Home / ಕವನ / ಕವಿತೆ / ಜೀನನ ಹಾಡು

ಜೀನನ ಹಾಡು

ಇಂದಽ ಎಳ್ಳಾಮಾಸಿ ಬಂತಲ್ಲ ಜೀನಾ||
ಅದ್ದಽನ ಬೀಸಽ ಗಿದ್ದಽನ ಕುಟ್ಟ|
ಕುಳ್ಳ್ಯಾಗ ಅಡುವ ಕೋಲೀಲೆ ಮುಗಚ||
ಎಲ್ಲಾರ ಛೆರಗಾ ಹೊಂಟಿತಲ್ಲೊ ಜೀನಾ|
ನಮ್ಮ ದ್ಯಾವರ ಛೆರಗಾ ಹೊಂಡಬೇಕೊ ಜೀನಾ||

ಅವರೆಲ್ಲಾ ಹಿಂದಽ ನಾವೆಲ್ಲಾ ಹಿಂದಽ||
ಅಂಟಽದ ತೆಳೆಗ ಇಟ್ಟಾನೊ ಜೀನಾ|
ಅಂಟಽಕ ತೆಲಿಕೊಟ್ಟು ಮಲಗ್ಯಾನೊ ಜೀನಾ||

ಮುಕ್ಕ ಮಗಿ ನೀರಾ ಕಾಗಿ ಕುಡಿತಲ್ಲ|
ಕುಳ್ಳ್ಯಾಗಿನ ನುಚ್ಚ ಹದ್ದ ಒಯಿತಲ್ಲ|
ಇನ್ನ್ಯಾನ ಉಳ್ಳೇ ಇನ್ನ್ಯಾನ ತಿಲ್ಲೇ||
* * *

