ಮರ ಮರ ರಾಮ ರಾಮ
ತರವೇಹಾರಿ ತರಕಾರಿ
ತಂಪುನೆಲ ತಂಗಾಳಿ ಬರೀ ಸಾಕ್ಷ್ಯಚಿತ್ರ.
ಮುಖಕ್ಕೆ ಆಮ್ಲಜನಕದ ಕೋಶ
ಹೊತ್ತ ಲಲನೆಯರು
ಸಂತೆಯಲ್ಲಿ ಮೈಬಣ್ಣಕ್ಕೊಪ್ಪುವ
ಕೋಶದ ಹುಡುಕಾಟದಲ್ಲಿ.
ಭೂಮಿಮಗನ ಬೆವರಹನಿ ಸುಡು
ಪ್ಲಾಸ್ಟೀಕು ಅಕ್ಕಿಯ ಉಂಡು ದಿನನಿತ್ಯ
ಜೀರ್ಣಕ್ರಿಯೆಗೆ ಜಠರ ಟೋನಿಕ್ಕು
ರಸ್ತೆಯ ತುಂಬಾ ಊದಿಕೊಂಡ
ಹೊಟ್ಟೆ ಕರಳುಗಳ ಮಾಲೀಕರು
ಡ್ರೇಸ್ಸಿಂಗು, ಡಯಾಲಿಸಿಸ್ಸು ದುಗ್ಧ ಮನಸ್ಸು.
ಮನೆಗಳಿಲ್ಲ ಬರೀಯ ಅರಮನೆಗಳು
ಮೈತುಂಬಾ ಮುತ್ತುಗಳಂತೆ
ಮುಕುರಿಕೊಳ್ಳುವ ಸೊಳ್ಳೆ ಸರದಾರರು
ವಿಶ್ವಕ್ಕೆ ವಿಶ್ವವೇ ವಿಷಾನಿಲ ಕಂಪನಿಯ
ಸುಪರ್ದಿಯಲ್ಲಿ.
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.