Home / ಲೇಖನ / ಇತರೆ / ಮತಸಂಪಾದನೆಗೆ ರಾಮಬಾಣ ಉಪಾಯ

ಮತಸಂಪಾದನೆಗೆ ರಾಮಬಾಣ ಉಪಾಯ

ಬರ್‍ರಿ, ಬರ್‍ರಿ ಗೋಪಾಳರಾವ ನಮ್ಮನ್ನಗ್ದಿ ಮರೇತ್ರಂತ ತಿಳಕೂಂಡಿದ್ದಿವಿ. ಬರ್ರಿ ಇಲ್ಲೆ ಕೂಡಬರ್ರಿ. ಅಕಡೆ ಕೂಡಬಾಡ್ರಿ ನಿಮ್ಮ ಕೂಡುವ ಸ್ಥಾನ ಈ ಗಾದಿಯ ಮೇಲೆ ಅದೆ. ನಿಮ್ಮನ್ನ ತೆಳಗ ಕೂಡ್ರಿಸಿ ನಾವೆಲ್ಲಿ ಕೂಡ್ರ ಬೇಕು. ಗಾದಿಯ ಮ್ಕಾಲಿ ಕೂಡ್ರಿ ರಾಯರೆ.

ಎಲಾ, ಅಲ್ಲಿ ಯಾರಿದೀರಿ ಎರಡು ಕಪ್ಪು ಉತ್ತಮ ಚಹಾ ಮಾಡಂತ ಹೇಳ್ರಿ. ಗೋಪಾಳರಾಯರಿಗೆ ಸ್ಟ್ರಾಂಗ ಚಹಾ ಬೇಕು ಗೊತ್ತದ ಇಲ್ಲೊ. ತಾಜಾ ಹಾಲು ಹಾಕಲಿಕ್ಕೆ ಹೇಳು.

ಇದ್ನೋಡ್ರಿ ಆನಂದರಾವ, ಗೋಪಾಳಾರಾವ ಅಂದ್ರ ಒಂದು ವ್ಯಕ್ತಿ ಅದ, ವ್ಯಕ್ತಿ. ಒಬ್ಬ ಮನುಷ್ಯ ತಮ್ಮವ ಅಂತ ಅಂದ್ರ ಜೀವ ಹೋದರು ಅವನ ಕೈ ಬಿಡುವದಿಲ್ಲ. ಬಹಳ ದಿವಸದಾಗ ಅವರ ಭೆಟ್ಟಿಯಾಗಿದ್ದಿಲ್ಲ ಎಂದು ತಿಳಿದು ನಿನ್ನೆ ಅವರ ಮನಿಗೆ ಹೋಗಿದ್ದೆ. ಗೋಪಾಳ್ರಾಯರು ಮನೆಯಾಗದ್ದಿಲ್ಲಂತ ಅವರ ಮನ್ಯಾಗ ಹೇಳಿಬಂದೆ. ಇಂದು ಬೆಳಗಾಗುವದರೂಳಗೆ ಗೋಪಾಳಾರಾವ ಇಲ್ಲಿ ಹಜರರಿದ್ದಾರ. ಋಣಾನಬಂಧ? ಅಂದ್ರ ಹೀಂಗ ಇರಬೇಕು. ನಮ್ಮದು ಅವರದು ಗೆಳತನ ಅಂತ ಅಂದ್ರ ನಮ್ಮ ಪೂರ್‍ತೆಕ್ಕ ಇಲ್ಲ ಅದು. ವಂಶಪರಂಪರಾಗಿದ್ದು ಅದು ಅವರ ತಂದಿ ನಮ್ಮ ತಂದಿ ಮನೂಗಳಿಯೊಳಗ ಸಾಲಿ ಕಲಿಯುವ ಮುಂದೆ ಇಬ್ಬರೂ ಕೂಡಿ ಸಾಲಿ ತಪ್ಪಿಸಿ ಗಿಡ ಮಂಗ್ಯಾನ ಆಟಾ ಆಡಲಿಕ್ಕೆ ಹೋಗುತ್ತಿದ್ದರು. ಅಂದಿನಿಂದ ಅವರದು ನಮ್ಮದು ಗೆಳೆತನ.

