ಪಾಹಿ ಪರಬ್ರಹ್ಮಣಿ ತ್ರಾಣಿ

ಪಾಹಿ ಪರಬ್ರಹ್ಂಣಿ ತ್ರಾಣಿ
ಪಾಹಿ ಪರಬ್ರಹ್ಮಣಿ                            ||ಪ||

ಸೇವಿತ ಕಿಂಕರ ಸದಾ ಪರಜೀವ ಸದ್ಗುರು ಭಾವನಾತ್ಮಳೆ
ದೇವಿ ಪರಾತ್ಪರ ಕಾಯ್ವುದೆನ್ನ ಸದಾವಕಾಲದಿ            ||೧||

ಶುಂಭ ನಿಶುಂಭ ಸಂಹಾರಿಣಿ ನಿಶುಂಭನ ಡಂಬ ಪರಿಹರಿಣಿ
ನಂಬಿ ನಿನ್ನ ಪಾದಾಂಬುಜಕೆ ಕೈ ಇಂಬುಗೊಟ್ಟೆನು ಕರುಣಿಸೆನುತಲಿ    ||೨||

ಶುಂಭರಾರಿಯ ಮನಕೆ ಮೈತುಂಬಿ ನಲಿಯುತ ನೊಲುಮೆಯಿಂದಲಿ
ಕಂಬುಕಂದರೆ ಭಕ್ತಪ್ರೇಮಿಯೆ ನಂಬಿದೆನು ಸದಾವ ಕಾಲದಿ            ||೩||

ವಸುಧೆಪಾಲಕಳೆ ನಿನ್ನ ಅಸಮ ಮಹಿಮೆಯ ಪೊಗಳುವೆ
ವಸುಧೆಯೊಳು ಶಿಶುನಾಳಧೀಶನ ಅಸಮ ಪಾದಕೆ ನುತಿಸಿ ಬೇಡುವೆ        ||೪||
*    *    *    *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನಾಪಮಾನ ನಿನ್ನವಮ್ಮಾ
Next post ನಾ ಕಂಡೆನೀಗ ಶಾಕಾಂಬರಿಯಾ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…