Home / ಕವನ / ಕವಿತೆ / ಗರ್ದಿಗಮ್ಮತ್ತು ಮತ್ತು ಹಾಲಿವುಡ್

ಗರ್ದಿಗಮ್ಮತ್ತು ಮತ್ತು ಹಾಲಿವುಡ್

ನಡುರಾತ್ರಿ ಜೋರಾಗಿ
ಮಳೆ ಬೀಳಾಕ ಸುರುವಾಗಿತ್ತು
ಹಾಲಿವುಡ್ ಪಿಕ್ಚರ್ ಅರ್ಧನೋಡಿ
ಆ ಲೋಕದಾಗ ಇದ್ಹಾಂಗ ನಿದ್ದಿ ಹತ್ತಿತ್ತು.

ಅದರ ಕನಸು ಬಿದ್ದದ್ದು
ನಮ್ಮೂರಾಗ ಗರ್ದಿಗಮ್ಮತ್ತಿನ ಪೆಟಗಿಯೊಳಗ
ದಿಲ್ಲಿದರ್ಬಾರ್ ಕುತುಬ್‌ಮಿನಾರ್
ತಾಜಮಹಲ್ ಬಾಂಬೆ ಬಜಾರ್
ಸುರಯ್ಯಾ ನರ್ಗಿಸ್ ರಾಜಕಪೂರರ
ಪ್ರೇಮಾಲಾಪ ನೋಡಿದ್ಹಂಗ-

ನಮ್ಮೂರ ಜಾತ್ರಿಯೊಳಗ ಅಡ್ಡಾಡಿ
ಬೆಂಡು ಬೆತ್ತಾಸ ತಿಂದು ಮಿಂಚೋಬಳಿ
ಕೈ ತುಂಬಾ ಏರಿಸಿಕೊಂಡು
ಮುತ್ತಿನ ಸರಾ ಹಾಕ್ಕೊಂಡು
ಅದರೊಳಗಿನ ಪದಕಾ ಮುಟಗಿಯೊಳಗ
ಹಿಡಕೊಂಡು ಓಡೋಡಿ ಓಡೋಡಿ ಮನಿಗೆ ಬದ್ಹಂಗ-

ಚಕಡಿ ಹತ್ತಿ ಹೊಲಕ ಹೋಗಿ
ಮಾವಿನಕಾಯಿ ಪೇರಲಕಾಯಿ ತಿಂದ
ಬುತ್ತಿ ಉಂಡ ಮ್ಯಾಲ ಮಜ್ಜಿಗಿ ಕುಡದ
ಹೊಲತುಂಬ ಓಡ್ಯಾಡಿ ಕುಣಿದಾಡಿ ಕುಪ್ಪಳಿಸಿದ್ಹಂಗ-

ಜೊಕಾಲಿಯಿಂದ ಬಿದ್ದು ಕಾಲಮುರಕೊಂಡು
ಚಿಗಳಿ ತಿನ್ನೋ ಆಸೇಕ
ಕಂಚಿಗಿಡದ ಮುಳ್ಳ ಚುಚ್ಚಿಸಿಕೊಂಡು
ಬಿಕ್ಕಿಬಿಕ್ಕಿ ಬಿಕ್ಕಿಬಿಕ್ಕಿ ಅತ್ಹಂಗ –

ಮತ್ತ ನಮ್ಮ ಅಜ್ಜಿ ತನ್ನ ಎದ್ಯಾಗೆ
ನನ್ನ ಎಳಕೊಂಡು ರಮಿಸಿ
ಬಣ್ಣದ ನೀರ ಹಾಕಿದ ಬರ್ಫ
ನೀರಲಹಣ್ಣ ಬಾರಿಹಣ್ಣ ಕೊಡಿಸಿ
ಮಾರಾಂವಗ ಗುಳಬುಟ್ಟಿ ತುಂಬ
ಭತ್ತ ಕೊಟ್ಹಂಗ-
ಹಿಂಗ ಇನ್ನೂ ಕನಸಽ ಕನಸ.

ಹಾಲಿವುಡ್ ಪಿಕ್ಚರ್
ಇನ್ನೂ ಅರ್ಧ ನೋಡಬೇಕಾಗಿತ್ತು
ಬೆಳಿಗ್ಗೆ ಊರಿಂದ phoneಬಂತು
ಬಹಳ ವರ್ಷದ ಮ್ಯಾಲ ದೇವಿ ಜಾತ್ರಿ
ಊರಿಗೆ ಎಲ್ಲಾರೂ ಬರ್ರಿ.

ಹಂಗಾದ್ರ ನಾ ರಾತ್ರಿ ಕಂಡದ್ದೆಲ್ಲಾ
ಚೆಂದಾದ ಕನಸು ನನಸಾಗೋದಾದ್ರ
ಮತ್ತೊಮ್ಮೆ ನಾ ಸಣ್ಣ ಹುಡುಗಿಯಾಗಿ
ಗರ್ದಿಗಮ್ಮತ್ತ ನೋಡತೇನಿ ಅಂದ್ರ
ಜೋಕಾಲಿ, ಜಾತ್ರಿ, ಹೊಲ, ಚಕಡಿ
ಅಂತ ಓಡಾಡತೇನಿ ಅಂದ್ರ,

ಈ ಕನಸು ವಿಚಿತ್ರ ಅಲ್ಲದಽ ಮತ್ತಿನ್ನೇನು!!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...