ಬ್ರಿಗೇಡ್ ರಸ್ತೆ

ಎದೆಗುಂಡಿಗೆ ಬಣ್ಣ ಬಣ್ಣ ತುಂಬಿ
ಮೌನ ಮಾತನಾಡಿಯೇ ಬಿಡುವ
ನವಿಲುಗರಿಯೂ ಚಿತ್ತಾರಕೆ ಚಿಗುರಿ
ಮುದುಕರೂ ಹರಯರಾಗುವ ಬೆಂಗಳೂರಿನ
ಬ್ರಿಗೇಡ್ ರಸ್ತೆಗೆ ಮುಪ್ಪಿಲ್ಲ-

ಹದಗೊಳ್ಳುವ ಮನಸುಗಳ ತು೦ಬೆಲ್ಲ
ಕನಸಿನ ಸಾಮ್ರಾಜ್ಯದ ಲಗ್ಗೆ
ದಶದಿಕ್ಕು ದಶಾವತಾರದ ಚಿತ್ತ
ಮಿಂಚು ಸಂಚಾಗುವ ಸಮಯಕೆ
ರಸಿಕ ಕಣ್ಣುಗಳಿಗೊಮ್ಮೊಮ್ಮೆ ಮೋಸ
ಆದರೂ, ಬ್ರಿಗೇಡ್ ರಸ್ತೆಯ ಕೆನ್ನೆಯ ಕೆಂಪು ಮಾಸುವುದಿಲ್ಲ-

ದಿನದಿನವೂ ಅವಿಶ್ರಾಂತ ಕುಣಿತ
ಕೇಳಿಸುವದಿಲ್ಲ ಅಳುವಿನ ಹಸಿವಿನ ಶಬ್ದ
ಸಿರಿವ೦ತರ ಸಿರಿಪಿತ್ತು ಕಂಡೇ
ಕಳ್ಳ ಕದೀಮರಿಗೆ ಜಾತ್ರೆಯ ತೇರು
ಎಳೆದಷ್ಟೂ ಎಳೆದಷ್ಟೂ ಬ್ರಿಗೇಡ್‌ರಸ್ತೆ ಸವೆಯುವುದಿಲ್ಲ.

ಕೋಲ್ಡ್‌ಡ್ರಿಂಕ್ಸ್‌ಗಳಲಿ ಬೆಚ್ಚಗಾಗಿ
ಹಾಟ್ಟ್‌ಪಿಝಾ(Pizza)ಗಳಲಿ ತಣ್ಣಗಾಗುವ ನಗು
ಬೆಚ್ಚನೆಯ ವಿದೇಶಿಮಾಲುಗಳಲಿ
ಮರುಳಾಗುವ ಮೋಜುಗಳು ಜೂಜುಗಳು
ಚಳಿ ಮಳೆ ಬಿಸಿಲಲ್ಲೂ ಖುಷಿಕೊಡುವ
ಬ್ರಿಗೇಡ್ ರಸ್ತೆ ಮುದುರುವದೇ ಇಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು
Next post ಕರೆ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ- ಸರಿ, ಇನ್ನು ಈ ಹುಚ್ಚೊಂದು ನಿಮಗೆ… Read more…