ದೇವಿ ನಿನ್ನ ಸೇವಕನೆಂದು

ದೇವಿ ನಿನ್ನ ಸೇವಕನೆಂದು ಸೇವೆ ಮಾಡುವೆನೆಂದು
ಇಂದು ನಿನ್ನ ಚರಣಗಳನ್ನು ಹೊಂದುವೆ ಒಂದು
ಮಂಮತಿ ನಿನ್ನ ಕಂದನಿಗೆ ಚಂದದಿ ಆನಂದದಿ ನಿನ್ನ
ಕಂದನೆಂದು ಸಲಹು ಇಂದು ||ಪ||

ಮಂಗಲಾಂಗಿ ಕುಂಡಲಾಭರಣಿ
ಪುಂಡ ದೈತ್ಯರನ ಖಂಡಿಸಿ
ಕಡಿದು ತುಂಡ ಮಾಡುತ
ಬಂಡ ಬರಿದೋಡ್ಯಾಡುತಿರೆ
ಡಿಂಡರನು ಚಂಡಾಡುತಿರೆ
ಮಂಡಲದಿ ಮಾನವರು ಮರುಳಾಗಿರೆ ||೧||

ದಶ ಎರಡು ಕರದೊಳು ಪಿಡಿದು
ಶೇಷ ಶಂಖ ಚಕ್ರಾಯುಧಗಳ ಹಿಡಿದು
ಅಷ್ಟದಶದಿಸೆದೊಳಗೆ ಮರೆದು
ಖಡ್ಗ ಕಠಾರಿ ನೀಟಾಗಿ ಹಿಡಿದು
ದಿಗ್ಗಿಲಿಂದ ಬರುವದು ಕಣ್ಣಿನ
ನಡ್ಗಿಗೆ ಮಡ್ಗವಿಸಿದೆ ಯಡ್ಗದರಸಿಗೆ
ಮಡ್ಗದಿ ಬಹು ಚೆಡ್ಗಿನ ಜ್ಙಾನ ನಿಡ್ಗದು ||೨||

ಅಷ್ಟದಿಕ್ಪಾಲಕರು ಎಲ್ಲಾ ನಿಂದು
ಶ್ರೇಷ್ಠದಧಿಪತಿ ನಾಂಟಿನೋಳ್ ನಿಂದು
ಕರಿಯ ಸಿಂಹಗ ವಿಘ್ನಯಷ್ಟೆಂದು
ಎಷ್ಟು ತಾಳಲಿ ದುಷ್ಟ ಮನುಜರ
ದೃಷ್ಟಿ ತೆರೆದು ನೋಡಲು ಇಂದು
ಸೃಷ್ಟಿಯೊಳು ಶಿಶುನಾಳಧೀಶನ
ಪುರದಿ ಮೆರೆಯುವ ಶ್ರೇಷ್ಠದೇವಿ ||೩||
* * * *

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾ ಕಂಡೆನೀಗ ಶಾಕಾಂಬರಿಯಾ
Next post ಹೌದೆ ನಮ್ಮವ್ವ ನೀನು ಹೌದೆ

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys