Home / ಬಾಲ ಚಿಲುಮೆ / ಕವಿತೆ / ತ್ರಿಪದಿಗಳು

ತ್ರಿಪದಿಗಳು

ಅರುಣೋದಯವು ಮುಗಿದು ಮರಿಸೂರ್ಯ ಹೊರಬಂದ
ಥರಥರಾವರಿ ಅವನ ಸೌಂದರ್‍ಯ-ಚಿನ್ನದ
ಹರಿವಾಣದಂತೆ ಹೊಳೆಯುವನು

ಎತ್ತಿ ಬಡಿವನು ಕಂದ ಹತ್ತಿದಿಂಬಿಗೆ ಕಾಲ
ಉಕ್ಕಿ ಬೀಸುವನು ತೋಳನು – ಗಾಳಿಯಲಿ
ಹಕ್ಕಿ ಹಾರುವುದು ಬಾನಲ್ಲಿ!

ಬಣ್ಣ ಬಣ್ಣದ ಟೋಪಿ ತನ್ನ ತಲೆಯಲಿ ಮೆರೆಸಿ
ಚಿಣ್ಣ ಅತ್ತಿತ್ತ ಹೊರಳಿದರೆ-ಕಣ್ಣೆದುರು
ಸಣ್ಣ ನವಿಲೊಂದು ಕುಣಿಯುವುದು!

ಅಮ್ಮುತಾತನಿಗೀಗ ಮೊಮ್ಮಗನೆ ಸರ್ವಸ್ವ
ಹಮ್ಮು ಬಿಮ್ಮಿರದ ಮುಸ್ಸಂಜೆ-ಹಾಡುವನು
ತನ್ನ ದೇವರೆ ಕೈಗೆ ಬಂದಂತೆ!

ಅಮ್ಮುತಾತ ತನ್ನ ಮೊಮ್ಮಗನ ತೋಳಲ್ಲಿ
ಸುಮ್ಮನೇ ತೂಗಿ ಹಾಡಿದರೆ- ಕಂದ ಮೈ
ಜುಮ್ಮೆನ್ನುವಂತೆ ನಕ್ಕಾನು.

ಮೊಮ್ಮಗನ ಆಡಿಸುತ ಅಮ್ಮಗಳ ಕಂಡನು
ಲಕ್ಷ್ಮಿಸತಿ ಸರಸ್ವತೀ ದೇವಿಯರ-ಜೊತೆಯಲ್ಲಿ
ವಿಷ್ಣು ಶಿವ ಬ್ರಹ್ಮ ಜೋತಿಗಳ.

ಅಜ್ಜಿಯೆಂದರೆ ಅಜ್ಜಿ ಸಜ್ಜಿಗೆಗು ಸವಿಯಜ್ಜಿ
ಮಜ್ಜನಕೆ ತೈಲ ಮೈಗುಜ್ಜಿ- ನಗುನಗುತ
ತಿದ್ದುವಳು ಬೆನ್ನು ತೊಡೆ ಹೆಜ್ಜಿ

ಮೊಮ್ಮಗನ ಆಡಿಸುತ ಮೈಸೋತು ಮನಸೋತು
ಸಿಂಹದ ಮರಿಯ ಚೆಲುವಿಗೆ- ಕಣ್‌ಸೋತು
ಅಮ್ಮಮ್ಮ ಅಡಿಗೆ ಮರೆತಾಳು.

ಅಮ್ಮುತಾತ: ಅಮ್ಮನ ತಂದೆ
ಅಮ್ಮಮ್ಮ: ಅಜ್ಜಿ (ಅಮ್ಮನ ಅಮ್ಮ)
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...