Home / ಬಾಲ ಚಿಲುಮೆ / ಕವಿತೆ / ಕಿಟ್ಟು ಮತ್ತು ಬಿರ್ಜು

ಕಿಟ್ಟು ಮತ್ತು ಬಿರ್ಜು

ಒಂದು ದಿನ ಕಿಟ್ಟು ಮನೆಯಲ್ಲೆ ಕೂತಿದ್ದ,
ಮನೆಬೆಕ್ಕು ಬಿರ್ಜುವಿನ ತಲೆ ಸವರುತಿದ್ದ
ತನ್ನ ಕಷ್ಟವ ನೆನೆದು ಅವನಿಗಳು ಬಂತು
“ಯಾಕಳುವೆ ಕಿಟ್ಟು?” ಅಂತ ಬಿರ್ಜು ಕೇಳ್ತು

“ಬಿರ್ಜು ನೀ ಎಷ್ಟೊಂದು ಅದೃಷ್ಟವಂತ!
ಗೊತ್ತಿಲ್ಲ ನಿನಗೆ ಸ್ಕೂಲೆಂದರೇನಂತ,
ನಾನು ದಿನವೂ ಸ್ಕೂಲಿಗ್ಹೋಗಲೇಬೇಕು.
ಮನೆಯಲ್ಲಿ ಹೋಂ ವರ್ಕ್ ಮಾಡಲೇಬೇಕು”.

ಈ ಮಾತನೊಪ್ಪದೆ ಬಿರ್ಜು ಹೀಗಂತು:

“ಕಿಟ್ಟು ನಿಂಗೊತ್ತಿಲ್ಲ ನಾ ಪಡುವ ಕಷ್ಟ,
ಯಾರು ಕೇಳುವರು ನನ್ನಂಥವರ ಇಷ್ಟ?
ನಿನಗೊ ಬಣ್ಣದ ಅಂಗಿ, ಚಡ್ಡಿ, ಗರಿಟೋಪಿ
ಕಾಚ ಕೂಡ ಇಲ್ಲ ನಾನೆಂಥ ಪಾಪಿ!”

ಬಿರ್ಜು ಮಾತಿಗೆ ತಿರುಗಿ ಹೇಳಿದನು ಕಿಟ್ಟು:

“ಅಂಗಡಿಗೆ ಹೋಗಿ ಬಾ ಅಂತಾರೆ ಅಮ್ಮ,
ಹೋಗಲ್ಲ ಅಂದರೆ ಒದಿತಾರೆ ಅಣ್ಣ;
ಆಟಕ್ಕೆ ಎಷ್ಟೂನು ಪುರಸೊತ್ತೆ ಇಲ್ಲ,
ನಿನಗೊ ಕೇಳುವರಿಲ್ಲ ಇಡಿಯ ದಿನವೆಲ್ಲ”.

ನಕ್ಕು ಹೇಳಿತು ಬಿರ್ಜು ಕಿಟ್ಟು ಕಡೆ ತಿರುಗಿ:

“ನನಗೆ ಎಲ್ಲಿದ್ದಾರೆ ಪ್ರೀತಿಸುವ ಅಮ್ಮ,
ಒದ್ದರೂ ಚಿಂತಿಲ್ಲ, ಇರಬೇಕು ಅಣ್ಣ;
ಓದಿ ನೀ ಮುಂದಕ್ಕೆ ಆಫೀಸರಾಗ್ತಿ
ನನಗೊ ಬಾಳೆಲ್ಲ ಇಲಿ ಹಿಡಿಯುವುದೆ ಪ್ರಾಪ್ತಿ!

ಈಗೇನೊ ನನ್ನ ಜೊತೆ ಆಟವಾಡ್ತೀಯ,
ನನ್ನ ಬಿರ್ಜೂ ಅಂತ ಮುದ್ದು ಮಾಡ್ತೀಯ;
ನಿನ್ನ ಹಾಸಿಗೆಯಲ್ಲೆ ಎಳೆದಪ್ಪಿಕೊಂಡು
ಮೈಯ ಸವರುತ್ತಲೇ ನಿದ್ದೆ ಮಾಡ್ತೀಯ

ಮುಂದೆ ದೊಡ್ಡವನಾಗ್ತಿ, ಇಂಗ್ಲೀಷು ಓದಿ
ಕಾರನ್ನು ನಡೆಸೊ ಸಾಹೇಬನಾಗ್ತೀಯ;
ಮನೆಗೆ ಬಂದಾಗ ನಾ ಓಡೋಡಿ ಬಂದ್ರೆ
ಅಡ್ಡ ಬರ್‍ತೀಯ ಶನಿ ಅಂತ ಒದಿತೀಯ”

ಬಿರ್ಜು ಮಾತನು ಕೇಳಿ ಅಳು ಬಂದು ಕಿಟ್ಟು
ಬಾಚಿ ಮುದ್ದಿಸಿ ನುಡಿದ “ಇಲ್ಲ ಕಣೊ ಪುಟ್ಟು,
ನಿನ್ನ ನಾ ಎಂದೂನು ಒದಿಯೋಲ್ಲ ಬಿರ್ಜು
ಕಡೆತನಕ ನನ್ನ ಜೊತೆ ಇದ್ದು ಬಿಡು ಮುದ್ದು.”
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...