Home / ಕವನ / ಕವಿತೆ / ಅಕ್ಕನೊಂದಿಗೆ

ಅಕ್ಕನೊಂದಿಗೆ

ಅಕ್ಕ! ಆಗಾಗ ನುಗ್ಗುತ್ತಲೇ ಇರುತ್ತವೆ
ನಿನ್ನ ಸತ್ಯ ಶೋಧದ ಅಮೃತ ವಚನಗಳು
ಗುಣ ಗುಣಿಸುತ್ತೇನೆ ಕನವರಿಸುತ್ತೇನೆ
ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಕದಳಿ ಬನದಿಂದೆದ್ದು
ಬಂದು ನನ್ನ ಭುಜ ತಲುಕಾಡಿದೆ
ಕ್ಷಮಿಸು! ಗುರುತು ಹಿಡಿಯಲೇ ಇಲ್ಲ
ಮರುವೋ; ನಿದ್ದೆಗಣ್ಣೋ
ವೈರಾಗ್ಯ ಖಣಿ ಮುಕ್ತಿಮಣಿ ಅಕ್ಕ
ನನ್ನಕ್ಕ ತಬ್ಬಿ ಖುಷಿಪಟ್ಟೆ
ಶತ ಶತಮಾನಗಳ ಅಂತರಂಗದ
ಅಂತಃಕರಣದ ಮಾತುಗಳು ಕುಶಲೋಪಚಾರ
ಉತ್ತರ ಏನು ಹೇಳಲಿ ಅಕ್ಕ
ಏನೇನೂ ಬದಲಾಗಿಲ್ಲ
ನಿನಗೆ ಅಡ್ಡಗಟ್ಟಿದ ಪುಂಡ ಪೋಕರಿಗಳ
ದಾರಿ ಇನ್ನೂ ಹಾಗೇ ಇದೆ.
ಧರ್ಮದ ಹೆಸರಿನಲ್ಲಿ ಅಧರ್ಮ
ಮೇಲು ಕೀಳು ಭಾವನೆ.

ಬದಲಾಗಿವೆ ಟಾಪ್‌ ಬಾರ್‌ಗಳಾಗಿರುವ ಅನುಭವ ಮಂಟಪಗಳು
ಫ್ಯಾಶನ್ ಪರೇಡ್ ಲೇಡಿಜ್
ಕ್ಲಬ್‌ಗಳಾಗಿರುವ ಅಕ್ಕನ ಬಳಗಗಳು
ಪರಶಿವನೇ ಗಂಡನಾಗಬೇಕೆಂದು
ತಪಿಸಿದ ನೀನೆಲ್ಲಿ ಇಂದಿನ ಪಾಂಚಾಲಿಗಳೆಲ್ಲಿ
ಚಿಲಿಪಿಲಿಸದ ಅನಾಥ ಗಿಳಿಗಳು
ಬೇಟೆಗಾರರ ಗಿರಿಕಂದರಗಳು
ಅಕ್ಕ ಈ ಸೀರೆ ಸುತ್ತಿಕೋ

ಈಗ ಅಲ್ಲಮಪ್ರಭು ಬಸವಾದಿ ಗಣಗಳಿಲ್ಲ
ಬಾ ಒಂದಿಷ್ಟು ಸುತ್ತಾಡಿ ಬರೋಣ….
ಲೌಕಿಕ ಜಂಜಡದ ನಿನ್ನ ಮಾತುಗಳಲ್ಲಿ
ಹೊರಳಾಡಿ ಮುಳುಗೇಳುವ ಈ ಜನರೆಲ್ಲಿನೋಡು –

ಅಕ್ಕ ನೋಡಕ್ಕ ಏನೂ ಬದಲಾಗಿಲ್ಲ
ಹೆಣ್ಣಿನ ತುಳಿತ ತೊತ್ತುಗಳಲ್ಲಿ
ಆಗಿದ್ದೀಷ್ಟೆ ಅಲ್ಲಲ್ಲಿ ಕೊರಡು ಕೊನರುತಿವೆ
ಕಲ್ಲು ಕವಿತೆ ಹಾಡುತಿವೆ
ಸುಟ್ಟುಕೊಂಡ ದೇಹಗಳಲಿ ಜ್ವಾಲೆ ಉರಿಯುತಿದೆ.

ಆದರೂ ಅಕ್ಕ ನಾವು ಸೋತಿಲ್ಲ.
ಹದ್ದುಮೀರಿ ವರ್ತಿಸಿಯೂ ಇಲ್ಲ.
ಹಂಬಲಿಸಿ ಕೊರಗಿ ನೀ ಕಂಡ “ಮಲ್ಲಿಕಾರ್ಜುನನಂತೆ”
ನಾವು ಹಂಬಲಿಸಿ ಅಂತರೀಕ್ಷಕ್ಕೇರಿ ಸಮುದ್ರದಾಳಕ್ಕಿಳಿದು
ವಿಜ್ಞಾನ ತಂತ್ರಜ್ಞಾನಗಳನ್ನಲ್ಲಾಡಿಸಿ
ಆಗುಂತಕ ‘ಶಕ್ತಿ’ ಕಂಡುಹಿಡಿಯುತ್ತಲಿದ್ದೇವೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...