Home / ಕವನ / ಕವಿತೆ / ಅಕ್ಕನೊಂದಿಗೆ

ಅಕ್ಕನೊಂದಿಗೆ

ಅಕ್ಕ! ಆಗಾಗ ನುಗ್ಗುತ್ತಲೇ ಇರುತ್ತವೆ
ನಿನ್ನ ಸತ್ಯ ಶೋಧದ ಅಮೃತ ವಚನಗಳು
ಗುಣ ಗುಣಿಸುತ್ತೇನೆ ಕನವರಿಸುತ್ತೇನೆ
ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಕದಳಿ ಬನದಿಂದೆದ್ದು
ಬಂದು ನನ್ನ ಭುಜ ತಲುಕಾಡಿದೆ
ಕ್ಷಮಿಸು! ಗುರುತು ಹಿಡಿಯಲೇ ಇಲ್ಲ
ಮರುವೋ; ನಿದ್ದೆಗಣ್ಣೋ
ವೈರಾಗ್ಯ ಖಣಿ ಮುಕ್ತಿಮಣಿ ಅಕ್ಕ
ನನ್ನಕ್ಕ ತಬ್ಬಿ ಖುಷಿಪಟ್ಟೆ
ಶತ ಶತಮಾನಗಳ ಅಂತರಂಗದ
ಅಂತಃಕರಣದ ಮಾತುಗಳು ಕುಶಲೋಪಚಾರ
ಉತ್ತರ ಏನು ಹೇಳಲಿ ಅಕ್ಕ
ಏನೇನೂ ಬದಲಾಗಿಲ್ಲ
ನಿನಗೆ ಅಡ್ಡಗಟ್ಟಿದ ಪುಂಡ ಪೋಕರಿಗಳ
ದಾರಿ ಇನ್ನೂ ಹಾಗೇ ಇದೆ.
ಧರ್ಮದ ಹೆಸರಿನಲ್ಲಿ ಅಧರ್ಮ
ಮೇಲು ಕೀಳು ಭಾವನೆ.

ಬದಲಾಗಿವೆ ಟಾಪ್‌ ಬಾರ್‌ಗಳಾಗಿರುವ ಅನುಭವ ಮಂಟಪಗಳು
ಫ್ಯಾಶನ್ ಪರೇಡ್ ಲೇಡಿಜ್
ಕ್ಲಬ್‌ಗಳಾಗಿರುವ ಅಕ್ಕನ ಬಳಗಗಳು
ಪರಶಿವನೇ ಗಂಡನಾಗಬೇಕೆಂದು
ತಪಿಸಿದ ನೀನೆಲ್ಲಿ ಇಂದಿನ ಪಾಂಚಾಲಿಗಳೆಲ್ಲಿ
ಚಿಲಿಪಿಲಿಸದ ಅನಾಥ ಗಿಳಿಗಳು
ಬೇಟೆಗಾರರ ಗಿರಿಕಂದರಗಳು
ಅಕ್ಕ ಈ ಸೀರೆ ಸುತ್ತಿಕೋ

ಈಗ ಅಲ್ಲಮಪ್ರಭು ಬಸವಾದಿ ಗಣಗಳಿಲ್ಲ
ಬಾ ಒಂದಿಷ್ಟು ಸುತ್ತಾಡಿ ಬರೋಣ….
ಲೌಕಿಕ ಜಂಜಡದ ನಿನ್ನ ಮಾತುಗಳಲ್ಲಿ
ಹೊರಳಾಡಿ ಮುಳುಗೇಳುವ ಈ ಜನರೆಲ್ಲಿನೋಡು –

ಅಕ್ಕ ನೋಡಕ್ಕ ಏನೂ ಬದಲಾಗಿಲ್ಲ
ಹೆಣ್ಣಿನ ತುಳಿತ ತೊತ್ತುಗಳಲ್ಲಿ
ಆಗಿದ್ದೀಷ್ಟೆ ಅಲ್ಲಲ್ಲಿ ಕೊರಡು ಕೊನರುತಿವೆ
ಕಲ್ಲು ಕವಿತೆ ಹಾಡುತಿವೆ
ಸುಟ್ಟುಕೊಂಡ ದೇಹಗಳಲಿ ಜ್ವಾಲೆ ಉರಿಯುತಿದೆ.

ಆದರೂ ಅಕ್ಕ ನಾವು ಸೋತಿಲ್ಲ.
ಹದ್ದುಮೀರಿ ವರ್ತಿಸಿಯೂ ಇಲ್ಲ.
ಹಂಬಲಿಸಿ ಕೊರಗಿ ನೀ ಕಂಡ “ಮಲ್ಲಿಕಾರ್ಜುನನಂತೆ”
ನಾವು ಹಂಬಲಿಸಿ ಅಂತರೀಕ್ಷಕ್ಕೇರಿ ಸಮುದ್ರದಾಳಕ್ಕಿಳಿದು
ವಿಜ್ಞಾನ ತಂತ್ರಜ್ಞಾನಗಳನ್ನಲ್ಲಾಡಿಸಿ
ಆಗುಂತಕ ‘ಶಕ್ತಿ’ ಕಂಡುಹಿಡಿಯುತ್ತಲಿದ್ದೇವೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...