ಕೂಸು ಎಲ್ಲಿ ಹೋಯಿತೇ

ಎಲ್ಲಿ ಹೋಯಿತೇ ಕೂಸು ಎಲ್ಲಿ ಹೋಯಿತೇ
ಅವ್ವ ಎಲ್ಲಿ ಹೋಯಿತೇ ಅಕ್ಕ ಎಲ್ಲಿ ಹೋಯಿತೇ

ಮೊನ್ನೆ ಮೊನ್ನೆ ಹುಟ್ಟಿ ಬಂತು ಸ್ವರ್ಗವನ್ನೇ ಮುಟ್ಟಿ ನಿಂತು
ಪೂರ್ಣ ಚಂದ್ರ ಹಾಲುಗೆನ್ನೆ ಬೆಳದಿಂಗಳ ಹಾಲು ನಗುವು
ಮಳೆಯ ಜೊಲ್ಲು ಸುರಿಸಿ ಅಂಗ ತೋಯಿಸಿದ್ದನು
ನನ್ನ ಎದೆಯ ನೆಲವ ಕೂಡ ಮೀಯಿಸಿದ್ದನು

ಬಸ್ಸು ಲಾರಿ ಸದ್ದು ಕೇಳಿ  ಭಯವ ತಾಳಿ
ಬಂದು ನನ್ನ ಮಡಿಲಿನಲ್ಲಿ ಅಡಗುತಿದ್ದನು
ನಿನ್ನೆ ಮೊನ್ನೆ ನಡೆಯುವುದನು ಕಲಿಯುತಿದ್ದನು

ಕೈಯ ಚಾಚಿ ಚಿಕ್ಕೆಗಳನು ಹೊಕ್ಕು ನೋಡಿ ಬರುವೆನೆಂಬ
ಉದಯ ಸೂರ್ಯನನ್ನು ತಿಂಬ ಹಣ್ಣೆ ಎಂಬನು
ಹೊಟ್ಟೆಗೆಷ್ಟು ಕೊಟ್ಟರೇನು ಮಣ್ಣ ತಿಂಬನು

ಅವನ ಕಣ್ಣು ಕೋಪದಲ್ಲಿ ಸೂರ್ಯಾಸ್ತದ ಕೆಂಪನುಗುಳಿ
ನನ್ನ ಕಣ್ಣ ಸರಸಿನಲ್ಲಿ ಬಿಂಬಿಸಿದ್ದಿತು
ಮುದ್ದು ಬಾರೊ ಎನಲು ಎನ್ನ ಚುಂಬಿಸಿದ್ದಿತು

ನಾನು ಹೊರಗೆ ಹೋಗುವಾಗ ಹೋಗಬೇಡವೆಂದು ತೊಡರಿ
ಜಗದ ಜೀವಿ ನಾನು ಹೋಗೆ ಅಳುತಲಿದ್ದಿತು
ಎತ್ತ ಹೋದರಿತ್ತ ಮನಸು ಸೆಳೆಯುತಿದ್ದಿತು

ತನ್ನ ಬಾಯಿ ಮಣ್ಣಿನಲ್ಲಿ ಸೃಷ್ಟಿಯನ್ನೆ ತುಂಬಿಸಿತ್ತು
ತನ್ನ ಹಣೆಯ ಮುಂಗುರಳಲಿ ನನ್ನ ಸುತ್ತಿತು
ನನ್ನ ಕರುಳ ಕುಡಿಯು ನಗಲು ಅಳುವೆ ಸತ್ತಿತು

ನನ್ನ ಮನದ ದಿವ್ಯಮೂರ್ತಿ ನನ್ನ ಜೀವ ಭಾವ ಕೀರ್ತಿ
ಎತ್ತ ಹೋಯಿತೇನೊ ಪಾಪ ತಿಳಿಯದಾಗಿದೆ
ಕರುಳುಕಿತ್ತು ಹೊರಗೆ ಬರುವ ದುಃಖವಾಗಿದೆ

ನೀನು ನೋಡಿದೇನೆ ಅಕ್ಕ ನಿನಗಾದರು ಗೊತ್ತೆ ತಂಗಿ
ಅಣ್ಣ-ತಮ್ಮ ನೀವಾದರು ಹೇಳಲಾರಿರಾ
ಮಗುವ ನಾನು ಕಾಂಬ ಪರಿಯ ತೋರಲಾರಿರಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವನಾಗುವೆಯೋ ? ಇಲ್ಲ…..
Next post ಲಿಂಗಮ್ಮನ ವಚನಗಳು – ೬೩

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys