Home / ಕವನ / ಕವಿತೆ / ಒಡೆದ ಗುಮ್ಮಟದ ತುಂಬಾ

ಒಡೆದ ಗುಮ್ಮಟದ ತುಂಬಾ


ಇರುಳ ಆಕಾಶದ ತುಂಬಾ
ಕಪ್ಪನೆಯ ಮೋಡಗಳು
ಮಳೆ ಸುರಿದಿದೆ ಧಾರಾಕಾರ
ಮೈ ಕೊರೆವ ಚಳಿಯಲ್ಲಿ?!


ಒಂದು ಕಾಲವಿತ್ತು
ಈ ನೆಲದ ಮೂಲೆ ಮೂಲೆಯ
ಮೇಲೆ ಆ ದೇವನ ಪ್ರೀತಿ
ಜಿನುಗಿತ್ತು ಹನಿ ಹನಿ
ಅಮೃತವಾಗಿ

ಆಗಿನ್ನು ಅವನಿಗೆ ಹಸರಿರಲಿಲ್ಲ
ಮಾತು ಬದುಕಾಗಿತ್ತು
ಮೌನ ಬಲವಾಗಿತ್ತು
ಮನಸು ಸ್ಫಟಿಕ ಕನ್ನಡಿಯಾಗಿತ್ತು
ಕಣ್ಮುಚ್ಚಿದರೂ ಚಿತ್ರ ಸ್ಪಷ್ಟವಿತ್ತು
ಒಲವ ಬೆಸುಗೆ ಬಲವಾಗಿತ್ತು


ನಿನ್ನೆ ರಾತ್ರಿ ಕತ್ತಲಾಗಿತ್ತು
ಗುಮ್ಮಟದ ಗರ್ಭಗುಡಿಯೊಳಗೆ
ತಲೆಯೊಡೆದ ‘ರಾಮಾಽಽಽ’
ರಕ್ತ ಕೆಂಪೋ ಕೆಂಪು
ಹೆಜ್ಜೆ ಇಟ್ಟಲ್ಲೆಲ್ಲಾ ಕಾಡುವ
ಕಪ್ಪು ಗುರುತು

ಬೆಳ್ಳಿ ಚುಕ್ಕಿಯ ಬೆಳಕಿಗೂ
ಮುಂಚೆ ಸಿಡಿದ ಸೂರ್ಯ
ಬಿಕ್ಕಿ ಬಿಕ್ಕಿ ಅತ್ತದ್ದು
ಯಾರ ಮಡಿಲಿನಲಿ?


ತಬ್ಬಲಿ ಕಂದನೋರ್ವನ
ಅಳುವ ಕಣ್ಣಹನಿ ಕೇಳಿತು
‘ಇಲ್ಲಿ’ ಹುಟ್ಟದ ನಾನು
ಹುಟ್ಟಿದ್ದರೆ ‘ಅಲ್ಲಿ’…?

ಆದರೇನಂತೆ ಹೆಸರು
‘ಹಿಂದು-ಮುಂದು’
ಅರಿಯದಿದ್ದರೆ ಮನಸು
ಒಂದನೊಂದು?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...