ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ
ಈ ಲೋಕ ಎಷ್ಟು ವಿಚಿತ್ರ-ಆದರೆ ನಿಜವಾಗುತ್ತದೆ!
ಮೊದಲು ಏರುತಗ್ಗುಗಳು ಗೋಚರಿಸುತ್ತವೆ.  ಮತ್ತೆ
ದಿಗಂತಗಳು ಬಳುಕುತ್ತವೆ, ಆಯತಗಳು
ತ್ರಿಕೋಣಗಳಾಗುತ್ತವೆ, ವೃತ್ತಗಳಾಗುತ್ತವೆ.  ಯಾರೂ
ಇದು ತನಕ ಕಲ್ಪಿಸದ ವಿನ್ಯಾಸಗಳು ಕಾಣಿಸುತ್ತವೆ.

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ
ಯಾಕೆ ವಾಮನ ಮಾಸ್ತರರು ತಮ್ಮಷ್ಟಕ್ಕೇ ಮಾತಾಡುತ್ತಾರೆ
ಎಂಬುದಕ್ಕೆ ಕಾರಣ ಸಿಗುತ್ತದೆ.  ನಳನಿಯ ನಾಚಿಕೆ
ಹೇಗೆ ಒಮ್ಮೆಲೆ ನಷ್ಟವಾಯಿತು ಎಂಬುದು ಗೊತ್ತಾಗುತ್ತದೆ.
ಮುಖ್ಯ, ತಾಲೂಕಾಪೀಸು ಯಾಕೆ ತಲೂಕಾಪೀಸಾಗಿದೆ
ಎಂಬುದು ಅರ್ಥವಾಗುತ್ತದೆ.

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡಿದರೆ
ಮನುಷ್ಯರು ಯಾಕೆ ಕಾರಣವಿಲ್ಲದೆ ಭಯಪಡುತ್ತಾರೆ
ಎಂಬುದು ತಿಳಿಯುತ್ತದೆ.  ಯಾವಾಗಲೂ ಕಾಲಮೇಲೇ
ನಡೆಯುವವರು ಕೆಳಗಿನಿಂದ ಮೇಲೆ ನೋಡಲಾರರು.
ಯಾವಾಗಲೂ ಮುಂದೆ ನೋಡುವವರು ಹಿಂದೆ ಕಾಣಲಾರರು.  ಹೀಗಿದ್ದೂ
ಒಪ್ಪಿಕೊಳ್ಳದವರನ್ನು ಇಲ್ಲಿ ತಂದು ನಿಲ್ಲಿಸಿ!

ಒಂದು ಬೂದುಗುಂಬಳಕಾಯಿಯ ಮೇಲೆ ನಿಂತು ನೋಡುವುದೆಂದರೆ
ನಾವು ನಮ್ಮನ್ನು ನಿಜವಾದ ಸಂದರ್ಭದಲ್ಲಿ ನಿಲ್ಲಿಸಿದಂತೆ,
ತಕ್ಷಣ ಗುರುತಿಸಿದಂತೆ.  ಒಂದು ಬೂದುಗುಂಬಳಕಾಯಿಯ ಮೇಲೆ
ನಿಲ್ಲದಿದ್ದರು ಕೂಡ ನಿಮಗೆ ಹಾಗೆನಿಸುತ್ತಿದ್ದರೆ
ಕಾರಣ ಇಷ್ಟೆ:  ಈ ಭೂಮಿಯ ಕೆಳಗೆ ನಿಜಕ್ಕೂ
ಒಂದು ದೊಡ್ಡ ಬೂದುಗುಂಬಳಕಾಯಿ ಇದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಗಾರದ ಕಿರಣ
Next post ಬ್ರಿಗೇಡ್ ರಸ್ತೆ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…