Home / ಬಾಲ ಚಿಲುಮೆ / ಕವಿತೆ / ಕನ್ನಡಿತಿ

ಕನ್ನಡಿತಿ

ಆಗ
ಭಾರತೀಯ ನಾರಿನ ಮಣಭಾರದ ಪಟ್ಟಾವಳಿಯನುಟ್ಟು
ಬಗೆಬಗೆಯಲಂಕಾರದದೊಡವೆಗಳನಿಟ್ಟು
ಭಾರಕ್ಕೆ ಬೆನ್ನುಬಾಗಿ, ಮೂಗಿನ ಗಾಡಿನತ್ತಿನಿಂದ ಕತ್ತು ಬಾಗಿ,
ಪಾದಪಾದಗಳಲ್ಲಿ ವೃತ್ತ ವೃತ್ತಾಕಾರದ ಕಡಗ ಕಂಕಣಗಳಿಂದ
ಛಂದೋ ಬದ್ಧ ಶಾಸ್ತ್ರ್‍ಈಯ ನಾಟ್ಯವಾಡಲು ಸೆಣಸುತಿದ್ದೆ,
ಬೆವರಿ ಬಿಳಿಚಿಕೊಂಡು ನಿರ್ಜೀವವಾಗಿ ರಸಹೀನವಾಗಿದ್ದರೂ
ಅಷ್ಟಾವಕ್ರವಾಗಿ ವಕ್ರಮತಿಯ ಸಂತೃಪ್ತಿಪಡಿಸುತ್ತಿದ್ದೆ
ಈಗ
ಪರದೇಶಿ ಬಟ್ಟೆಗಳ ಮೈಕಾಣುವಂತೆ ಉಟ್ಟು
ಮೀಸೆ ಚಿಗುರಿದ ಹರೆಯವು ಬೀದಿಯಲ್ಲಿ ಕಂಡು ಕಣ್ಣು
ಹೊಡೆಯುವಂತೆ,
ಅದರ ಹುರುಪನನುರಿಸಲು ಕೈಕಾಲು ಮಣಿಸಿ
ಸ್ವಚ್ಛಂದವಾಗಿ ಕುಣಿಯುತ್ತಿರುವೆ
ನಾಗರಿಕತೆಯ ಬಣ್ಣ ಗೊಂಬೆಯಾಗಿ,
ಹಳ್ಳಿಗರ ಮಣ್ಣ ಮೂರ್ತಿಯಾಗಿ,
ಹಣವಂತ ಬಿಳಿಯರ ದಾಸಿಯಾಗಿ,
ಕಲಿತವರ ಮನೆಯ ಕಾಲಕಸವಾಗಿ
ಮುಂದೋಡುವವರ ಹೆಜ್ಜೆಗಳನನುಸರಿಸಲಾಗದ
ಮಾತುಬಾರದ ಮೂಕಿಯೆಂದು ಮೂದೇವಿಯೆಂದು
ಮೂತಿ ಮೂತಿ ತಿವಿಸಿಕೊಂಡು
ಹಾಗೂ ಹೀಗೂ ಕಲಬೆರಕೆ ಕಲೆ ಕಲಿತು
ಪರದೆಯ ಮೇಲಾಡುವ ವೇಶ್ಯಾಗರತಿಯಾಗಿ
ಬೇರೆ ಬೇರೆ ಮಠಗಳ ಬೇರೆ ಬೇರೆ ಮುದ್ರೆಯೊತ್ತಿಸಿಕೊಂಡು
ಅವರನ್ನಿವರು ಇವರನ್ನವರು ಹೊಗಳಿ
ಬೇಡವಾದವರ ತೆಗಳಿ ಬೊಗಳಿ
ಹೊಸ ಮಾಲೆಂದು ಪೇಟೆಯಲ್ಲಿ ಮಾರಲಿಟ್ಟ
ಬೆಡಗಿನ ಸರಕಾಗಿ ಮೆರೆಯುತ್ತಿರುವೆ
ಈ ಗೊಂದಲ ಪುರದಲ್ಲಿ
ನಿನ್ನ ನೈಜರೂಪ ಯಾವುದು
ತೋರಿಸಬಾರದೇ
*****
(೨೨-೮-೭೭)

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್