ಹಬ್ಬಿದ ಬಳ್ಳಿ

ಪ್ರೀತಿ ಬಳ್ಳಿಯು ಹಬ್ಬಿದೆ
ಧರಣಿಯೆದೆಯ ಹಾಸಿನಲ್ಲಿ,
ನೀಲ ಮುಗಿಲ ಲೋಕದಲ್ಲಿ
ಗಾನ ಸುಧೆಯು ಸಾಗಿದೆ…

ನಾನೇ – ನೀನು, ನೀನೆ – ನಾನು,
ಬುವಿಯೆ – ಬಾನು, ಬಾನೇ ಬುವಿಯು,
ಸೇತುವಾಗಿ ಬೆಸೆದಿದೆ…
ಮೊದಲು ಕೊನೆಗಳಿಲ್ಲವಿಲ್ಲಿ
ಪ್ರೀತಿ – ಚೈತ್ರ ಸರಣಿಯಲ್ಲಿ,
ಕಾಲ ಯಾತ್ರೆಯು ನಡೆದಿದೆ…

ಮೋಡಗಟ್ಟಿ ಮಳೆಯ ಸುರಿಸಿ,
ಹರವದಾರಿಲಿ ಹಸಿರಗಟ್ಟಿಸಿ,
ಕಡಲಾಗಿ ಪ್ರೀತಿಯು ನುಡಿದಿದೆ…
ಉದಯೋದಯಕು ಶುಭದ ಹಕ್ಕಿ,
ಶಕುನ ಸ್ವರದಲಿ ಉಲಿದಿದೆ,
ಮಧುರ ಭಾವಗೀತೆಯ ಹಾಡಿದೆ…

ನನ್ನ – ನಿನ್ನಯ, ನಿನ್ನ – ನನ್ನಯ,
ಬಳಸಿನಿಂತ ಚೆಲ್ವ ಬಾಳ್ವೆಯ,
ಸಾಲು ತೋಪಲಿ ಹಸಿರ್‍ಹುಸಿರಾಗಿದೆ…
ಬಳ್ಳಿಗಾಸರೆಯಾದ ಮರದಲಿ
ಪ್ರೀತಿ ಚಂದನ ಹರಡಿದೆ
ಜಗದ ಬದುಕನು ಹಿಡಿದಿದೆ…

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನಿನಿ ಮಾತಾಡಬ್ಯಾಡಮ್ಮಾ
Next post ನಾನು ನಿನ್ನನ್ನು ಪ್ರೀತಿಸುತ್ತೇನೆ

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys