Home / ಕವನ / ಕವಿತೆ / ಬುದ್ಧಿ ಭಾವಗಳ ಮಧ್ಯ ಗೋಡೆ

ಬುದ್ಧಿ ಭಾವಗಳ ಮಧ್ಯ ಗೋಡೆ

ಇಲ್ಲಿ ಬುದ್ಧಿಯಿದೆ ನಿಜ
ಹೃದಯವೇ ಮಾಯವಾಗಿದೆಯಲ್ಲ?
ಬದುಕಿನ ಅನೇಕ ತಿರುವುಗಳಲ್ಲಿ
ಪೆಟ್ಟು ತಿಂದರೂ ನಾನೇ ಬದಲಾಗಲಿಲ್ಲವಲ್ಲ?
ಆಕಾಶದ ಬಟ್ಟೆಯಲಿ ತೂತುಗಳೇ ಇಲ್ಲ
ಆದರೆ ಹೃದಯದಲ್ಲಿ ತೂತು ಬಿದ್ದಿದೆ.
ಸರಿಪಡಿಸಿ, ಕೃತಕ ಉಸಿರಾಟಕ್ಕೆ
ನಳಿಕೆ ಅಳವಡಿಸಿದೆ ನೋಡು!

ಅಜ್ಜಿ ಕತೆಹೇಳುವ ಕಟ್ಟೆಯ
ಕಲ್ಲು ಬಿದ್ದು ಹೋಯಿತು ನಿಜ
ಹೃದಯಗಳೇ ಏಕೆ ಸ್ಪಂದಿಸುತ್ತಿಲ್ಲ?
ಗುಬ್ಬಿಗಳು ಒಣಗಿದ ಮರಬಿಟ್ಟು
ಹಸಿರಿರುವತ್ತ ಹಾರಿಹೋಗಿವೆ ನೋಡು!
ಒಂಟಿ ಜೀವನದ ಕೊಂಡಿಗಳು
ಕಳಚಿಕೊಂಡಿವೆ ಬೆಸುಗೆ, ಹೊಲಿಗೆ, ಜೋಡಣೆ
ಹೃದಯದಲಿ ಹೊಲು ಬಿದ್ದಿದೆ ನೋಡು!
ಯಾಕೋ ಹೃದಯದ ನಾಡಿಗಳು
ಪರಸ್ಪರ ಸ್ಪಂದಿಸುತ್ತಿಲ್ಲ ನೋಡು!
ಬದುಕಿನ ಯಾವುದೋ ತಿರುವಿನಲಿ
ಬೆಸುಗೆ ಕಡಿದು ರಕ್ತಸಿಕ್ತವಾಗಿದೆ
ಹೃದಯದ ನಳಿಕೆಗೆ ಮತ್ತೇ
ಹೊಲಿದು ಸರಿಪಡಿಸಿದೆ ನೋಡು!
ಕವಾಟಕೆ ಕಟ್ಟಬಹುದು ಗೋಡೆಗಳನು
ಮಿಡಿಯುವ ಮನದ ಭಾವಗಳನು
ಅಡ್ಡಗೋಡೆಗಳು ತಡೆಯಲಾರವು ನೋಡು!

ಹೃದಯ ರಕ್ತ ಪಂಪು ಮಾಡುತ್ತದೆ
ಅದಕ್ಕೆ ಅದರದೇ ವೈಜ್ಞಾನಿಕ ಕಾರಣವುಂಟು
ಭಾವಗಳ ಹೊದಲು ಎಲ್ಲಿಂದ ಹೊಮ್ಮುತ್ತವೆ?
ಪತ್ತೆ ಮಾಡಲಿ ಹೇಗೆ
ಹೇಗೆ ಹಿಡಿದಿಡಲಿ ಮಾದ್ಯಮದಲಿ
*****

Tagged:

Leave a Reply

Your email address will not be published. Required fields are marked *

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...