Home / ಕವನ / ಕವಿತೆ / ಹವೇಲಿ

ಹವೇಲಿ


ಈಗ ಈ ಹವೇಲಿಯಲ್ಲಿ ಯಾರೂ ಇಲ್ಲ.  ಇದು
ಯಾರಿಗೆ ಸೇರಿದ್ದೊ ಯಾರಿಗೂ ತಿಳಿಯದು.  ಹೊರಗೆ
ಬೀದಿಯಲ್ಲಿರುವ ಪಾನ್‌ವಾಲ ಮುದುಕನ ಕಣ್ಣುಗಳಲ್ಲಿ
ಇದರ ಚರಿತ್ರೆ ಇಳಿದುಹೋಗಿರುವಂತಿದೆ.  ಆದರೆ
ಅವನೇನೂ ಹೇಳಲೊಲ್ಲ.  ವೀಳ್ಯದೆಲೆ ಹೊಸೆಯುವ
ಅವನ ಕೈಗಳು ಯಾವಾಗಲೂ ಕಂಪಿಸುತ್ತವೆ.


ಈ ಕಟ್ಟಡದ ಬೆಮ್ಮಾಡಿಗೆ ಕಾಡುಬಳ್ಳಿಗಳು ಹತ್ತಿವೆ.
ದೊಡ್ಡದಾದ ಕಿಟಕಿಗಳಿಂದ ದೊಡ್ಡದಾದ ಜೇಡನ ಬಲೆಗಳು
ಇಳಿದಿವೆ.  ಇಷ್ಟೆಲ್ಲ ಕೋಣೆಗಳನ್ನು, ಬೈಠಕ್‌ಖಾನೆಗಳನ್ನು
ಹಿಡಿದುನಿಂತ ಗಾರೆ ಕೆಲಸವನ್ನು ಈಗಿನ ಕಾಲದಲ್ಲಿ
ಎಲ್ಲೂ ಕಾಣಲಾರೆವು.  ಆಳೆತ್ತರ ಬೆಳೆದ ಪೊದೆಗಳ
ನಡುವೆ ಅಷ್ಟೆತ್ತರ ನಿಂತಿದೆ ಈ ಮನೆ.


ಇಂಥ ಸ್ಥಳದಲ್ಲಿ ಬಹಳ ನೆರಳಿರುವುದರಿಂದ
ಇಲ್ಲಿ ನಿಂತು ಯಾರು ಏನನ್ನೂ ಬೇಕಾದರೂ
ಜ್ಞಾಪಿಸಿಕೊಳ್ಳಬಹುದು: ಅವರವರ ನಗುವನ್ನು,
ಅವರವರ ನರ್ತನವನ್ನು.  ಈ ಮಧ್ಯೆ ಒಳಗೆಲ್ಲೊ
ಬಟ್ಟೆಗಳು ಕೆಳಬಿದ್ದ ಸದ್ದು ನಿಜವಿರಬಹುದು.
ಆದರೆ ಒಂದಂತೂ ನನಗೆ ಗೊತ್ತು: ಆಳವಾದ ಈ
ಭಾವಿಯೊಳಕ್ಕೆ ಎಸೆದ ಕಲ್ಲಿನ ಸದ್ದು ಮರುಕಳಿಸುವುದಕ್ಕೆ
ಕೆಲವು ನಿಮಿಷಗಳು ಬೇಕು-ಅದರ ನಡುವಣ ಸಮಯ
ಆತಂಕದಿಂದ ತುಂಬಿದ್ದು.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...