ಯಾಕ್ರೀ ಗೋಪಾಳ ರಾವ, ಆಗಿನ ಗಿಡಮಾಗ್ಯಾನ ಆಟದ ದಿವಸ ಹೋದವು. ಈಗಿನ ಹುಡುಗರು ಖೋಡಿಗಳು ಕೆರಿಕೆಟ, ಹಾಕಿ, ಅಂತಾವ ದುಡ್ಡಿನ ಹೊರ್‍ತು ಕೆಲಸಿಲ್ಲ. ನಮ್ಮ ಆಟಗಳಿಗೆ ಒಂದು ದುಡ್ಡು ಸಹ ಖರ್‍ಚು ಹತ್ತುದಿಲ್ಲ.

ಎಲಾ, ಚಹ ಆಗಿದ್ದರ ತರ್‍ಯೋ ಸಂಗಡ ಎನರೆ ಖಾರ ತೊಗೊಂಬರ್‍ಯೋ ಆದರ ಹೊರ್‍ತಾಗಿ ಚಹಕ್ಕ ರುಚಿನೇ ಬರುವದಿಲ್ಲ. ಗೋಪಾಳ್ರಾವ ಅಂದರ ಚಹೆದ ಪಕ್ಕಾ ಸವಿಗಾರರು, ಹಳದೀ ಡಬ್ಬಿಯ ಹೊರ್‍ತು ಗೊತ್ತಿಲ್ಲ ಅವರಿಗೆ.

ನಾನು ಮ್ಯುನಿಸಿಪಾಲ್ಟಿಯ ಚುನಾವಣಿಗೆ ನಿಂತದ್ದು ಅರರಿಗೆ ಹೇಳಲಿಕ್ಕ ಬೇಡ, ನನ್ನ ಚುನಾವಣೆ ಅಂದ್ರ ಅನರ ಚುನಾವಣೆ ಇದ್ದಂಗ. ಗೋಪಾಳ್ರಾಯರಷ್ಟು ಆತ್ಮೀಯ ಭಾವನೆಯಿಂದ ಕಲಸ ಮಾಡನವರೆಂದರೆ ಕ್ವಚಿತ್‌ ಸಿಗುವರು. ಎಲಾ, ಎಲಿ ಅಡಕಿ ಡಬ್ಬಿ ತಗೊಳ್ಳಿರೋ, ವಿಳೇದೆಲಿ ಕೂಡಿಗಿವು ಅವ ಕೂಡಗಿವು, ಇನ್ನೇನು ಕೇಳಬೇಕ ನಿಮಗ, ಎಲ್ಲ ನೆನಪಿನಲ್ಲರಿಲ್ಲಿರಲಿ, ಅಂದ್ರ ಆತು ೨೮ ನೇ ತಾರೀಖು ಮಾತ್ರ ನೆನಪಿನಲ್ಲಿರಿಲಿ.

ಸ್ನಾನದ ವಾಳ್ಯಾ ಆದಂತೆ ತೋರತದ. ವಿನಾಕಾರಣ ನಿಮ್ಮ ಅನ್ಬೇಕಕ್ಕ ಯಾಕ ಹರಕತ್ತು ಮಾಡಬೇಕು ಹೋಗಿಬರ್ರಿ. ನಮಸ್ಕಾರ (ಹೊರಗೆ ಬಂದ ಮೇಲೆ ಗೋಪಾಳರಾಯರ) ೬ ತಿಂಗಳಿಗೊಮ್ಮೆ ಮ್ಯುನಸಿಪಾಲ್ಟಿಯ ಚುನಾವಣಿ ಇದ್ದರೆ ಎಷ್ಟು ಮಜಾ ಆಗುತ್ತಿತ್ತು ಎಂದರು!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...