Home / ಕವನ / ಕವಿತೆ / ಡಾಲರ್ ಬಿರುಗಾಳಿ

ಡಾಲರ್ ಬಿರುಗಾಳಿ

ಪಶ್ಚಿಮದಿಂದೆದ್ದ ಹೊಸ ಬಿರುಗಾಳಿ
ಪೂರ್ವವನ್ನೆಲ್ಲ ಹಾರಿಸಿ ಧೂಳಿಪಟ ಮಾಡಿದೆ
ಕಾಣುತ್ತಿಲ್ಲ ಅಶ್ವಿನಿ ಭರಣಿ ಕೃತ್ತಿಕೆಯರು
ಮಾಯವಾಗಿವೆ ಧ್ರುವ ನಕ್ಷತ್ರ ಸಪ್ತರ್ಷಿಮಂಡಲ
ಋತವ ಸಾರಿದ ವೇದ ಉಷನಿಷತ್ತುಗಳು
ಕಣ್ಮರೆಯಾದವು ಸದ್ದುಗದ್ದಲದಲ್ಲಿ
ಏಕಪತ್ನೀವ್ರತಸ್ಥ ಬೆಡಗಿಯರ ಬೆಂಬತ್ತಿದ್ದಾನೆ
ಸಹನೆ ತಾಳ್ಮೆ ಎಂದು ಕನವರಿಸಿದ ಧರ್ಮ
ಯಾರಿಗೂ ಬೇಡವಾದ ಜಡ ಕರ್ಮ
ಅಹಿಂಸೆ ಪರಧರ್ಮ ಎಂದ ಸಿದ್ಧಾಂತಗಳು
ಕಾಲು ಕಸ ಕೊಳೆತ ತಿಪ್ಪೆಗಳು
ಆಧ್ಯಾತ್ಮ ವೈರಾಗ್ಯ ತ್ಯಾಗ ಭಕ್ತಿ
ಜಪ ತಪಾದಿಗಳು ಪಾಚಿ ಗಟ್ಟಿಹೋಗಿವೆ
ಪಾತಿವ್ರತ್ಯ ಸೋದರ ಪ್ರೇಮ ಸ್ನೇಹ ವಾತ್ಸಲ್ಯ
ಮಾತಾಪಿತೃ ಗುರು ಭಕ್ತಿಗಳು
ಮಾನವೀಯ ಸಂಬಂಧಗಳು
ಅಂತರಂಗ ಶುದ್ದಿ ಆಚಾರ ವಿಚಾರ
ಎಲ್ಲಾ ಎಲ್ಲಾ ಈ ಬಿರುಗಾಳಿಯಲ್ಲಿ
ತೂರಿ ಹೋಗಿವೆ
ಬಣ್ಣ ಬಣ್ಣದ ಗರಿಗಳ ಜಾನಪದ ಹಕ್ಕಿಗಳು
ಅನಾದಿ ಕಾಲದಿಂದ ನಮ್ಮಂಗಳದಲ್ಲಿ
ಆಡಿಕೊಂಡಿದ್ದವು
ಅವು ಬೆದರಿ ಕಂಗಾಲಾಗಿ
ಆಕಾಶಕ್ಕೆ ಹಾರಿದವು
ನೀತಿ ನಿಯಮ ಸಂಯಮ ಸೌಜನ್ಯಗಳ
ದಾರಗಳು ಫಟ್ ಫಟ್ಟೆಂದು ಕಿತ್ತಿ ಹೋದವು
ದೇಶೀ ಊಟ ಪಾಟ ಉಡಿಗೆ ತೊಡಿಗೆಗಳು
ಅಯ್ಯೋ ಪರದೇಶಿಯಾದವು
ರೋಡ್ ರೋಲರ್ ಡಾಲರ್ ದಾಳಿಯಡಿ
ಕೋಮಲಭಾವಗಳ ಹಸುಗೂಸು ಕಂದಮ್ಮಗಳು
ಪುಟಾಣಿ ಹೂಗಿಡಗಳು ಮೊಳಕೆಗಳು
ಅಪ್ಪಚ್ಚಿಯಾಗಿ ಹೋದವು
ನಮ್ಮದೆಯು ಹೆಮ್ಮೆಯಿಂದ ಬೀಗುತ್ತಿದ್ದ
ಇತಿಹಾಸ ಪುರುಷರು ಅವರ ಆದರ್ಶಗಳು
ತ್ಯಾಗ ಬಲಿದಾನ ಸೇವೆಗಳ ಕತೆಗಳು
ವೀರ ವಿದ್ಯುನ್ಮಣಿಗಳು ಧೀರ ವಿದ್ವನ್ಮಣಿಗಳು
ದಾಸರು ಶರಣರು ಸಂತರು
ಕವಿವರೇಣ್ಯರ ದಿವ್ಯವಾಣಿಗಳು
ಶಿಲ್ಪ ಚಿತ್ರ ನಾಟ್ಯಾದಿ ಕಲಾಕುಸುಮಗಳು
ನೆಮ್ಮದಿಯ ಗೂಡಿನಲ್ಲಿ ಬೆಚ್ಚಗಿದ್ದ
ಹಕ್ಕಿಗಳು ಎಲ್ಲ ಎಲ್ಲ ಮನದ ಪರದೆಯಿಂದ ಮಾಯವಾಗಿವೆ
ಎಂಥೆಂಥ ಚಂಡಮಾರುತಗಳಿಗೂ
ಅಲ್ಲಾಡದ ಗಾಜಿನ ಬುರುಡೆಯೊಳಗಿನ
ನಂದಾ ದೀಪದಂತಿದ್ದ ಆತ್ಮ ಚಿಂತನ
ಪರಲೋಕ ಧ್ಯಾನದ ಹಣತೆ
ನೆಲಕ್ಕುರುಳಿ ಹೋಗಿ
ಕಮಟು ಹೊಗೆ ವಾಸನೆ ಮಾತ್ರ
ಗಾಳಿಯಲ್ಲಿ ಹರಡಿ ಕರಗಿ ಹೋಗಿದೆ
ಮಾನವರೆಲ್ಲ ಬುರುಗು ಭೋಗದ
ಮೆರಗು ಮಾಯೆಯ ನೋಟು ಗಿಲೀಟಿನ
ಷೋಕಿ ಸುಖಲೋಲುಪ್ತಿಯ ದಟ್ಟ
ಪಡುವಲ ಬಿರುಗಾಳಿಗೆ ಸಿಕ್ಕು
ತರಗೆಲೆಗಳಾಗಿದ್ದಾರೆ….
ಓಡಾಡುವ ಬೆಂತರಗಳಾಗಿದ್ದಾರೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...