Home / ಬಾಲ ಚಿಲುಮೆ / ಕವಿತೆ / ಕನ್ನಡಿತಿ

ಕನ್ನಡಿತಿ

ಆಗ
ಭಾರತೀಯ ನಾರಿನ ಮಣಭಾರದ ಪಟ್ಟಾವಳಿಯನುಟ್ಟು
ಬಗೆಬಗೆಯಲಂಕಾರದದೊಡವೆಗಳನಿಟ್ಟು
ಭಾರಕ್ಕೆ ಬೆನ್ನುಬಾಗಿ, ಮೂಗಿನ ಗಾಡಿನತ್ತಿನಿಂದ ಕತ್ತು ಬಾಗಿ,
ಪಾದಪಾದಗಳಲ್ಲಿ ವೃತ್ತ ವೃತ್ತಾಕಾರದ ಕಡಗ ಕಂಕಣಗಳಿಂದ
ಛಂದೋ ಬದ್ಧ ಶಾಸ್ತ್ರ್‍ಈಯ ನಾಟ್ಯವಾಡಲು ಸೆಣಸುತಿದ್ದೆ,
ಬೆವರಿ ಬಿಳಿಚಿಕೊಂಡು ನಿರ್ಜೀವವಾಗಿ ರಸಹೀನವಾಗಿದ್ದರೂ
ಅಷ್ಟಾವಕ್ರವಾಗಿ ವಕ್ರಮತಿಯ ಸಂತೃಪ್ತಿಪಡಿಸುತ್ತಿದ್ದೆ
ಈಗ
ಪರದೇಶಿ ಬಟ್ಟೆಗಳ ಮೈಕಾಣುವಂತೆ ಉಟ್ಟು
ಮೀಸೆ ಚಿಗುರಿದ ಹರೆಯವು ಬೀದಿಯಲ್ಲಿ ಕಂಡು ಕಣ್ಣು
ಹೊಡೆಯುವಂತೆ,
ಅದರ ಹುರುಪನನುರಿಸಲು ಕೈಕಾಲು ಮಣಿಸಿ
ಸ್ವಚ್ಛಂದವಾಗಿ ಕುಣಿಯುತ್ತಿರುವೆ
ನಾಗರಿಕತೆಯ ಬಣ್ಣ ಗೊಂಬೆಯಾಗಿ,
ಹಳ್ಳಿಗರ ಮಣ್ಣ ಮೂರ್ತಿಯಾಗಿ,
ಹಣವಂತ ಬಿಳಿಯರ ದಾಸಿಯಾಗಿ,
ಕಲಿತವರ ಮನೆಯ ಕಾಲಕಸವಾಗಿ
ಮುಂದೋಡುವವರ ಹೆಜ್ಜೆಗಳನನುಸರಿಸಲಾಗದ
ಮಾತುಬಾರದ ಮೂಕಿಯೆಂದು ಮೂದೇವಿಯೆಂದು
ಮೂತಿ ಮೂತಿ ತಿವಿಸಿಕೊಂಡು
ಹಾಗೂ ಹೀಗೂ ಕಲಬೆರಕೆ ಕಲೆ ಕಲಿತು
ಪರದೆಯ ಮೇಲಾಡುವ ವೇಶ್ಯಾಗರತಿಯಾಗಿ
ಬೇರೆ ಬೇರೆ ಮಠಗಳ ಬೇರೆ ಬೇರೆ ಮುದ್ರೆಯೊತ್ತಿಸಿಕೊಂಡು
ಅವರನ್ನಿವರು ಇವರನ್ನವರು ಹೊಗಳಿ
ಬೇಡವಾದವರ ತೆಗಳಿ ಬೊಗಳಿ
ಹೊಸ ಮಾಲೆಂದು ಪೇಟೆಯಲ್ಲಿ ಮಾರಲಿಟ್ಟ
ಬೆಡಗಿನ ಸರಕಾಗಿ ಮೆರೆಯುತ್ತಿರುವೆ
ಈ ಗೊಂದಲ ಪುರದಲ್ಲಿ
ನಿನ್ನ ನೈಜರೂಪ ಯಾವುದು
ತೋರಿಸಬಾರದೇ
*****
(೨೨-೮-೭೭)

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...