ಲಿಂಗಮ್ಮನ ವಚನಗಳು – ೫೫

ಮರ್ತ್ಯದಲ್ಲಿ ಹುಟ್ಟಿ ಎತ್ತಲೆಂದರಿಯೆ.
ಕತ್ತಲೆಯೊಳು ಮುಳುಗಿ,
ಕಾಮನ ಬಲೆಯೊಳು ಸಿಲ್ಕಿದ ಎಗ್ಗ
ಮನುಜರಿರಾ, ನೀವು ಕೇಳಿರೋ.
ನಿಮ್ಮ ಇರವು ಎಂತೆಂದರೆ,
ಕಾಯವೆಂದರೆ ಕಳವಳಕ್ಕೊಳಗಾಯಿತ್ತು.
ಜೀವವೆಂದರೆ ಅರುಹು ಮರವೆಯೊಳಗಾಯಿತ್ತು.
ಮನವೆಂದರೆ ಸಚರಾಚರವನೆಲ್ಲವನಾಚರಿಸುವದಕ್ಕೆ
ಒಳಗಾಯಿತ್ತು.  ಪ್ರಾಣವೆಂದರೆ ಇವೆಲ್ಲವನು
ಆಡಿಸಿ ನೋಡುವದಕ್ಕೆ ಒಳಗಾಯಿತ್ತು.
ಇದರೊಳಗೆ ಬಿದ್ದು ಏಳಲಾರದ ಬುದ್ಧಿಹೀನರಿರಾ,
ನೀವು ಕೇಳಿ, ಹೇಳಿಹೆನು.
ನಮ್ಮ ಶರಣರು ಜಗದೊಳಗೆ ಹುಟ್ಟಿ
ಜಗವನೆ ಮರೆದು, ಎಚ್ಚತ್ತು, ಚಿತ್ತವ ಧಾನವಮಾಡಿ,
ಕಳವಳಕ್ಕೊಳಗಾಗಿರ್ದ ಕಾಯವನೆ
ಸರ್ವಾಂಗ ಲಿಂಗವನೆ ಮಾಡಿದರು.
ಅರುಹುಮರವೆಯೊಳಗಾಗಿರ್ದ ಜೀವನ ಬುದ್ಧಿಯನೆ,
ಪರಮನ ಬುದ್ಧಿಯ ಮಾಡಿದರು.
ಸಚರಾಚರವ ಚರಿಸುವದಕ್ಕೊಳಗಾಗಿರ್ದ
ಮನವನೆ ಅರುಹ ಮಾಡಿದರು.
ಆಡಿಸಿ ನೋಡೋದಕ್ಕೆ ಒಳಗಾಗಿರ್ದ
ಪ್ರಾಣವನೆ ಲಿಂಗವ ಮಾಡಿದರು.
ಈ ಸರ್ವಾಂಗವನು ಲಿಂಗವನೆ ಮಾಡಿ,
ಆ ಲಿಂಗವನು ಕಂಗಳಲ್ಲಿಯೆ ಹೆರೆಹಿಂಗದೆ ನೋಡಿ,
ಮಂಗಳದ ಮಹಾಬೆಳಗಿನಲ್ಲಿ ಬಯಲಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನೋ ಬೇಡ್ತಾದ ಜೀವಾ
Next post ನಗೆ ಡಂಗುರ – ೧೭೫

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…