ದೇವಿ ನಿನ್ನ ಸೇವಕನೆಂದು

ದೇವಿ ನಿನ್ನ ಸೇವಕನೆಂದು ಸೇವೆ ಮಾಡುವೆನೆಂದು
ಇಂದು ನಿನ್ನ ಚರಣಗಳನ್ನು ಹೊಂದುವೆ ಒಂದು
ಮಂಮತಿ ನಿನ್ನ ಕಂದನಿಗೆ ಚಂದದಿ ಆನಂದದಿ ನಿನ್ನ
ಕಂದನೆಂದು ಸಲಹು ಇಂದು ||ಪ||

ಮಂಗಲಾಂಗಿ ಕುಂಡಲಾಭರಣಿ
ಪುಂಡ ದೈತ್ಯರನ ಖಂಡಿಸಿ
ಕಡಿದು ತುಂಡ ಮಾಡುತ
ಬಂಡ ಬರಿದೋಡ್ಯಾಡುತಿರೆ
ಡಿಂಡರನು ಚಂಡಾಡುತಿರೆ
ಮಂಡಲದಿ ಮಾನವರು ಮರುಳಾಗಿರೆ ||೧||

ದಶ ಎರಡು ಕರದೊಳು ಪಿಡಿದು
ಶೇಷ ಶಂಖ ಚಕ್ರಾಯುಧಗಳ ಹಿಡಿದು
ಅಷ್ಟದಶದಿಸೆದೊಳಗೆ ಮರೆದು
ಖಡ್ಗ ಕಠಾರಿ ನೀಟಾಗಿ ಹಿಡಿದು
ದಿಗ್ಗಿಲಿಂದ ಬರುವದು ಕಣ್ಣಿನ
ನಡ್ಗಿಗೆ ಮಡ್ಗವಿಸಿದೆ ಯಡ್ಗದರಸಿಗೆ
ಮಡ್ಗದಿ ಬಹು ಚೆಡ್ಗಿನ ಜ್ಙಾನ ನಿಡ್ಗದು ||೨||

ಅಷ್ಟದಿಕ್ಪಾಲಕರು ಎಲ್ಲಾ ನಿಂದು
ಶ್ರೇಷ್ಠದಧಿಪತಿ ನಾಂಟಿನೋಳ್ ನಿಂದು
ಕರಿಯ ಸಿಂಹಗ ವಿಘ್ನಯಷ್ಟೆಂದು
ಎಷ್ಟು ತಾಳಲಿ ದುಷ್ಟ ಮನುಜರ
ದೃಷ್ಟಿ ತೆರೆದು ನೋಡಲು ಇಂದು
ಸೃಷ್ಟಿಯೊಳು ಶಿಶುನಾಳಧೀಶನ
ಪುರದಿ ಮೆರೆಯುವ ಶ್ರೇಷ್ಠದೇವಿ ||೩||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾ ಕಂಡೆನೀಗ ಶಾಕಾಂಬರಿಯಾ
Next post ಹೌದೆ ನಮ್ಮವ್ವ ನೀನು ಹೌದೆ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…