Home / ಕವನ / ಕವಿತೆ / ಕೂಸು ಎಲ್ಲಿ ಹೋಯಿತೇ

ಕೂಸು ಎಲ್ಲಿ ಹೋಯಿತೇ

ಎಲ್ಲಿ ಹೋಯಿತೇ ಕೂಸು ಎಲ್ಲಿ ಹೋಯಿತೇ
ಅವ್ವ ಎಲ್ಲಿ ಹೋಯಿತೇ ಅಕ್ಕ ಎಲ್ಲಿ ಹೋಯಿತೇ

ಮೊನ್ನೆ ಮೊನ್ನೆ ಹುಟ್ಟಿ ಬಂತು ಸ್ವರ್ಗವನ್ನೇ ಮುಟ್ಟಿ ನಿಂತು
ಪೂರ್ಣ ಚಂದ್ರ ಹಾಲುಗೆನ್ನೆ ಬೆಳದಿಂಗಳ ಹಾಲು ನಗುವು
ಮಳೆಯ ಜೊಲ್ಲು ಸುರಿಸಿ ಅಂಗ ತೋಯಿಸಿದ್ದನು
ನನ್ನ ಎದೆಯ ನೆಲವ ಕೂಡ ಮೀಯಿಸಿದ್ದನು

ಬಸ್ಸು ಲಾರಿ ಸದ್ದು ಕೇಳಿ  ಭಯವ ತಾಳಿ
ಬಂದು ನನ್ನ ಮಡಿಲಿನಲ್ಲಿ ಅಡಗುತಿದ್ದನು
ನಿನ್ನೆ ಮೊನ್ನೆ ನಡೆಯುವುದನು ಕಲಿಯುತಿದ್ದನು

ಕೈಯ ಚಾಚಿ ಚಿಕ್ಕೆಗಳನು ಹೊಕ್ಕು ನೋಡಿ ಬರುವೆನೆಂಬ
ಉದಯ ಸೂರ್ಯನನ್ನು ತಿಂಬ ಹಣ್ಣೆ ಎಂಬನು
ಹೊಟ್ಟೆಗೆಷ್ಟು ಕೊಟ್ಟರೇನು ಮಣ್ಣ ತಿಂಬನು

ಅವನ ಕಣ್ಣು ಕೋಪದಲ್ಲಿ ಸೂರ್ಯಾಸ್ತದ ಕೆಂಪನುಗುಳಿ
ನನ್ನ ಕಣ್ಣ ಸರಸಿನಲ್ಲಿ ಬಿಂಬಿಸಿದ್ದಿತು
ಮುದ್ದು ಬಾರೊ ಎನಲು ಎನ್ನ ಚುಂಬಿಸಿದ್ದಿತು

ನಾನು ಹೊರಗೆ ಹೋಗುವಾಗ ಹೋಗಬೇಡವೆಂದು ತೊಡರಿ
ಜಗದ ಜೀವಿ ನಾನು ಹೋಗೆ ಅಳುತಲಿದ್ದಿತು
ಎತ್ತ ಹೋದರಿತ್ತ ಮನಸು ಸೆಳೆಯುತಿದ್ದಿತು

ತನ್ನ ಬಾಯಿ ಮಣ್ಣಿನಲ್ಲಿ ಸೃಷ್ಟಿಯನ್ನೆ ತುಂಬಿಸಿತ್ತು
ತನ್ನ ಹಣೆಯ ಮುಂಗುರಳಲಿ ನನ್ನ ಸುತ್ತಿತು
ನನ್ನ ಕರುಳ ಕುಡಿಯು ನಗಲು ಅಳುವೆ ಸತ್ತಿತು

ನನ್ನ ಮನದ ದಿವ್ಯಮೂರ್ತಿ ನನ್ನ ಜೀವ ಭಾವ ಕೀರ್ತಿ
ಎತ್ತ ಹೋಯಿತೇನೊ ಪಾಪ ತಿಳಿಯದಾಗಿದೆ
ಕರುಳುಕಿತ್ತು ಹೊರಗೆ ಬರುವ ದುಃಖವಾಗಿದೆ

ನೀನು ನೋಡಿದೇನೆ ಅಕ್ಕ ನಿನಗಾದರು ಗೊತ್ತೆ ತಂಗಿ
ಅಣ್ಣ-ತಮ್ಮ ನೀವಾದರು ಹೇಳಲಾರಿರಾ
ಮಗುವ ನಾನು ಕಾಂಬ ಪರಿಯ ತೋರಲಾರಿರಾ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...