Home / ಕವನ / ಕವಿತೆ / ಅಕ್ಕನೊಂದಿಗೆ

ಅಕ್ಕನೊಂದಿಗೆ

ಅಕ್ಕ! ಆಗಾಗ ನುಗ್ಗುತ್ತಲೇ ಇರುತ್ತವೆ
ನಿನ್ನ ಸತ್ಯ ಶೋಧದ ಅಮೃತ ವಚನಗಳು
ಗುಣ ಗುಣಿಸುತ್ತೇನೆ ಕನವರಿಸುತ್ತೇನೆ
ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಕದಳಿ ಬನದಿಂದೆದ್ದು
ಬಂದು ನನ್ನ ಭುಜ ತಲುಕಾಡಿದೆ
ಕ್ಷಮಿಸು! ಗುರುತು ಹಿಡಿಯಲೇ ಇಲ್ಲ
ಮರುವೋ; ನಿದ್ದೆಗಣ್ಣೋ
ವೈರಾಗ್ಯ ಖಣಿ ಮುಕ್ತಿಮಣಿ ಅಕ್ಕ
ನನ್ನಕ್ಕ ತಬ್ಬಿ ಖುಷಿಪಟ್ಟೆ
ಶತ ಶತಮಾನಗಳ ಅಂತರಂಗದ
ಅಂತಃಕರಣದ ಮಾತುಗಳು ಕುಶಲೋಪಚಾರ
ಉತ್ತರ ಏನು ಹೇಳಲಿ ಅಕ್ಕ
ಏನೇನೂ ಬದಲಾಗಿಲ್ಲ
ನಿನಗೆ ಅಡ್ಡಗಟ್ಟಿದ ಪುಂಡ ಪೋಕರಿಗಳ
ದಾರಿ ಇನ್ನೂ ಹಾಗೇ ಇದೆ.
ಧರ್ಮದ ಹೆಸರಿನಲ್ಲಿ ಅಧರ್ಮ
ಮೇಲು ಕೀಳು ಭಾವನೆ.

ಬದಲಾಗಿವೆ ಟಾಪ್‌ ಬಾರ್‌ಗಳಾಗಿರುವ ಅನುಭವ ಮಂಟಪಗಳು
ಫ್ಯಾಶನ್ ಪರೇಡ್ ಲೇಡಿಜ್
ಕ್ಲಬ್‌ಗಳಾಗಿರುವ ಅಕ್ಕನ ಬಳಗಗಳು
ಪರಶಿವನೇ ಗಂಡನಾಗಬೇಕೆಂದು
ತಪಿಸಿದ ನೀನೆಲ್ಲಿ ಇಂದಿನ ಪಾಂಚಾಲಿಗಳೆಲ್ಲಿ
ಚಿಲಿಪಿಲಿಸದ ಅನಾಥ ಗಿಳಿಗಳು
ಬೇಟೆಗಾರರ ಗಿರಿಕಂದರಗಳು
ಅಕ್ಕ ಈ ಸೀರೆ ಸುತ್ತಿಕೋ

ಈಗ ಅಲ್ಲಮಪ್ರಭು ಬಸವಾದಿ ಗಣಗಳಿಲ್ಲ
ಬಾ ಒಂದಿಷ್ಟು ಸುತ್ತಾಡಿ ಬರೋಣ….
ಲೌಕಿಕ ಜಂಜಡದ ನಿನ್ನ ಮಾತುಗಳಲ್ಲಿ
ಹೊರಳಾಡಿ ಮುಳುಗೇಳುವ ಈ ಜನರೆಲ್ಲಿನೋಡು –

ಅಕ್ಕ ನೋಡಕ್ಕ ಏನೂ ಬದಲಾಗಿಲ್ಲ
ಹೆಣ್ಣಿನ ತುಳಿತ ತೊತ್ತುಗಳಲ್ಲಿ
ಆಗಿದ್ದೀಷ್ಟೆ ಅಲ್ಲಲ್ಲಿ ಕೊರಡು ಕೊನರುತಿವೆ
ಕಲ್ಲು ಕವಿತೆ ಹಾಡುತಿವೆ
ಸುಟ್ಟುಕೊಂಡ ದೇಹಗಳಲಿ ಜ್ವಾಲೆ ಉರಿಯುತಿದೆ.

ಆದರೂ ಅಕ್ಕ ನಾವು ಸೋತಿಲ್ಲ.
ಹದ್ದುಮೀರಿ ವರ್ತಿಸಿಯೂ ಇಲ್ಲ.
ಹಂಬಲಿಸಿ ಕೊರಗಿ ನೀ ಕಂಡ “ಮಲ್ಲಿಕಾರ್ಜುನನಂತೆ”
ನಾವು ಹಂಬಲಿಸಿ ಅಂತರೀಕ್ಷಕ್ಕೇರಿ ಸಮುದ್ರದಾಳಕ್ಕಿಳಿದು
ವಿಜ್ಞಾನ ತಂತ್ರಜ್ಞಾನಗಳನ್ನಲ್ಲಾಡಿಸಿ
ಆಗುಂತಕ ‘ಶಕ್ತಿ’ ಕಂಡುಹಿಡಿಯುತ್ತಲಿದ್ದೇವೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...