ಒಡೆದ ಗುಮ್ಮಟದ ತುಂಬಾ


ಇರುಳ ಆಕಾಶದ ತುಂಬಾ
ಕಪ್ಪನೆಯ ಮೋಡಗಳು
ಮಳೆ ಸುರಿದಿದೆ ಧಾರಾಕಾರ
ಮೈ ಕೊರೆವ ಚಳಿಯಲ್ಲಿ?!


ಒಂದು ಕಾಲವಿತ್ತು
ಈ ನೆಲದ ಮೂಲೆ ಮೂಲೆಯ
ಮೇಲೆ ಆ ದೇವನ ಪ್ರೀತಿ
ಜಿನುಗಿತ್ತು ಹನಿ ಹನಿ
ಅಮೃತವಾಗಿ

ಆಗಿನ್ನು ಅವನಿಗೆ ಹಸರಿರಲಿಲ್ಲ
ಮಾತು ಬದುಕಾಗಿತ್ತು
ಮೌನ ಬಲವಾಗಿತ್ತು
ಮನಸು ಸ್ಫಟಿಕ ಕನ್ನಡಿಯಾಗಿತ್ತು
ಕಣ್ಮುಚ್ಚಿದರೂ ಚಿತ್ರ ಸ್ಪಷ್ಟವಿತ್ತು
ಒಲವ ಬೆಸುಗೆ ಬಲವಾಗಿತ್ತು


ನಿನ್ನೆ ರಾತ್ರಿ ಕತ್ತಲಾಗಿತ್ತು
ಗುಮ್ಮಟದ ಗರ್ಭಗುಡಿಯೊಳಗೆ
ತಲೆಯೊಡೆದ ‘ರಾಮಾಽಽಽ’
ರಕ್ತ ಕೆಂಪೋ ಕೆಂಪು
ಹೆಜ್ಜೆ ಇಟ್ಟಲ್ಲೆಲ್ಲಾ ಕಾಡುವ
ಕಪ್ಪು ಗುರುತು

ಬೆಳ್ಳಿ ಚುಕ್ಕಿಯ ಬೆಳಕಿಗೂ
ಮುಂಚೆ ಸಿಡಿದ ಸೂರ್ಯ
ಬಿಕ್ಕಿ ಬಿಕ್ಕಿ ಅತ್ತದ್ದು
ಯಾರ ಮಡಿಲಿನಲಿ?


ತಬ್ಬಲಿ ಕಂದನೋರ್ವನ
ಅಳುವ ಕಣ್ಣಹನಿ ಕೇಳಿತು
‘ಇಲ್ಲಿ’ ಹುಟ್ಟದ ನಾನು
ಹುಟ್ಟಿದ್ದರೆ ‘ಅಲ್ಲಿ’…?

ಆದರೇನಂತೆ ಹೆಸರು
‘ಹಿಂದು-ಮುಂದು’
ಅರಿಯದಿದ್ದರೆ ಮನಸು
ಒಂದನೊಂದು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊತ್ತವರಾರೀ ಸೃಷ್ಟಿಯ ಭಾರ?
Next post ಯಾವ ಭಿಕ್ಷಾಪಾತ್ರೆಗೆ ನಿಮ್ಮ ಹಣ

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…