Home / ಲೇಖನ / ಇತರೆ / ನಿದ್ದೆಯ ಕತೆ

ನಿದ್ದೆಯ ಕತೆ

“ನಿದ್ದೆಗೇಡಿ ಬುದ್ದಿಗೇಡಿ” ಎಂಬ ಗಾದೆ ಮಾತಿದೆ. ನಿದ್ದೆಯಿಲ್ಲದವರು ಬುದ್ಧಿಯಿಲ್ಲದವರು ಒಂದೇ. ದೇಶ ವಿದೇಶಗಳಲ್ಲಿ ಜನರು ಈಗೀಗ ನಿದ್ದೆಯಿಲ್ಲದೆ ವಿಲವಿಲ ಒದ್ದಾಡುತ್ತಿರುವರು. ನಾನಾ ಒತ್ತಡಗಳಿಂದಾಗಿ ಮನಃಶಾಂತಿಯಿಲ್ಲದೆ ಕಡ್ಡಾಯವಾಗಿ ನಿದ್ರೆ ಮಾತ್ರೆ ತೆಗೆದುಕೊಂಡೇ ನಿದ್ರೆಗೆ ಜಾರುತ್ತಿರುವರು. ನಿದ್ರೆಯನ್ನು ಕೊಳ್ಳಲಾಗದು. ಸಹಜವಾಗಿ ನಿದ್ರೆ ಬರಬೇಕು. ಆದರೆ ನಿದ್ರೆಯಿಲ್ಲದೆ ನಾನಾ ಕಸರತ್ತು ಮಾಡುವರು. ಸುಖ, ನಿದ್ರೆ ಮಾತ್ರ ಕಾಣರು.

“ಬೇಗ ಮಲಗು ಬೇಗ ಏಳು” ಇದು ಕೆಲವರ ಕೈಯಿಂದ ಆಗದು. ಇವರು ತಡವಾಗಿ ಮಲಗುವುದು ತಡವಾಗಿ ಏಳುವುದು, ಸೂರ್ಯ ಪುತ್ರರಂತೆ ಬಿಸಿಲು ಮೈಸುಟ್ಟರೆ ಆಗ ಎಚ್ಚರವಾಗುವರು.

ಇನ್ನು ಕೆಲವರು ಸೂರ್ಯಕಾಂತಿಯ ಹೂವಂತೆ ಸೂರ್ಯನಿಗೆ ಮುಖ ಕೊಟ್ಟು ದುಡಿವವರು. ಸೂರ್ಯಾಸ್ತಮಿಸಿದಂತೆ ಅವರ ದುಡಿಮೆ ಮುಗಿವದು. ವಿಶ್ರಾಂತಿ ಬಯಸುವರು.

ಎಷ್ಟು ಹೊತ್ತಿಗೆ ಮಲಗಿದೆ ನಿದ್ರಿಸಿದೆ ಮುಖ್ಯ ಅಲ್ಲ. ಬೆಳಿಗ್ಗೆ ಸೂರ್ಯನನ್ನು ಎಬ್ಬಿಸುವುದು ಜಗಕೆ ಬೆಳಕು ಹರಿಸುವುದು ಮುಖ್ಯ. ಮೂಡಣ ದಿಕ್ಕಿಗೆ ಸೂರ್ಯನಿಗೆ ಮುಖ ಕೊಟ್ಟು ನಿಂತಾಗ ಸೂರ್ಯನಾಡುವ ಆಟದಿಂದ ನಮ್ಮ ಆಟ ಮೊದಲಾಗಬೇಕು. ಆಗ ಶಕ್ತಿ ಸಂಚಲನವಾಗುವುದು. ಅಂದು ಒಳ್ಳೆಯ ನಿದ್ದೆ ಸವಿಯಲು ಸಾಧ್ಯವಿದೆ.

