ನಿರೀಕ್ಷೆಯ ಸಸಿ ನೆಟ್ಟು
ಕ್ರಾಂತಿ ಋತು ಕೈಗೆತ್ತಿಕೊಂಡು
ಭವಿಷ್ಯದ ಭಾರೀ ನಿರೀಕ್ಷೆಯಲ್ಲಿರುವಾಗಲೇ
ಸುಟ್ಟು ಹೋದೆಯಲ್ಲೇ ಸುಧಾ-
ಮಹಿಳಾ ವರ್ಷದ, ಕನ್ನಡ ಜಾಗೃತಿ ವರ್ಷದ
ವೇಳಾಪಟ್ಟಿಯೊಳಗೆ ಸೇರುವ
ಸಾಧಿಸಿ ತೋರಿಸುವ ಛಲದ
ನಿನ್ನ ಕನಸುಗಳೆಲ್ಲಾ
ಮಣ್ಣಾಗಿ ಹೋದವಲ್ಲ ಸುಧಾ
ಬಿಡುಕ್ರೋಧ
ಅದೆಷ್ಟು ನಿರಾಸೆಯ ಮಾತುಗಳು
ತಿರು ತಿರುಗಿ ರೈಲು ಕಂಬಿ
ತುಂಬಿದ ಬಾವಿ. ನೇಣು
ಅದ್ಯಾಕೆ ಕಣ್ಣೀರು, ದ್ವೇಷ ಸೇಡು ಸಿಟ್ಟು
ಭಾವನೆಗಳು ಕೆರಳಿಸಿಕೊಳ್ಳುವಿಕೆ
– ಬಿಡು ಮಾತು
ಬೆಟ್ಟದಾಚೆಯ ಸೂರ್ಯ
ಕೈಗೆಟುಕದ ಕ್ರಾಂತಿಯೆಂದು
ಎಲ್ಲದಕ್ಕಿಂತಲೂ ಎಲ್ಲರಕ್ಕಿಂತಲೂ
ಚಂದ್ರ ಚಿಕ್ಕೆಗಳೇ ಸಮೀಪವೆಂದು
– ತೆಗದುಕೋ ಚಾಲೆಂಜ್
ಜಸ್ಟ್ ಶೂಟ್ ಶೂಟ್ ಶೂಟ್
ಒನ್ ಬಾಯ್ ಒನ್ ಯುವರ್
ಕಾಂಟ್ರೋವರ್ಸಿಯಲ್ ಥಾಟ್ಸ್
ಅಂಡ್ ಬಿಲ್ಡ್ ಅಪ್ ಯುವರ್ ಓನ್
ಸ್ಟ್ರಾಂಗ್ ಐಡಿಯಾಸ್
ಅಂಡ್ ಪರ್ಸನಾಲಿಟಿ
ಕಮಾನ್ ಸುಧಾ, ಚಿಯರ್ ಅಪ್.
*****
Related Post
ಸಣ್ಣ ಕತೆ
-
ಪ್ರಥಮ ದರ್ಶನದ ಪ್ರೇಮ
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…
-
ಹೃದಯ ವೀಣೆ ಮಿಡಿಯೆ….
ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…
-
ಸಾವು
ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…
-
ಗುಲ್ಬಾಯಿ
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…