Home / ಕವನ / ಕವಿತೆ / ಬುದ್ಧಿ ಭಾವಗಳ ಮಧ್ಯ ಗೋಡೆ

ಬುದ್ಧಿ ಭಾವಗಳ ಮಧ್ಯ ಗೋಡೆ

ಇಲ್ಲಿ ಬುದ್ಧಿಯಿದೆ ನಿಜ
ಹೃದಯವೇ ಮಾಯವಾಗಿದೆಯಲ್ಲ?
ಬದುಕಿನ ಅನೇಕ ತಿರುವುಗಳಲ್ಲಿ
ಪೆಟ್ಟು ತಿಂದರೂ ನಾನೇ ಬದಲಾಗಲಿಲ್ಲವಲ್ಲ?
ಆಕಾಶದ ಬಟ್ಟೆಯಲಿ ತೂತುಗಳೇ ಇಲ್ಲ
ಆದರೆ ಹೃದಯದಲ್ಲಿ ತೂತು ಬಿದ್ದಿದೆ.
ಸರಿಪಡಿಸಿ, ಕೃತಕ ಉಸಿರಾಟಕ್ಕೆ
ನಳಿಕೆ ಅಳವಡಿಸಿದೆ ನೋಡು!

ಅಜ್ಜಿ ಕತೆಹೇಳುವ ಕಟ್ಟೆಯ
ಕಲ್ಲು ಬಿದ್ದು ಹೋಯಿತು ನಿಜ
ಹೃದಯಗಳೇ ಏಕೆ ಸ್ಪಂದಿಸುತ್ತಿಲ್ಲ?
ಗುಬ್ಬಿಗಳು ಒಣಗಿದ ಮರಬಿಟ್ಟು
ಹಸಿರಿರುವತ್ತ ಹಾರಿಹೋಗಿವೆ ನೋಡು!
ಒಂಟಿ ಜೀವನದ ಕೊಂಡಿಗಳು
ಕಳಚಿಕೊಂಡಿವೆ ಬೆಸುಗೆ, ಹೊಲಿಗೆ, ಜೋಡಣೆ
ಹೃದಯದಲಿ ಹೊಲು ಬಿದ್ದಿದೆ ನೋಡು!
ಯಾಕೋ ಹೃದಯದ ನಾಡಿಗಳು
ಪರಸ್ಪರ ಸ್ಪಂದಿಸುತ್ತಿಲ್ಲ ನೋಡು!
ಬದುಕಿನ ಯಾವುದೋ ತಿರುವಿನಲಿ
ಬೆಸುಗೆ ಕಡಿದು ರಕ್ತಸಿಕ್ತವಾಗಿದೆ
ಹೃದಯದ ನಳಿಕೆಗೆ ಮತ್ತೇ
ಹೊಲಿದು ಸರಿಪಡಿಸಿದೆ ನೋಡು!
ಕವಾಟಕೆ ಕಟ್ಟಬಹುದು ಗೋಡೆಗಳನು
ಮಿಡಿಯುವ ಮನದ ಭಾವಗಳನು
ಅಡ್ಡಗೋಡೆಗಳು ತಡೆಯಲಾರವು ನೋಡು!

ಹೃದಯ ರಕ್ತ ಪಂಪು ಮಾಡುತ್ತದೆ
ಅದಕ್ಕೆ ಅದರದೇ ವೈಜ್ಞಾನಿಕ ಕಾರಣವುಂಟು
ಭಾವಗಳ ಹೊದಲು ಎಲ್ಲಿಂದ ಹೊಮ್ಮುತ್ತವೆ?
ಪತ್ತೆ ಮಾಡಲಿ ಹೇಗೆ
ಹೇಗೆ ಹಿಡಿದಿಡಲಿ ಮಾದ್ಯಮದಲಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...