Home / ಕವನ / ಕವಿತೆ / ಏನೋ ಬೇಡ್ತಾದ ಜೀವಾ

ಏನೋ ಬೇಡ್ತಾದ ಜೀವಾ

ಉಣ್ಣಾಕ್ಕೆತೆ ಉಡಾಕೈತೆ ತಿನ್ನಾಕೈತೆ ತೊಡಕೈತೆ
ಏನೋ ಬೇಡ್ತಾದ ಜೀವಾ ಸಾಲ್ದು ಅಂತಾದ ಜೀವಾ ||

ನೋಡಾಕೈತೆ ಕೂಡಾಕೈತೆ ಮುಟ್ಟಾಕೈತೆ ಮೂಸಾಕೈತೆ
ದುಡಿಯಾಕೈತೆ ಪಡೆಯಾಕೈತೆ ಇಡಾಕೈತೆ ಕೊಡಾಕೈತೆ
ಗಟ್ಟಿ ಮುಟ್ಟಾ ಗೂಳ್ಯಂಗೈತೆ ಸ್ವತಂತ್ರೈತೆ ಗಾಳ್ಯಂಗೈತೆ
ನಕ್ಕೂ ನಕ್ಕೂ ಅರಳತೈತೆ ಅತ್ತು ಅತ್ತು ಮಂಚಗೊಂತೈತೆ || ಏನೋ ||

ಓದಾಕೈತೆ ತಿಳಕೊಂದೈತೆ ವಾದಕ್ಕೈತೆ ಬೋಧಕೈತೆ
ಬಂಧು ಬಳ ಎಲ್ಲಾ ಐತೆ ಒಳ್ಳೆಕೆಟ್ಟ ಗೆಳೆತಾನೈತೆ
ಚೆಂದ ಚೆಲ್ಲಿ ಹರವ್ಯಾಡೈತೆ ಅಂದದ ಗಾನಾ ಹರದಾಡೈತೆ |
ಆಡಾಕ್ ನೂರಾರಾಟಾ ಐತೆ ಓಡಾಕ ಬಟ್ಟಂಬಯಲೇ ಐತೆ ||  ಏನೋ ||

ಇಳಿಯಾಕ್ ಸಾಗರದಾಳಾ ಐತೆ ಏರಾಕಾಕಾಶ್ ತೆರೆದೇ ಐತೆ
ಓಕುಳಿಯಾಡೋ ಬಣ್ಣಾ ಐತೆ ಬಣ್ಣಾ ಬಣ್ಣದ ಬಟ್ಟೆ ಐತೆ
ಕಣ್ಣು ಮಿಟುಕಿ ಕರಿತೈತೆ ಹೂವು ಬಣ್ಣಾ ಉಕ್ಕಿ ಕರಿತೈತೆ ಹಣ್ಣು
ತುಂಬಿದ ಮೈಯಿ ತುಳಿಕ್ಕಾಡೈತೆ ಎಳ್ಡೂ ಸೇರಿ ಟಳಕಾಡೈತೆ || ಏನೋ ||

ಮ್ಯಾಲೆ ಕುಂದ್ರೋ ಗದ್ಗೀ ಐತೆ ಆಳೋ ಗೀಳೋ ದಂಡ ಐತೆ
ಸೇವಾ ಮಾಡೋ ಕೈಕಾಲೈತೆ ಬೇಡಿದ್ದೆಲ್ಲಾ ಬಗಲಾಗೈತೆ
ಲೆಕ್ಕಾ ಇಲ್ದಂಗೆ ಚಿಕ್ಕೀ ಐತೆ ಚಂದ್ರಾ ಸೂರ್ಯ ಕಣ್ಣಿಡತೈತೆ
ಎಲ್ಲಕ್ಹಾಸ್ಗಿ ಭೂಮಿ ಐತೆ ನಂದೂ ಅಂಬೋ ಸೀಮಿ ಐತೆ

ಸತ್ರೂ ಕೂಡಾ ಏನೋ ಐತೆ ಮತ್ತೆ ಮತ್ತೆ ಜನುಮ ಐತೆ
ಬೇಕಾದಷ್ಟು ದೇವ್ರು ಐತೆ ನಡೆಯಾಕೆಷ್ಟೊ ಧರ್ಮಾ ಐತೆ || ಏನೋ ||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...