Home / ಕವನ / ಕವಿತೆ / ಡಾಲರ್ ಬಿರುಗಾಳಿ

ಡಾಲರ್ ಬಿರುಗಾಳಿ

ಪಶ್ಚಿಮದಿಂದೆದ್ದ ಹೊಸ ಬಿರುಗಾಳಿ
ಪೂರ್ವವನ್ನೆಲ್ಲ ಹಾರಿಸಿ ಧೂಳಿಪಟ ಮಾಡಿದೆ
ಕಾಣುತ್ತಿಲ್ಲ ಅಶ್ವಿನಿ ಭರಣಿ ಕೃತ್ತಿಕೆಯರು
ಮಾಯವಾಗಿವೆ ಧ್ರುವ ನಕ್ಷತ್ರ ಸಪ್ತರ್ಷಿಮಂಡಲ
ಋತವ ಸಾರಿದ ವೇದ ಉಷನಿಷತ್ತುಗಳು
ಕಣ್ಮರೆಯಾದವು ಸದ್ದುಗದ್ದಲದಲ್ಲಿ
ಏಕಪತ್ನೀವ್ರತಸ್ಥ ಬೆಡಗಿಯರ ಬೆಂಬತ್ತಿದ್ದಾನೆ
ಸಹನೆ ತಾಳ್ಮೆ ಎಂದು ಕನವರಿಸಿದ ಧರ್ಮ
ಯಾರಿಗೂ ಬೇಡವಾದ ಜಡ ಕರ್ಮ
ಅಹಿಂಸೆ ಪರಧರ್ಮ ಎಂದ ಸಿದ್ಧಾಂತಗಳು
ಕಾಲು ಕಸ ಕೊಳೆತ ತಿಪ್ಪೆಗಳು
ಆಧ್ಯಾತ್ಮ ವೈರಾಗ್ಯ ತ್ಯಾಗ ಭಕ್ತಿ
ಜಪ ತಪಾದಿಗಳು ಪಾಚಿ ಗಟ್ಟಿಹೋಗಿವೆ
ಪಾತಿವ್ರತ್ಯ ಸೋದರ ಪ್ರೇಮ ಸ್ನೇಹ ವಾತ್ಸಲ್ಯ
ಮಾತಾಪಿತೃ ಗುರು ಭಕ್ತಿಗಳು
ಮಾನವೀಯ ಸಂಬಂಧಗಳು
ಅಂತರಂಗ ಶುದ್ದಿ ಆಚಾರ ವಿಚಾರ
ಎಲ್ಲಾ ಎಲ್ಲಾ ಈ ಬಿರುಗಾಳಿಯಲ್ಲಿ
ತೂರಿ ಹೋಗಿವೆ
ಬಣ್ಣ ಬಣ್ಣದ ಗರಿಗಳ ಜಾನಪದ ಹಕ್ಕಿಗಳು
ಅನಾದಿ ಕಾಲದಿಂದ ನಮ್ಮಂಗಳದಲ್ಲಿ
ಆಡಿಕೊಂಡಿದ್ದವು
ಅವು ಬೆದರಿ ಕಂಗಾಲಾಗಿ
ಆಕಾಶಕ್ಕೆ ಹಾರಿದವು
ನೀತಿ ನಿಯಮ ಸಂಯಮ ಸೌಜನ್ಯಗಳ
ದಾರಗಳು ಫಟ್ ಫಟ್ಟೆಂದು ಕಿತ್ತಿ ಹೋದವು
ದೇಶೀ ಊಟ ಪಾಟ ಉಡಿಗೆ ತೊಡಿಗೆಗಳು
ಅಯ್ಯೋ ಪರದೇಶಿಯಾದವು
ರೋಡ್ ರೋಲರ್ ಡಾಲರ್ ದಾಳಿಯಡಿ
ಕೋಮಲಭಾವಗಳ ಹಸುಗೂಸು ಕಂದಮ್ಮಗಳು
ಪುಟಾಣಿ ಹೂಗಿಡಗಳು ಮೊಳಕೆಗಳು
ಅಪ್ಪಚ್ಚಿಯಾಗಿ ಹೋದವು
ನಮ್ಮದೆಯು ಹೆಮ್ಮೆಯಿಂದ ಬೀಗುತ್ತಿದ್ದ
ಇತಿಹಾಸ ಪುರುಷರು ಅವರ ಆದರ್ಶಗಳು
ತ್ಯಾಗ ಬಲಿದಾನ ಸೇವೆಗಳ ಕತೆಗಳು
ವೀರ ವಿದ್ಯುನ್ಮಣಿಗಳು ಧೀರ ವಿದ್ವನ್ಮಣಿಗಳು
ದಾಸರು ಶರಣರು ಸಂತರು
ಕವಿವರೇಣ್ಯರ ದಿವ್ಯವಾಣಿಗಳು
ಶಿಲ್ಪ ಚಿತ್ರ ನಾಟ್ಯಾದಿ ಕಲಾಕುಸುಮಗಳು
ನೆಮ್ಮದಿಯ ಗೂಡಿನಲ್ಲಿ ಬೆಚ್ಚಗಿದ್ದ
ಹಕ್ಕಿಗಳು ಎಲ್ಲ ಎಲ್ಲ ಮನದ ಪರದೆಯಿಂದ ಮಾಯವಾಗಿವೆ
ಎಂಥೆಂಥ ಚಂಡಮಾರುತಗಳಿಗೂ
ಅಲ್ಲಾಡದ ಗಾಜಿನ ಬುರುಡೆಯೊಳಗಿನ
ನಂದಾ ದೀಪದಂತಿದ್ದ ಆತ್ಮ ಚಿಂತನ
ಪರಲೋಕ ಧ್ಯಾನದ ಹಣತೆ
ನೆಲಕ್ಕುರುಳಿ ಹೋಗಿ
ಕಮಟು ಹೊಗೆ ವಾಸನೆ ಮಾತ್ರ
ಗಾಳಿಯಲ್ಲಿ ಹರಡಿ ಕರಗಿ ಹೋಗಿದೆ
ಮಾನವರೆಲ್ಲ ಬುರುಗು ಭೋಗದ
ಮೆರಗು ಮಾಯೆಯ ನೋಟು ಗಿಲೀಟಿನ
ಷೋಕಿ ಸುಖಲೋಲುಪ್ತಿಯ ದಟ್ಟ
ಪಡುವಲ ಬಿರುಗಾಳಿಗೆ ಸಿಕ್ಕು
ತರಗೆಲೆಗಳಾಗಿದ್ದಾರೆ….
ಓಡಾಡುವ ಬೆಂತರಗಳಾಗಿದ್ದಾರೆ
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...