ಮಾನಿನಿ ಮಾತಾಡಬ್ಯಾಡಮ್ಮಾ

ಮಾನಿನಿ ಮಾತಾಡಬ್ಯಾಡಮ್ಮಾ
ನೀ ಸುಮ್ಮನಿರು ಜಾಣ ಹೆಂಗಸರಾಟ ನೋಡಮ್ಮಾ || ಪ ||

ಕ್ಷೋಣಿಯೊಳಗತಿಗೇರಿ ಭಕ್ತರು ಪ್ರಾಣ ಮೂವರಿಗೊಬ್ಬ ಗುರು
ಕಲ್ಯಾಣದಯ್ಯನ ಮಾಡಿಸಿದ ಪೌರಾಣದೊಳು
ಪ್ರತಿ ಕಲಹವಾಯಿತು || ಅ. ಪ. ||

ಹರ ಶರಣ ಲೀಲಾಮೃತ ಕಥೆಯ ತೆರುದ್ಹೇಳುತಿರದರಿತು
ತಾ ಬ್ಯಾರೊಂದು ಸಂಗತಿಯ
ಕರಸಿದರು ಲಕ್ಷ್ಮೇಶ್ವರದ ಪೌರಾಣಿಕ ನರಮತಿಯ
ಮೆರೆವ ಬಸವೇಶ್ವರ ಲೀಲಾಮೃತ ಶರಧಿಯೋಳ್ ವಿಷಮಾತ್ರ
ಬೆರಸಿದ
ಮರುಳತನದ ಈ ಊರ ಗೌಡರಿಗೆ ಹಲವರು
ಅರಿಕೆಯಿಲ್ಲದಾಯಿತು || ೧ ||

ಓದುವರಕ್ಷರವ ಇದರೊಳಗೆ
ವೇದಾಂತಮಾರ್ಗದ ಹಾದಿ ತಿಳಿಯದು ಶಾಸ್ತ್ರಿಯೆಂಬುವಗೆ
ಸಾಧಿಸಿತು ಇನ್ನು ಕ್ರೋಧ ಅಂದಾನಯ್ಯ ಗದಿಗೆಯ್ಯಗೆ
ಹಾದಿ ತಿಳಿಯದೆ ಹೀಂಗ ಜಂಗಮರವರು ಬೈದಾಡುತಿರೆ
ಬಸವಾದಿ ಪ್ರಮಥರು ಮೆಚ್ಚಲರಿಯರು ಮೇದಿನಿಗೆ
ಮಹಾ ಚೋದ್ಯವಾಯಿತು || ೨ ||

ಏನನಲಿ ಈ ಗ್ರಾಮದ ಜನರು ಸನ್ಮಾನನರಿಯದ ಕಾನನದ
ಕಪಿ ಹಿಂಡಿನಂತಿಹರು
ಗಾನರಸದ ಮೇಳಕೆ ತಾವು ತಮ್ಮೊಳು ಕುಳಿತು ಕೇಳುವರು
ತಾನು ಶಿಶನಾಳೀಶ ಬಸವನ ಶೂನ್ಯ ಸಿಂಹಾಸನದ ವಿಸ್ತರ
ಹೀನ ಪಾಪಿ ಭವಿಗಳೊಡನೆ ಜ್ಞಾನಿಯಾದರೆ ನೀನು ಉಸುರದಿರು || ೩ ||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರಿಗೆ ಬಿಟ್ಟಿದ್ದು
Next post ಹಬ್ಬಿದ ಬಳ್ಳಿ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…