ಅಮರ

ನಾನು ಪ್ರಕೃತಿ ಶಿವ ಸತ್ಕೃತಿ ನನ್ನ ಗುಣವ ಹೇಳುವೆ
ನೀನು ವಿಕೃತಿಯಾಗಿ ಬಂದೆ ದುಃಖಗಳನು ತಾಳುವೆ

ಭೂಮಿಯೊಳಗೆ ನಾನು ಆಳ ಬೇರು ಬಿಟ್ಟು ನಿಂತಿಹೆ
ಗಗನದಲ್ಲಿ ತಲೆಯನೆತ್ತಿ ಚೆಲುವನೆಲ್ಲ ಹೊತ್ತಿಹೆ

ಮಣ್ಣಿನೊಳಗೆ ಒಡಬೆರೆಯುತ ಭದ್ರವಾಗಿ ಬೆಳೆದಿಹೆ
ಸಣ್ಣಪುಟ್ಟ ಗಾಳಿಯಲ್ಲಿ ಬೆದರದಂತೆ ಉಳಿದಿಹೆ

ನಾನು ಒಂದೇ ಇದ್ದರೂ ನೂರು ಕೈಗಳಿರುವುವು
ಬಾನಿನಲ್ಲಿ ಹರಡಿಕೊಂಡು ಹೂವು ಹಣ್ಣು ಕೊಡುವುವು

ಬಿಸಿಲು ಗಾಳಿ ಮಳೆಯು ಚಳಿಯು ಎಲ್ಲ ನನ್ನ ಮಿತ್ರರು
ಅವರ ಜೊತೆಗೆ ಸಹ ಬಾಳ್ವೆಯು ಕೃತಜ್ಞತೆಗೆ ಪಾತ್ರರು

ಒಳಗೆ ನೋವೆ ತುಂಬಿಕೊಂಡೆ ಹರಿಯುತಿಹುದು ಜೀವನ
ಹಸಿರು ನಗೆಯ ಹೊರಗೆ ತೋರೆ ಚೆಲುವಾಯಿತು ಈ ವನ

ಹೂವ ಮುಡಿದು ಫಲವ ಪಡೆದ ಸಂತಾನವ ಬೆಳೆಸುವೆ
ಪ್ರಾಣಿ ಪಕ್ಷಿಗಳಿಗಾಸರೆ ಕೊಡುತ ಅವನು ಬೆಳೆಸುವೆ

ಎಲೆಯುದುರಿಸಿ ಚಿಗುರು ಪಡೆದು ಉಡಿಗೆ ಬೇರೆಯಾದರೂ
ಬೇರದೊಂದೆ ದೇಹವೊಂದೆ ಮೇಲುಪರೆಯು ಹೋದರೂ

ನನ್ನಚೆಲುವ ಕಂಡು ಮಣಿವ ಭಕ್ತರಿಹರು ಜಗದಲಿ
ನನ್ನ ಸೊಗವ ನೋಡಿ ಹಾಡಿ ದಣಿಯದಿಹರು ಬೆರಗಲಿ

ಹುಟ್ಟು ಸಾವು ನೋವು ಬೇವು ಎಂದು ನಾನು ಚಿಂತಿಸೆ
ಸಾಗರದೀ ಸೃಷ್ಟಿಯಲ್ಲಿ ಅಲೆಯು ನಾನು ಯೋಚಿಸೆ

ಅದರಿಂದಲೇ ಮರವಾದರು ನಾನು ಅಮರ ಎಂದಿಗು
ಮರ್ತ್ಯ ಮನುಜ ನೀನು ಕೂಡ ಅಮರನಾಗು ಎಂದಿಗು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...