Home / ಲೇಖನ / ವಿಜ್ಞಾನ / ನೀರಿನ ಶುದ್ದೀಕರಣಕ್ಕೆ ಓಝೋನ್

ನೀರಿನ ಶುದ್ದೀಕರಣಕ್ಕೆ ಓಝೋನ್

ಓಝೋನ್, ಪದರವು ವಾತಾವರಣದಲಿದ್ದು ಸೂರ್‍ಯನ ಅತಿ ನೇರಳೆ ಕಿರಣಗಳು ಭೂಮಿಗೆ ಬರದಂತೆ ಮಾಡುತವೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಇದೊಂದು ಅನಿಂಪದರವಾಗಿದ್ದು, ಇದರಿಂದ ಅಶುದ್ದ ನೀರನ್ನು ಶುದ್ಧಿಕರಿಸಬಹುದೆಂದು ಫ್ರಾನ್ಸಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದನ್ನು ವಾತಾವರಣದಿಂದ ಪಡೆಯುವ ಬದಲು ಪ್ರಯೋಗಾಲಯದಲ್ಲಿಯೇ ಅಧಿಕ ವ್ರಮಾಣದಲ್ಲಿ ತಯಾರಿಸಿಕೊಳ್ಳಬಹುದು. ಓಝೋನ್ ಆಮ್ಲಜನಕವು ಒಂದು ಬಹುರೂಪಿಯಾಗಿದೆ. ಓಝೋನಿನ ಒಂದು ಅಣುವಿನಲಿ ಮೂರು ಆಮ್ಲ ಜನಕದ ಪರಮಾಣುಗಳಿರುತ್ತವೆ. ಓಝೋನಿನ ಅಣುಸೂತ್ರ O3 ಹೀಗಾಗಿ ಇದು ಒಳ್ಳೆಯ ಉತ್ಕರ್ಷಕಾರಿಯಾಗಿದೆ. ಮತ್ತು ದೃಢವಲ್ಲವ ಅನಿಲ ಕೂಡ ಬಹಳ ಬೇಗ ನಾಶವಾಗುತ್ತದೆ. ನೀರನ್ನು ಶುದ್ದಗೊಳಿಸಲು ಕ್ಲೋರಿನ್ ಆಮ್ಲಬಳಸಿದರೂ ಅದು ವಾಸನೆಯಿಂದ ಕೂಡಿರುತ್ತದೆ. ಕ್ಲೋರಿನ್ ನಿಂದ ಸಾವಯವ ಕ್ಲೋರಿನ್ ಸಂಯುಕ್ತಗಳು ಉಂಟಾಗುತ್ತವೆ. ಇದರಿಂದ ಕ್ಯಾನ್ಸರ್ ಬರಲೂಬಹುದು. ಓಝೋನ್‌ನಿಂದ ನೀರನ್ನು ಶುದ್ದಿಕರಿಸುವಾಗ ಈ ಅನಿಲವನ್ನು ಸ್ಥಳದಲ್ಲಿಯೇ ತಯಾರಿಸವುದು ಅತಿಮುಖ್ಯ ಏಕೆಂದರೆ ಇದು ದೃಢವಲ್ಲದ ಅನಿಲವಾಗಿದೆ. ವಾತಾವರಣದಲ್ಲಿಯ ಆಮ್ಲಜನಕವನ್ನು ಬಳಸಿಕೊಂಡು ಸರಳವಿಧಾನದಲ್ಲಿ ಓಝೋನನ್ನು ತಯಾರಿಸಬಹುದು. ಒಂದು ಗಂಟೆಯಲ್ಲಿ ಸು. ೩೧೫ ಕಿ. ಗ್ರಾಂ ನಷ್ಟು ಓಝೋನನ್ನು ಆಮ್ಲಜನಕದಿಂದ ತಯಾರಿಸಬಹುದಾಗಿದೆ. ಇದಕ್ಕೆ ನೀರಿನಲ್ಲಿಯ ಸೂಕ್ಷ್ಮಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಶಕ್ತಿ ಇದೆ. ಈ ಅನಿಲವನ್ನು ಅಶುದ್ದ ನೀರಿನ ಮೂಲಕ ಹಾಯಿಸಿದಾಗ ಓಝೋನ ಬ್ಯಾಕ್ಟೀರಿಯಾಗಳನ್ನು ಬಹುಬೇಗ ನಾಶಪಡಿಸುತ್ತದೆ. ಒಂದು ಲೀಟರ್ ಅಶುದ್ಧ ನೀರನ್ನು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸಲು ಬೇಕಾಗುವ ಓಝೋನ್ ಪ್ರಮಾಣದಲ್ಲಿ ೦.೧ ಮಿಲಿ ಗ್ರಾಂ ಮಾತ್ರ. ಈ ಕ್ರಿಯೆಯಿಂದ ನಮಗೆ ಶೇ೯೯.೯ ಪ್ರಮಾಣದಲ್ಲಿ ಶುದ್ಧನೀರು ದೊರೆಯುತ್ತದೆ.

ಈ ತಂತ್ರಜ್ಞಾನವನ್ನು ಬಳಸಿಕೊಂಡು ಈಗಾಗಲೇ ಫ್ರಾನ್ಸ್, ಇಂಗ್ಲೆಂಡ್, ಅಮೇರಿಕಾ, ಕೋರಿಯಾ, ರಷಿಯಾ, ರುಮೆನೀಯಾ, ಕೆನಡಾ, ಟರ್ಕಿ ಮತ್ತು ಚೀನಾದೇಶಗಳಲ್ಲಿ ಈಗಾಗಲೇ ಅಶುದ್ಧನೀರನ್ನು ಶುದ್ಧೀಕರಿಸುತ್ತಿದ್ದಾರೆ. ಕೈಗಾರಿಕೆಗಳು ಹೊರಚೆಲ್ಲುವ ನೀರನ್ನು ಶುದ್ಧೀಕರಸಲು ಈ ತಂತ್ರವನ್ನು ಬಳಸಬಹುದೆಂದು ಫ್ರಾನ್ಸ್ ಹೇಳಿದ್ದಾರೆ.

ಭಾರತದಂತಹ ಬೃಹತ್ ರಾಷ್ಟ್ರಗಳಿಗೆ ಈ ಒಂದು ತಂತ್ರಜ್ಞಾನ ವರವಾಗಿ ಪರಿಣಮಿಸಲಿದೆ. ಈ ದಿಸೆಯಲ್ಲಿ ನಮ್ಮ ವಿಜ್ಞಾನಿಗಳು ಮತ್ತು ಉದ್ದಿಮಿಗಳು ಪ್ರಯತ್ನಿಸಿ ಸಾಮಾನ್ಯರಿಗೆ ಕುಡಿಯಲು ಶುದ್ದವಾದ ನೀರನ್ನು ದೊರಕಿಸಿಕೊಡಬಹುದಾಗಿದೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...