ಒಳ್ಳೆಯ ನಿದ್ದೆ ಸಹಜವಾದ ನಿದ್ದೆ ಮನುಷ್ಯನನ್ನು ಲವಲವಿಕೆಯಿಂದ ಇಡುವುದು. ಏನೆಲ್ಲ ನೆನಪುಗಳನ್ನು ಒತ್ತರಿಸಿಕೊಂಡು ಬರುವುದು.

ನಿದ್ದೆಯ ಬಗ್ಗೆ ಇತ್ತೀಚಿಗೆ ಬ್ರಿಟನ್ ಅಧ್ಯಯನಕಾರರು ಹೊಸ ಹೊಸ ವಿಚಾರಗಳನ್ನು ಸಂಶೋಧಿಸಿರುವರು. ನಿದ್ದೆ-ನೆನಪಿನ ಶಕ್ತಿಯನ್ನು ವೃದ್ಧಿಸುವದೆಂದಿರುವರು. ಬ್ರಿಟನ್‌ನ ಎಕ್ಸೆಟರ್‌ ವಿಶ್ವವಿದ್ಯಾಲಯ ಹಾಗೂ ಸ್ಪೇನ್‌ನ ಮಿದುಳು ಹಾಗೂ ಭಾಷಾ ಕೇಂದ್ರದ ತಜ್ಞರ ತಂಡ ಈ ಅಧ್ಯಯನವನ್ನು ಕೈಗೊಂಡಿದ್ದು… ಈ ಹಿಂದೆ ಮರೆತು ಹೋಗಿದ್ದ ನೆನಪಿಗೆ ಸಿಗದ ಎಷ್ಟೋ ವಿಚಾರಗಳು, ಘಟನೆಗಳು ಸುಮಧುರ ಕ್ಷಣಗಳನ್ನು ಒಳ್ಳೆಯ ನಿದ್ದೆಯು ಸುಲಭವಾಗಿ ನೆನಪು ಮಾಡಿಕೊಳ್ಳಲು ಅನುವು ಮಾಡಿಕೊಡುವುದೆಂದು ಸಂಶೋಧಿಸಿರುವರು.

ಸರಿಯಾಗಿ ನಿದ್ರೆಯಾಗದ ದಿನಗಳಲ್ಲಿ ಎಚ್ಚರವಾಗಿದ್ದ, ನಿದ್ರೆಯಲ್ಲಿ ಮರೆತು ಹೋಗಿರುವ ಎಷ್ಟೋ ಹಣಕಾಸಿನ ವಿಚಾರಗಳು ಒಳ್ಳೆಯ ನಿದ್ರೆಯ ಬಳಿಕ ನೆನಪಿಸಿಕೊಳ್ಳುವ ಸಾಮಾರ್ಥ್ಯ ದುಪ್ಪಟ್ಟಾಗಿರುವುದೆಂದು ಅಧ್ಯಯನಕಾರರು ಖಚಿತಪಡಿಸಿರುವರು.

ಆದ್ದರಿಂದ ಒಳ್ಳೆಯ ನಿದ್ದೆಯಿಂದ ಒಳ್ಳೆಯ ಕನಸುಗಳು ಸಾಕಾರಗೊಳ್ಳುವುದು. ನೆನಪಿನ ಶಕ್ತಿಯನ್ನು ಮತ್ತಷ್ಟು ತೀಕ್ಷ್ಯಗೊಳಿಸುವುದು, ಆಯುಷ್ಯ ವೃದ್ಧಿಸುವುದು. ಇತ್ಯಾದಿ ಲಾಭಗಳನ್ನು ಎಕ್ಸೆಟರ್ ವಿಶ್ವವಿದ್ಯಾಲಯದ ನಿಕೊಲಸ್‌ಡುಮಯ್ ವಿವರಿಸಿರುವರು. ಆದ್ದರಿಂದ ಎಲ್ಲರೂ ಒಳ್ಳೆಯ ನಿದ್ದೆ ಮಾಡಲು ಮನಸು ಮಾಡೋಣವಲ್ಲವೇ?
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...