ಯುಗಧರ್ಮದ ಹಕ್ಕಿ

ಹಕ್ಕಿಯೊಂದು ಮೇಲೆ ಹಾರಿ ತೇಲಿಹೋಯಿತು
ಚಿಕ್ಕಿಯಾಗಿ ಬಾನಿನಲ್ಲಿ ಸೇರಿ ಹೋಯಿತು

ಇದೇ ಮಣ್ಣಿನಲಿ ಹುಟ್ಟಿ ರೆಕ್ಕೆ ಪುಕ್ಕಗಳನು ತಳೆದು
ಬಿಳಿಯ ಹಂಸವಾಗಿ ಮಹಿಮೆ ಪಡೆದುಕೊಂಡಿತು
ಹದ್ದು ಕಾಗೆ ಗೂಗೆಗಳಲೆ ಬೆಳೆದು ನಿಂತಿತು
ಎನಿತೊ ಬೆಳ್ಳಕ್ಕಿಗಳನು ಸೃಷ್ಟಿ ಮಾಡಿತು

ಯುಗಯುಗಳ ಜನಮನದಲಿ ತತ್ತಿ ಮೂಡಿ ಕಾವು ಕುಳಿತು
ಯುಗಧರ್ಮದ ಸಾರ ರೂಪ ಹಕ್ಕಿಯಾಯಿತು
ಊರು ಸೀಮೆ ನಾಡು ದೇಶಗಳನು ಮೀರಿತು
ಭೂಮಂಡಲದ ಉದ್ದಗಲಕು ಬೆಳೆದು ನಿಂತಿತು

ಮತಮತಗಳ ಗೂಡುಗಳನು ದಾಟಿ ಮೇಲೆ ಕುಳಿತುಕೊಂಡು
ಎಲ್ಲ ಹಕ್ಕಿಗಳನೊಂದೇ ಬಾನಂಗಳಕೆ ಕರೆದುಕೊಂಡು
ಮಾನವತೆಯ ಮಂತ್ರದಲ್ಲಿ ಮೋಡಿ ಮಾಡಿತು
ಬಂಧನ ಬೇಡಿಯ ಕಳಚಲು ದಾರಿ ಮಾಡಿತು

ಮೂಡಣ ಪಡುವಣದಗಲಕು ತನ್ನ ರೆಕ್ಕೆಗಳನು ಚಾಚಿ
ಬಿಳಿಯ ಕರಿಯ ಬಣ್ಣಗಳನು ಗೌಣ ಮಾಡಿತು
ಒಳಗಿನಂತರಂಗ ತಂತಿ ಮೀಟಿ ಒಂದೆ ರಾಗ ಹಾಡಿ
ಹಿಂಸೆ ಕ್ರೌರ್ಯಗಳಿಗೆ ಎದುರು ಮಾರ್ಗ ತೋರಿತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಕೃತಿ
Next post ಚಂದ್ರನ ಚಾಳಿ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…