ಒಡೆದ ಗುಮ್ಮಟದ ತುಂಬಾ


ಇರುಳ ಆಕಾಶದ ತುಂಬಾ
ಕಪ್ಪನೆಯ ಮೋಡಗಳು
ಮಳೆ ಸುರಿದಿದೆ ಧಾರಾಕಾರ
ಮೈ ಕೊರೆವ ಚಳಿಯಲ್ಲಿ?!


ಒಂದು ಕಾಲವಿತ್ತು
ಈ ನೆಲದ ಮೂಲೆ ಮೂಲೆಯ
ಮೇಲೆ ಆ ದೇವನ ಪ್ರೀತಿ
ಜಿನುಗಿತ್ತು ಹನಿ ಹನಿ
ಅಮೃತವಾಗಿ

ಆಗಿನ್ನು ಅವನಿಗೆ ಹಸರಿರಲಿಲ್ಲ
ಮಾತು ಬದುಕಾಗಿತ್ತು
ಮೌನ ಬಲವಾಗಿತ್ತು
ಮನಸು ಸ್ಫಟಿಕ ಕನ್ನಡಿಯಾಗಿತ್ತು
ಕಣ್ಮುಚ್ಚಿದರೂ ಚಿತ್ರ ಸ್ಪಷ್ಟವಿತ್ತು
ಒಲವ ಬೆಸುಗೆ ಬಲವಾಗಿತ್ತು


ನಿನ್ನೆ ರಾತ್ರಿ ಕತ್ತಲಾಗಿತ್ತು
ಗುಮ್ಮಟದ ಗರ್ಭಗುಡಿಯೊಳಗೆ
ತಲೆಯೊಡೆದ ‘ರಾಮಾಽಽಽ’
ರಕ್ತ ಕೆಂಪೋ ಕೆಂಪು
ಹೆಜ್ಜೆ ಇಟ್ಟಲ್ಲೆಲ್ಲಾ ಕಾಡುವ
ಕಪ್ಪು ಗುರುತು

ಬೆಳ್ಳಿ ಚುಕ್ಕಿಯ ಬೆಳಕಿಗೂ
ಮುಂಚೆ ಸಿಡಿದ ಸೂರ್ಯ
ಬಿಕ್ಕಿ ಬಿಕ್ಕಿ ಅತ್ತದ್ದು
ಯಾರ ಮಡಿಲಿನಲಿ?


ತಬ್ಬಲಿ ಕಂದನೋರ್ವನ
ಅಳುವ ಕಣ್ಣಹನಿ ಕೇಳಿತು
‘ಇಲ್ಲಿ’ ಹುಟ್ಟದ ನಾನು
ಹುಟ್ಟಿದ್ದರೆ ‘ಅಲ್ಲಿ’…?

ಆದರೇನಂತೆ ಹೆಸರು
‘ಹಿಂದು-ಮುಂದು’
ಅರಿಯದಿದ್ದರೆ ಮನಸು
ಒಂದನೊಂದು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊತ್ತವರಾರೀ ಸೃಷ್ಟಿಯ ಭಾರ?
Next post ಯಾವ ಭಿಕ್ಷಾಪಾತ್ರೆಗೆ ನಿಮ್ಮ ಹಣ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

cheap jordans|wholesale air max|wholesale jordans|wholesale jewelry|wholesale jerseys