ನಾ ಕಂಡೆನೀಗ ಶಾಕಾಂಬರಿಯಾ

ನಾ ಕಂಡೆನೀಗ ಶಾಕಾಂಬರಿಯಾ
-ಶಿಶುನಾಳ ಶರೀಫ್

ನಾ ಕಂಡನೀಗ ಶಾಕಂಬರಿಯಾ
ಶಾಂಬವಿ ಶಂಕರಿಯಾ ||ಪ||

ನಾಕದಿಂದಿಳಿದು ಭೂತಳದಿ ಭಕ್ತರನು
ನೀ ಕಾಯಬೇಕೆಂದೆನುತ ವಿಲಾಸದಿ
ಲೋಕಮಾತೆ ಜಗನ್ಮಾತೆ
ಚಾಕಲಬ್ಬಿ ಕೆರೆ ಪೂರ್ವಭಾಗದಲಿ ||೧||

ಸಿಂಹನೇರಿ ಗಮಿಸುವ ದೇವ
ವಾಹವ್ವರೆ ಮಮ್ಮಾಯಿ ಕ್ಲಿಂಬಿ
ಜಲಕ್ಷರಿ ಹಂಮಳೆ ಮಹಾಂಕಾಳಿ ||೨||

ಶುಂಭ ನಿಶುಂಭರ ಕುಲಸಂಹರಳೆ
ಅಂಬಿಕೇಶ ತ್ರಿಯಂಬಕನರಸಿಯೆ
ಇಂಬುಗೊಡದೆ ಎನ್ನಾತ್ಮ ತನುವಿನೊಳು ||೩||

ಶಿಶುನಾಳಧೀಶನ ಸೇವಕನಿಂದು ನಿನ್ನ ಸೇವೆಗೆ ಬಂದೆ
ಹಸಿತವಚನದಿಂ ಉಸುರುವೆ ಕವಿತವ
ಅಸಮಗಾತ್ರಿ ಶಶಿನೇತ್ರಿ ದಯಾನಿಧಿ
ರಸಿಕರಾಜಗೋವಿಂದನವನೊಡನೆ
ಹುಸಿ ಎಲ್ಲವು ನಿಜಬೋಧದಿ ಸ್ತುತಿಸುವೆ ||೪||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಹಿ ಪರಬ್ರಹ್ಮಣಿ ತ್ರಾಣಿ
Next post ದೇವಿ ನಿನ್ನ ಸೇವಕನೆಂದು

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…