ನಾ ಕಂಡೆನೀಗ ಶಾಕಾಂಬರಿಯಾ

ನಾ ಕಂಡೆನೀಗ ಶಾಕಾಂಬರಿಯಾ
-ಶಿಶುನಾಳ ಶರೀಫ್

ನಾ ಕಂಡನೀಗ ಶಾಕಂಬರಿಯಾ
ಶಾಂಬವಿ ಶಂಕರಿಯಾ ||ಪ||

ನಾಕದಿಂದಿಳಿದು ಭೂತಳದಿ ಭಕ್ತರನು
ನೀ ಕಾಯಬೇಕೆಂದೆನುತ ವಿಲಾಸದಿ
ಲೋಕಮಾತೆ ಜಗನ್ಮಾತೆ
ಚಾಕಲಬ್ಬಿ ಕೆರೆ ಪೂರ್ವಭಾಗದಲಿ ||೧||

ಸಿಂಹನೇರಿ ಗಮಿಸುವ ದೇವ
ವಾಹವ್ವರೆ ಮಮ್ಮಾಯಿ ಕ್ಲಿಂಬಿ
ಜಲಕ್ಷರಿ ಹಂಮಳೆ ಮಹಾಂಕಾಳಿ ||೨||

ಶುಂಭ ನಿಶುಂಭರ ಕುಲಸಂಹರಳೆ
ಅಂಬಿಕೇಶ ತ್ರಿಯಂಬಕನರಸಿಯೆ
ಇಂಬುಗೊಡದೆ ಎನ್ನಾತ್ಮ ತನುವಿನೊಳು ||೩||

ಶಿಶುನಾಳಧೀಶನ ಸೇವಕನಿಂದು ನಿನ್ನ ಸೇವೆಗೆ ಬಂದೆ
ಹಸಿತವಚನದಿಂ ಉಸುರುವೆ ಕವಿತವ
ಅಸಮಗಾತ್ರಿ ಶಶಿನೇತ್ರಿ ದಯಾನಿಧಿ
ರಸಿಕರಾಜಗೋವಿಂದನವನೊಡನೆ
ಹುಸಿ ಎಲ್ಲವು ನಿಜಬೋಧದಿ ಸ್ತುತಿಸುವೆ ||೪||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಹಿ ಪರಬ್ರಹ್ಮಣಿ ತ್ರಾಣಿ
Next post ದೇವಿ ನಿನ್ನ ಸೇವಕನೆಂದು

ಸಣ್ಣ ಕತೆ

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…