇದಿಕೆಯ ಸುಖಾಸನವನ್ನು ಅಲಂಕರಿಸಿದ್ದ ಅಧಿಕಾರಿಗಳು, ಅಥಿತಿಗಳು ಹಾಗೂ ಅಧ್ಯಕ್ಷರು. ನಾಡ ಜನರು ಮನೆಯಲ್ಲಿ ಹಾಯಾಗಿ ನಿದ್ರಿಸಿದ್ದರು.
*****
Related Post
ಸಣ್ಣ ಕತೆ
-
ಮೃಗಜಲ
"People are trying to work towards a good quality of life for tomorrow instead of living for today, for many… Read more…
-
ಬಾಗಿಲು ತೆರೆದಿತ್ತು
ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…
-
ಜೋತಿಷ್ಯ
ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…
-
ರಾಧೆಯ ಸ್ವಗತ
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…