Home / ಕವನ / ಕವಿತೆ / ಬುದ್ಧಿ ಭಾವಗಳ ಮಧ್ಯ ಗೋಡೆ

ಬುದ್ಧಿ ಭಾವಗಳ ಮಧ್ಯ ಗೋಡೆ

ಇಲ್ಲಿ ಬುದ್ಧಿಯಿದೆ ನಿಜ
ಹೃದಯವೇ ಮಾಯವಾಗಿದೆಯಲ್ಲ?
ಬದುಕಿನ ಅನೇಕ ತಿರುವುಗಳಲ್ಲಿ
ಪೆಟ್ಟು ತಿಂದರೂ ನಾನೇ ಬದಲಾಗಲಿಲ್ಲವಲ್ಲ?
ಆಕಾಶದ ಬಟ್ಟೆಯಲಿ ತೂತುಗಳೇ ಇಲ್ಲ
ಆದರೆ ಹೃದಯದಲ್ಲಿ ತೂತು ಬಿದ್ದಿದೆ.
ಸರಿಪಡಿಸಿ, ಕೃತಕ ಉಸಿರಾಟಕ್ಕೆ
ನಳಿಕೆ ಅಳವಡಿಸಿದೆ ನೋಡು!

ಅಜ್ಜಿ ಕತೆಹೇಳುವ ಕಟ್ಟೆಯ
ಕಲ್ಲು ಬಿದ್ದು ಹೋಯಿತು ನಿಜ
ಹೃದಯಗಳೇ ಏಕೆ ಸ್ಪಂದಿಸುತ್ತಿಲ್ಲ?
ಗುಬ್ಬಿಗಳು ಒಣಗಿದ ಮರಬಿಟ್ಟು
ಹಸಿರಿರುವತ್ತ ಹಾರಿಹೋಗಿವೆ ನೋಡು!
ಒಂಟಿ ಜೀವನದ ಕೊಂಡಿಗಳು
ಕಳಚಿಕೊಂಡಿವೆ ಬೆಸುಗೆ, ಹೊಲಿಗೆ, ಜೋಡಣೆ
ಹೃದಯದಲಿ ಹೊಲು ಬಿದ್ದಿದೆ ನೋಡು!
ಯಾಕೋ ಹೃದಯದ ನಾಡಿಗಳು
ಪರಸ್ಪರ ಸ್ಪಂದಿಸುತ್ತಿಲ್ಲ ನೋಡು!
ಬದುಕಿನ ಯಾವುದೋ ತಿರುವಿನಲಿ
ಬೆಸುಗೆ ಕಡಿದು ರಕ್ತಸಿಕ್ತವಾಗಿದೆ
ಹೃದಯದ ನಳಿಕೆಗೆ ಮತ್ತೇ
ಹೊಲಿದು ಸರಿಪಡಿಸಿದೆ ನೋಡು!
ಕವಾಟಕೆ ಕಟ್ಟಬಹುದು ಗೋಡೆಗಳನು
ಮಿಡಿಯುವ ಮನದ ಭಾವಗಳನು
ಅಡ್ಡಗೋಡೆಗಳು ತಡೆಯಲಾರವು ನೋಡು!

ಹೃದಯ ರಕ್ತ ಪಂಪು ಮಾಡುತ್ತದೆ
ಅದಕ್ಕೆ ಅದರದೇ ವೈಜ್ಞಾನಿಕ ಕಾರಣವುಂಟು
ಭಾವಗಳ ಹೊದಲು ಎಲ್ಲಿಂದ ಹೊಮ್ಮುತ್ತವೆ?
ಪತ್ತೆ ಮಾಡಲಿ ಹೇಗೆ
ಹೇಗೆ ಹಿಡಿದಿಡಲಿ ಮಾದ್ಯಮದಲಿ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...