ಉದ ಉದ ಅಂತ ಹೋಗಿ ನಿಂತಾ`ಳೆಲ್ಲ’|
ಉದ ಉದ ಅಂದರ ನೀಡಾಽಣಿಲ್ಲ||

ಓಡ್ಯಾಡಿ ಪುಂಡಿ ಕಟಿಗಿ ಕಿತ್ತ್ಯಾನೊ ಜೀನಾ|
ಎಲ್ಲವನ ಬೆನ್ನ ಬೆನ್ನ ಶಳದಾನೊ ಜೀನಾ||

ಹೊಡಿಬ್ಯಾಡೊ ಜೀನಾ ಹೊಡಿಬ್ಯಾಡೊ ಜೀನಾ|
ಬಂದ ಹಾದೀ ಕೂಡಿ ಹೋಗತೇನೊ ಜೀನಾ||

ಜ್ವಾಳಽದ ಹೊಲಕ ಹೋಗ್ಯಾಳ ಎಲ್ಲ|
ಕಣ್ಣಾನ ಕಾಡೀಗಿ ಉದರ್‍ಸ್ಯಾಳೆಲ್ಲ||

ಹತ್ತಿಯ ಹೊಲಕ ಹೋದಾಳೆಲ್ಲಾ|
ಕೈಮ್ಯಾಲಿನ ಗಂಧಾ ಉದರ್‍ಸ್ಯಾಳೆಲ್ಲಾ||

ಗೋದೀಯ ಹೊಲಕ ಹೋದಾಳೆಲ್ಲಾ|
ಉಡಿಯಾನ ಭಂಡಾರ ಉದರ್‍ಸ್ಯಾಳೆಲ್ಲಾ||

ಕಡ್ಲೀಯ ಹೊಲಕ ಹೋದಾಳೆಲ್ಲಾ|
ಹಣಿಮ್ಯಾಲಿನ ಕೂಕಮ್ಮ ಉದರ್‍ಸ್ಯಾಳೆಲ್ಲಾ||
* * *

ಜ್ವಾಳಽದ ಹೊಲಕ ಹ್ವಾದಾಽನೊ ಜೀನಾ|
ಹತ್ತ್‌ ಖಂಡಗ ಜ್ವಾಳೆಲ್ಲಾ ಬತ್ತಗಾಡೀಗಿ||

ಹತ್ತೀಯ ಹೊಲಕ ಹ್ವಾದಾಽನೊ ಜೀನಾ|
ಹತ್ತ್‌ ಖಂಡಗ ಹತ್ತೆಲ್ಲಾ ಬಂಜಿಯಾಯೀತಲ್ಲಾ||

ಗೋದೀಯ ಹೊಲಕ ಹ್ವಾದಾಽನೊ ಜೀನಾ|
ಹೆತ್‌ತ ಖಂಡ್ಗ ಗೋದೆಲ್ಲಾ ಜೊಳ್ಳಹಾಯಿತಲ್ಲ||

ಕಡ್ಲೀಯ ಹೊಲಕ ಹ್ವಾದಾಽನೊ ಜೀನಾ|
ಹೆತ್ತ್‌ ಖಂಡೆಗ್ಕಡ್ಲೆಲ್ಲಾ ಕೊಳ್ಳಿಹಾಯಿತಲ್ಲ||
* * *

ಕಂಬ್ಳೀಯ ಮುಸಕಾ ಹೊಡೆದಾನೊ ಜೀನಾ|
ಜಗಲೀಗಿ ತಲಿಕೊಟ್ಟು ಮಲಗ್ಯಾನೊ ಜೀನಾ||

ಉಣ್ಣೇಳೊ ಜೀನಾ ತಿನ್ನೇಳೊ ಜೀನಾ|
ಇನ್ನೇನ ಉಳ್ಳೇ ಇನ್ನೇನ ತಿಲ್ಲೆ||

ಹೆತ್ತ್ ಖಂಡಗ ಜ್ವಾಳೆಲ್ಲಾ ಬತ್ತ್‌ ಗಾಡೀಗೆ|
ಹೆತ್ತ್‌ ಖಂಡಗ ಹತ್ತೆಲ್ಲಾ ಬಂಜಿಯಾಯೀತಲ್ಲ||

ಹೆತ್ತ್‌ ಖಂಡಗ ಗೋದೆಲ್ಲಾ ಸೊಳ್ಳೆ ಹಾಯಿತಲ್ಲ|
ಹತ್ತ್‌ ಖಂಡಗ ಕಡ್ಲೆಲ್ಲಾ ಕೊಳ್ಳಿಹಾಯ್ತಲ್ಲ||
****
ಜೀನನ ಹಾಡು

ಇದೊಂದು ಯಕ್ಷಿಣಿಯ ಕಥೆ. ಜೀನನೊಬ್ಬನು ನೈವೇದ್ಯದ ಸಲುವಾಗಿ ತೀರ ತುಸು ಅಡಿಗೆಯನ್ನು ಮಾಡಿಸಿಕೊಂಡು ಎಳ್ಳಾಮಾಸೀ ದಿನ ಹೊಲಕ್ಕೆ ಹೋದನು. ಆ ಇದ್ದಷ್ಟು ಅಡಿಗೆಯನ್ನು ಗುಬ್ಬಿಕಾಗೆಗಳು ತಿಂದುಬಿಡುವವು. ಮೋರೆ ಒಣಗಿಸಿಕೊಂಡು ಕುಳಿತಿರುವ ಜೀನನ ಮುಂದೆ ಒಬ್ಬ ಯಕ್ಷಿಣಿಯು ಬಂದು `ನನ್ನ ನೈವೇದ್ಯವನ್ನು ನನಗೆ ಕೊಡು’ ಎಂದು ಕೇಳುವಳು. ಹೆಸಿದು ಹೊಟ್ಟೆ ಉರಿಯುತ್ತಿರುವ ಜೀನನು ಹಸಿದಂಟುಗಳಿಂದ ಅವಳನ್ನು
ಚೆನ್ನಾಗಿ ಥಳಿಸಿದನು. ಅವಳು ತನ್ನ ಮಂಗಲದ್ರವ್ಯ (ಅರಿಸಿಣ, ಕುಂಕುಮ್ಮ, ಕಾಡಿಗೆ, ಗಂಧ)ಗಳನ್ನು ಮಂತ್ರಿಸಿ ಅವನ ಬೆಳೆಗಳ ಮೇಲೆ ತೂರುವಳು. ಅದರಿಂದ ಆ ಬೆಳೆಗಳಿಗೆಲ್ಲ ಬಗೆಬಗೆಯ ರೋಗಗಳುಂಟಾಗಿ ಅವೆಲ್ಲವೂ ಕೆಟ್ಟುಹೋಗುತ್ತವೆ.

ಛಂದಸ್ಸು:- ಮಂದಾನಿಲ ರಗಳೆಗೆ ಸಮೀಪವಾಗಿದೆ.

ಶಬ್ದಪ್ರಯೋಗಗಳು:- ಅದ್ನಗಿದ್ನ=ಅರ್ಧ ಸೇರು, ಗಿರ್ಧ ಸೇರು. ಕುಳ್ಯಾಗ=ಚಿಕ್ಕ ಮಡಿಕೆಯಲ್ಲಿ. ಛರಗ=ಅಡವಿಯ ನೈವೇದ್ಯ. ಅಂಟ-ಮಂಚಿಕೆ. ಎಲ್ಲ=ಎಲ್ಲಮ್ಮ(ದೇವತೆ). ಬತ್ತಗಾಡಿಗೆ=ಜೋಳದ ತೆನೆಗಳಿಗೆ ಬೀಳುವ ಕಾಡಿಗೆರೋಗ. ಬಂಜಿ=ಹತ್ತಿಯ ಕಾಯಿಗಳಿಗೆ ಬೀಳುವ ರೋಗ. ಸೊಳ್ಳು ಹಾಯಿ=ಗೋದಿಯ ಬೆಳೆಯ ಮೇಲೆ ಇಟ್ಟಂಗಿಯಂತಹ ರೋಗ ಬೀಳುವುದರಿಂದ ಬೆಳೆಯೆಲ್ಲ ಸೊಳ್ಳಾಗುತ್ತದೆ. ಕೊಳ್ಳಿ=ಕಡಲೆಯಗಿಡೆಗಳನ್ನು ಒಣಗಿಸುವ ಕೆಂಪು ರೋಗ.

Tagged:

Leave a Reply

Your email address will not be published. Required fields are marked *

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...