Home / ಬಾಲ ಚಿಲುಮೆ / ಕವಿತೆ / ಕನ್ನಡಿತಿ

ಕನ್ನಡಿತಿ

ಆಗ
ಭಾರತೀಯ ನಾರಿನ ಮಣಭಾರದ ಪಟ್ಟಾವಳಿಯನುಟ್ಟು
ಬಗೆಬಗೆಯಲಂಕಾರದದೊಡವೆಗಳನಿಟ್ಟು
ಭಾರಕ್ಕೆ ಬೆನ್ನುಬಾಗಿ, ಮೂಗಿನ ಗಾಡಿನತ್ತಿನಿಂದ ಕತ್ತು ಬಾಗಿ,
ಪಾದಪಾದಗಳಲ್ಲಿ ವೃತ್ತ ವೃತ್ತಾಕಾರದ ಕಡಗ ಕಂಕಣಗಳಿಂದ
ಛಂದೋ ಬದ್ಧ ಶಾಸ್ತ್ರ್‍ಈಯ ನಾಟ್ಯವಾಡಲು ಸೆಣಸುತಿದ್ದೆ,
ಬೆವರಿ ಬಿಳಿಚಿಕೊಂಡು ನಿರ್ಜೀವವಾಗಿ ರಸಹೀನವಾಗಿದ್ದರೂ
ಅಷ್ಟಾವಕ್ರವಾಗಿ ವಕ್ರಮತಿಯ ಸಂತೃಪ್ತಿಪಡಿಸುತ್ತಿದ್ದೆ
ಈಗ
ಪರದೇಶಿ ಬಟ್ಟೆಗಳ ಮೈಕಾಣುವಂತೆ ಉಟ್ಟು
ಮೀಸೆ ಚಿಗುರಿದ ಹರೆಯವು ಬೀದಿಯಲ್ಲಿ ಕಂಡು ಕಣ್ಣು
ಹೊಡೆಯುವಂತೆ,
ಅದರ ಹುರುಪನನುರಿಸಲು ಕೈಕಾಲು ಮಣಿಸಿ
ಸ್ವಚ್ಛಂದವಾಗಿ ಕುಣಿಯುತ್ತಿರುವೆ
ನಾಗರಿಕತೆಯ ಬಣ್ಣ ಗೊಂಬೆಯಾಗಿ,
ಹಳ್ಳಿಗರ ಮಣ್ಣ ಮೂರ್ತಿಯಾಗಿ,
ಹಣವಂತ ಬಿಳಿಯರ ದಾಸಿಯಾಗಿ,
ಕಲಿತವರ ಮನೆಯ ಕಾಲಕಸವಾಗಿ
ಮುಂದೋಡುವವರ ಹೆಜ್ಜೆಗಳನನುಸರಿಸಲಾಗದ
ಮಾತುಬಾರದ ಮೂಕಿಯೆಂದು ಮೂದೇವಿಯೆಂದು
ಮೂತಿ ಮೂತಿ ತಿವಿಸಿಕೊಂಡು
ಹಾಗೂ ಹೀಗೂ ಕಲಬೆರಕೆ ಕಲೆ ಕಲಿತು
ಪರದೆಯ ಮೇಲಾಡುವ ವೇಶ್ಯಾಗರತಿಯಾಗಿ
ಬೇರೆ ಬೇರೆ ಮಠಗಳ ಬೇರೆ ಬೇರೆ ಮುದ್ರೆಯೊತ್ತಿಸಿಕೊಂಡು
ಅವರನ್ನಿವರು ಇವರನ್ನವರು ಹೊಗಳಿ
ಬೇಡವಾದವರ ತೆಗಳಿ ಬೊಗಳಿ
ಹೊಸ ಮಾಲೆಂದು ಪೇಟೆಯಲ್ಲಿ ಮಾರಲಿಟ್ಟ
ಬೆಡಗಿನ ಸರಕಾಗಿ ಮೆರೆಯುತ್ತಿರುವೆ
ಈ ಗೊಂದಲ ಪುರದಲ್ಲಿ
ನಿನ್ನ ನೈಜರೂಪ ಯಾವುದು
ತೋರಿಸಬಾರದೇ
*****
(೨೨-೮-೭೭)

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...