Home / ಬಾಲ ಚಿಲುಮೆ / ಕವಿತೆ / ಕಿಟ್ಟು ಮತ್ತು ಬಿರ್ಜು

ಕಿಟ್ಟು ಮತ್ತು ಬಿರ್ಜು

ಒಂದು ದಿನ ಕಿಟ್ಟು ಮನೆಯಲ್ಲೆ ಕೂತಿದ್ದ,
ಮನೆಬೆಕ್ಕು ಬಿರ್ಜುವಿನ ತಲೆ ಸವರುತಿದ್ದ
ತನ್ನ ಕಷ್ಟವ ನೆನೆದು ಅವನಿಗಳು ಬಂತು
“ಯಾಕಳುವೆ ಕಿಟ್ಟು?” ಅಂತ ಬಿರ್ಜು ಕೇಳ್ತು

“ಬಿರ್ಜು ನೀ ಎಷ್ಟೊಂದು ಅದೃಷ್ಟವಂತ!
ಗೊತ್ತಿಲ್ಲ ನಿನಗೆ ಸ್ಕೂಲೆಂದರೇನಂತ,
ನಾನು ದಿನವೂ ಸ್ಕೂಲಿಗ್ಹೋಗಲೇಬೇಕು.
ಮನೆಯಲ್ಲಿ ಹೋಂ ವರ್ಕ್ ಮಾಡಲೇಬೇಕು”.

ಈ ಮಾತನೊಪ್ಪದೆ ಬಿರ್ಜು ಹೀಗಂತು:

“ಕಿಟ್ಟು ನಿಂಗೊತ್ತಿಲ್ಲ ನಾ ಪಡುವ ಕಷ್ಟ,
ಯಾರು ಕೇಳುವರು ನನ್ನಂಥವರ ಇಷ್ಟ?
ನಿನಗೊ ಬಣ್ಣದ ಅಂಗಿ, ಚಡ್ಡಿ, ಗರಿಟೋಪಿ
ಕಾಚ ಕೂಡ ಇಲ್ಲ ನಾನೆಂಥ ಪಾಪಿ!”

ಬಿರ್ಜು ಮಾತಿಗೆ ತಿರುಗಿ ಹೇಳಿದನು ಕಿಟ್ಟು:

“ಅಂಗಡಿಗೆ ಹೋಗಿ ಬಾ ಅಂತಾರೆ ಅಮ್ಮ,
ಹೋಗಲ್ಲ ಅಂದರೆ ಒದಿತಾರೆ ಅಣ್ಣ;
ಆಟಕ್ಕೆ ಎಷ್ಟೂನು ಪುರಸೊತ್ತೆ ಇಲ್ಲ,
ನಿನಗೊ ಕೇಳುವರಿಲ್ಲ ಇಡಿಯ ದಿನವೆಲ್ಲ”.

ನಕ್ಕು ಹೇಳಿತು ಬಿರ್ಜು ಕಿಟ್ಟು ಕಡೆ ತಿರುಗಿ:

“ನನಗೆ ಎಲ್ಲಿದ್ದಾರೆ ಪ್ರೀತಿಸುವ ಅಮ್ಮ,
ಒದ್ದರೂ ಚಿಂತಿಲ್ಲ, ಇರಬೇಕು ಅಣ್ಣ;
ಓದಿ ನೀ ಮುಂದಕ್ಕೆ ಆಫೀಸರಾಗ್ತಿ
ನನಗೊ ಬಾಳೆಲ್ಲ ಇಲಿ ಹಿಡಿಯುವುದೆ ಪ್ರಾಪ್ತಿ!

ಈಗೇನೊ ನನ್ನ ಜೊತೆ ಆಟವಾಡ್ತೀಯ,
ನನ್ನ ಬಿರ್ಜೂ ಅಂತ ಮುದ್ದು ಮಾಡ್ತೀಯ;
ನಿನ್ನ ಹಾಸಿಗೆಯಲ್ಲೆ ಎಳೆದಪ್ಪಿಕೊಂಡು
ಮೈಯ ಸವರುತ್ತಲೇ ನಿದ್ದೆ ಮಾಡ್ತೀಯ

ಮುಂದೆ ದೊಡ್ಡವನಾಗ್ತಿ, ಇಂಗ್ಲೀಷು ಓದಿ
ಕಾರನ್ನು ನಡೆಸೊ ಸಾಹೇಬನಾಗ್ತೀಯ;
ಮನೆಗೆ ಬಂದಾಗ ನಾ ಓಡೋಡಿ ಬಂದ್ರೆ
ಅಡ್ಡ ಬರ್‍ತೀಯ ಶನಿ ಅಂತ ಒದಿತೀಯ”

ಬಿರ್ಜು ಮಾತನು ಕೇಳಿ ಅಳು ಬಂದು ಕಿಟ್ಟು
ಬಾಚಿ ಮುದ್ದಿಸಿ ನುಡಿದ “ಇಲ್ಲ ಕಣೊ ಪುಟ್ಟು,
ನಿನ್ನ ನಾ ಎಂದೂನು ಒದಿಯೋಲ್ಲ ಬಿರ್ಜು
ಕಡೆತನಕ ನನ್ನ ಜೊತೆ ಇದ್ದು ಬಿಡು ಮುದ್ದು.”
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...