ನೋಡೋಣ ಬಾ ಹುಲಗೂರ ಸಂತಿ

ನೋಡೋಣ ಬಾ ಗೆಳತಿ
ನಾಡೋಳ್ ಹುಲಗೂರ ಸಂತಿ
ಬಾಡ ಮಾರವಳ ಬಡಿವಾರ ಬಹಳೈತಿ ||ಪ||

ಜೋಡಬಿಲ್ಲಿ ದುಡ್ಡಿಗೊಂದು
ಸಿವಡು ಕೋತಂಬರಿಯ ಕೊಡಲು
ಬೇಡಿಕೊಳ್ಳುತ ನಿಂತರೆ ಮಾತಾಡಳೋ ಮುಖ ನೋಡಳೋ ||ಅ.ಪ.||

ಸರಸಾದ ಪ್ಯಾಟಿಯು ಮೆರೆವದು ಕೋಟಿಯು
ವರ ರಸವರ್ಗ ಫಲಗಳು ಸುರಹಿದಂತಿಹವು
ಕರಿಯ ಕುಂಬಳ ಬದನಿ ಬೆಂಡಿ
ಸರಸ ಮೆಣಸಿನಕಾಯಿ
ಹರವಿ ಮೆಂತೆ ಚವಳಿಕಾಯಿಗೆ
ಕರವನೆತ್ತುತ ಬೇಡಿಕೊಳ್ಳಲು ಕೇಳಳೋ ತಾ ತಾಳಳೋ ||೧||

ಎಷ್ಟಂತ ಹೇಳಲಿ ಸೃಷ್ಟಿಯೊಳಗ ಬಹು
ಖೊಟ್ಟಿತನದ ಬುದ್ದಿಯೆನ್ನ ನೋಡಿತ್ತ
ಮೀರಿದುನ್ಮನಿಯನು ಸೇರಿತ್ತ
ದೇವರಮನಿ ಮೂಲೆಯೊಳಿತ್ತ
ಭಾವಶುದ್ಧದಿ ಕುಳತಿತ್ತ
ಊರ್ಧ್ವಮುಖವ ತಾ ಮಾಡಿತ್ತ
ಸ್ಥೂಲ ದೇಹದೊಳಡಗಿತ್ತ ಕಾಲಕರ್ಮವನು ನುಂಗಿತ್ತ
ದೇವ ಶಿಶುನಾಳೇಶನ ಸುತ್ತ ಧ್ಯಾನದೊಳಗೆ ತಾನಿರುತಿತ್ತ
ಕಚ್ಚಿದರೆಚ್ಚರವಾದೀತ ||೨||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಲ್ಲು ಮನವೆ
Next post ಭೂಮಿಕೆ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

cheap jordans|wholesale air max|wholesale jordans|wholesale jewelry|wholesale jerseys