Home / ಲೇಖನ / ವಿಜ್ಞಾನ / ನೀರಿನ ಶುದ್ದೀಕರಣಕ್ಕೆ ಓಝೋನ್

ನೀರಿನ ಶುದ್ದೀಕರಣಕ್ಕೆ ಓಝೋನ್

ಓಝೋನ್, ಪದರವು ವಾತಾವರಣದಲಿದ್ದು ಸೂರ್‍ಯನ ಅತಿ ನೇರಳೆ ಕಿರಣಗಳು ಭೂಮಿಗೆ ಬರದಂತೆ ಮಾಡುತವೆ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಇದೊಂದು ಅನಿಂಪದರವಾಗಿದ್ದು, ಇದರಿಂದ ಅಶುದ್ದ ನೀರನ್ನು ಶುದ್ಧಿಕರಿಸಬಹುದೆಂದು ಫ್ರಾನ್ಸಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಇದನ್ನು ವಾತಾವರಣದಿಂದ ಪಡೆಯುವ ಬದಲು ಪ್ರಯೋಗಾಲಯದಲ್ಲಿಯೇ ಅಧಿಕ ವ್ರಮಾಣದಲ್ಲಿ ತಯಾರಿಸಿಕೊಳ್ಳಬಹುದು. ಓಝೋನ್ ಆಮ್ಲಜನಕವು ಒಂದು ಬಹುರೂಪಿಯಾಗಿದೆ. ಓಝೋನಿನ ಒಂದು ಅಣುವಿನಲಿ ಮೂರು ಆಮ್ಲ ಜನಕದ ಪರಮಾಣುಗಳಿರುತ್ತವೆ. ಓಝೋನಿನ ಅಣುಸೂತ್ರ O3 ಹೀಗಾಗಿ ಇದು ಒಳ್ಳೆಯ ಉತ್ಕರ್ಷಕಾರಿಯಾಗಿದೆ. ಮತ್ತು ದೃಢವಲ್ಲವ ಅನಿಲ ಕೂಡ ಬಹಳ ಬೇಗ ನಾಶವಾಗುತ್ತದೆ. ನೀರನ್ನು ಶುದ್ದಗೊಳಿಸಲು ಕ್ಲೋರಿನ್ ಆಮ್ಲಬಳಸಿದರೂ ಅದು ವಾಸನೆಯಿಂದ ಕೂಡಿರುತ್ತದೆ. ಕ್ಲೋರಿನ್ ನಿಂದ ಸಾವಯವ ಕ್ಲೋರಿನ್ ಸಂಯುಕ್ತಗಳು ಉಂಟಾಗುತ್ತವೆ. ಇದರಿಂದ ಕ್ಯಾನ್ಸರ್ ಬರಲೂಬಹುದು. ಓಝೋನ್‌ನಿಂದ ನೀರನ್ನು ಶುದ್ದಿಕರಿಸುವಾಗ ಈ ಅನಿಲವನ್ನು ಸ್ಥಳದಲ್ಲಿಯೇ ತಯಾರಿಸವುದು ಅತಿಮುಖ್ಯ ಏಕೆಂದರೆ ಇದು ದೃಢವಲ್ಲದ ಅನಿಲವಾಗಿದೆ. ವಾತಾವರಣದಲ್ಲಿಯ ಆಮ್ಲಜನಕವನ್ನು ಬಳಸಿಕೊಂಡು ಸರಳವಿಧಾನದಲ್ಲಿ ಓಝೋನನ್ನು ತಯಾರಿಸಬಹುದು. ಒಂದು ಗಂಟೆಯಲ್ಲಿ ಸು. ೩೧೫ ಕಿ. ಗ್ರಾಂ ನಷ್ಟು ಓಝೋನನ್ನು ಆಮ್ಲಜನಕದಿಂದ ತಯಾರಿಸಬಹುದಾಗಿದೆ. ಇದಕ್ಕೆ ನೀರಿನಲ್ಲಿಯ ಸೂಕ್ಷ್ಮಬ್ಯಾಕ್ಟೀರಿಯಾಗಳನ್ನು ನಾಶಪಡಿಸುವ ಶಕ್ತಿ ಇದೆ. ಈ ಅನಿಲವನ್ನು ಅಶುದ್ದ ನೀರಿನ ಮೂಲಕ ಹಾಯಿಸಿದಾಗ ಓಝೋನ ಬ್ಯಾಕ್ಟೀರಿಯಾಗಳನ್ನು ಬಹುಬೇಗ ನಾಶಪಡಿಸುತ್ತದೆ. ಒಂದು ಲೀಟರ್ ಅಶುದ್ಧ ನೀರನ್ನು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸಲು ಬೇಕಾಗುವ ಓಝೋನ್ ಪ್ರಮಾಣದಲ್ಲಿ ೦.೧ ಮಿಲಿ ಗ್ರಾಂ ಮಾತ್ರ. ಈ ಕ್ರಿಯೆಯಿಂದ ನಮಗೆ ಶೇ೯೯.೯ ಪ್ರಮಾಣದಲ್ಲಿ ಶುದ್ಧನೀರು ದೊರೆಯುತ್ತದೆ.

ಈ ತಂತ್ರಜ್ಞಾನವನ್ನು ಬಳಸಿಕೊಂಡು ಈಗಾಗಲೇ ಫ್ರಾನ್ಸ್, ಇಂಗ್ಲೆಂಡ್, ಅಮೇರಿಕಾ, ಕೋರಿಯಾ, ರಷಿಯಾ, ರುಮೆನೀಯಾ, ಕೆನಡಾ, ಟರ್ಕಿ ಮತ್ತು ಚೀನಾದೇಶಗಳಲ್ಲಿ ಈಗಾಗಲೇ ಅಶುದ್ಧನೀರನ್ನು ಶುದ್ಧೀಕರಿಸುತ್ತಿದ್ದಾರೆ. ಕೈಗಾರಿಕೆಗಳು ಹೊರಚೆಲ್ಲುವ ನೀರನ್ನು ಶುದ್ಧೀಕರಸಲು ಈ ತಂತ್ರವನ್ನು ಬಳಸಬಹುದೆಂದು ಫ್ರಾನ್ಸ್ ಹೇಳಿದ್ದಾರೆ.

ಭಾರತದಂತಹ ಬೃಹತ್ ರಾಷ್ಟ್ರಗಳಿಗೆ ಈ ಒಂದು ತಂತ್ರಜ್ಞಾನ ವರವಾಗಿ ಪರಿಣಮಿಸಲಿದೆ. ಈ ದಿಸೆಯಲ್ಲಿ ನಮ್ಮ ವಿಜ್ಞಾನಿಗಳು ಮತ್ತು ಉದ್ದಿಮಿಗಳು ಪ್ರಯತ್ನಿಸಿ ಸಾಮಾನ್ಯರಿಗೆ ಕುಡಿಯಲು ಶುದ್ದವಾದ ನೀರನ್ನು ದೊರಕಿಸಿಕೊಡಬಹುದಾಗಿದೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...