Home / ಕವನ / ಕವಿತೆ / ಬುದ್ಧಿ ಭಾವಗಳ ಮಧ್ಯ ಗೋಡೆ

ಬುದ್ಧಿ ಭಾವಗಳ ಮಧ್ಯ ಗೋಡೆ

ಇಲ್ಲಿ ಬುದ್ಧಿಯಿದೆ ನಿಜ
ಹೃದಯವೇ ಮಾಯವಾಗಿದೆಯಲ್ಲ?
ಬದುಕಿನ ಅನೇಕ ತಿರುವುಗಳಲ್ಲಿ
ಪೆಟ್ಟು ತಿಂದರೂ ನಾನೇ ಬದಲಾಗಲಿಲ್ಲವಲ್ಲ?
ಆಕಾಶದ ಬಟ್ಟೆಯಲಿ ತೂತುಗಳೇ ಇಲ್ಲ
ಆದರೆ ಹೃದಯದಲ್ಲಿ ತೂತು ಬಿದ್ದಿದೆ.
ಸರಿಪಡಿಸಿ, ಕೃತಕ ಉಸಿರಾಟಕ್ಕೆ
ನಳಿಕೆ ಅಳವಡಿಸಿದೆ ನೋಡು!

ಅಜ್ಜಿ ಕತೆಹೇಳುವ ಕಟ್ಟೆಯ
ಕಲ್ಲು ಬಿದ್ದು ಹೋಯಿತು ನಿಜ
ಹೃದಯಗಳೇ ಏಕೆ ಸ್ಪಂದಿಸುತ್ತಿಲ್ಲ?
ಗುಬ್ಬಿಗಳು ಒಣಗಿದ ಮರಬಿಟ್ಟು
ಹಸಿರಿರುವತ್ತ ಹಾರಿಹೋಗಿವೆ ನೋಡು!
ಒಂಟಿ ಜೀವನದ ಕೊಂಡಿಗಳು
ಕಳಚಿಕೊಂಡಿವೆ ಬೆಸುಗೆ, ಹೊಲಿಗೆ, ಜೋಡಣೆ
ಹೃದಯದಲಿ ಹೊಲು ಬಿದ್ದಿದೆ ನೋಡು!
ಯಾಕೋ ಹೃದಯದ ನಾಡಿಗಳು
ಪರಸ್ಪರ ಸ್ಪಂದಿಸುತ್ತಿಲ್ಲ ನೋಡು!
ಬದುಕಿನ ಯಾವುದೋ ತಿರುವಿನಲಿ
ಬೆಸುಗೆ ಕಡಿದು ರಕ್ತಸಿಕ್ತವಾಗಿದೆ
ಹೃದಯದ ನಳಿಕೆಗೆ ಮತ್ತೇ
ಹೊಲಿದು ಸರಿಪಡಿಸಿದೆ ನೋಡು!
ಕವಾಟಕೆ ಕಟ್ಟಬಹುದು ಗೋಡೆಗಳನು
ಮಿಡಿಯುವ ಮನದ ಭಾವಗಳನು
ಅಡ್ಡಗೋಡೆಗಳು ತಡೆಯಲಾರವು ನೋಡು!

ಹೃದಯ ರಕ್ತ ಪಂಪು ಮಾಡುತ್ತದೆ
ಅದಕ್ಕೆ ಅದರದೇ ವೈಜ್ಞಾನಿಕ ಕಾರಣವುಂಟು
ಭಾವಗಳ ಹೊದಲು ಎಲ್ಲಿಂದ ಹೊಮ್ಮುತ್ತವೆ?
ಪತ್ತೆ ಮಾಡಲಿ ಹೇಗೆ
ಹೇಗೆ ಹಿಡಿದಿಡಲಿ ಮಾದ್ಯಮದಲಿ
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...