ಮರ್ತ್ಯದಲ್ಲಿ ಹುಟ್ಟಿ ಎತ್ತಲೆಂದರಿಯೆ.
ಕತ್ತಲೆಯೊಳು ಮುಳುಗಿ,
ಕಾಮನ ಬಲೆಯೊಳು ಸಿಲ್ಕಿದ ಎಗ್ಗ
ಮನುಜರಿರಾ, ನೀವು ಕೇಳಿರೋ.
ನಿಮ್ಮ ಇರವು ಎಂತೆಂದರೆ,
ಕಾಯವೆಂದರೆ ಕಳವಳಕ್ಕೊಳಗಾಯಿತ್ತು.
ಜೀವವೆಂದರೆ ಅರುಹು ಮರವೆಯೊಳಗಾಯಿತ್ತು.
ಮನವೆಂದರೆ ಸಚರಾಚರವನೆಲ್ಲವನಾಚರಿಸುವದಕ್ಕೆ
ಒಳಗಾಯಿತ್ತು. ಪ್ರಾಣವೆಂದರೆ ಇವೆಲ್ಲವನು
ಆಡಿಸಿ ನೋಡುವದಕ್ಕೆ ಒಳಗಾಯಿತ್ತು.
ಇದರೊಳಗೆ ಬಿದ್ದು ಏಳಲಾರದ ಬುದ್ಧಿಹೀನರಿರಾ,
ನೀವು ಕೇಳಿ, ಹೇಳಿಹೆನು.
ನಮ್ಮ ಶರಣರು ಜಗದೊಳಗೆ ಹುಟ್ಟಿ
ಜಗವನೆ ಮರೆದು, ಎಚ್ಚತ್ತು, ಚಿತ್ತವ ಧಾನವಮಾಡಿ,
ಕಳವಳಕ್ಕೊಳಗಾಗಿರ್ದ ಕಾಯವನೆ
ಸರ್ವಾಂಗ ಲಿಂಗವನೆ ಮಾಡಿದರು.
ಅರುಹುಮರವೆಯೊಳಗಾಗಿರ್ದ ಜೀವನ ಬುದ್ಧಿಯನೆ,
ಪರಮನ ಬುದ್ಧಿಯ ಮಾಡಿದರು.
ಸಚರಾಚರವ ಚರಿಸುವದಕ್ಕೊಳಗಾಗಿರ್ದ
ಮನವನೆ ಅರುಹ ಮಾಡಿದರು.
ಆಡಿಸಿ ನೋಡೋದಕ್ಕೆ ಒಳಗಾಗಿರ್ದ
ಪ್ರಾಣವನೆ ಲಿಂಗವ ಮಾಡಿದರು.
ಈ ಸರ್ವಾಂಗವನು ಲಿಂಗವನೆ ಮಾಡಿ,
ಆ ಲಿಂಗವನು ಕಂಗಳಲ್ಲಿಯೆ ಹೆರೆಹಿಂಗದೆ ನೋಡಿ,
ಮಂಗಳದ ಮಹಾಬೆಳಗಿನಲ್ಲಿ ಬಯಲಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****
Related Post
ಸಣ್ಣ ಕತೆ
-
ಸ್ನೇಹಲತಾ
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…
-
ಹನುಮಂತನ ಕಥೆ
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
-
ದುರಾಶಾ ದುರ್ವಿಪಾಕ
"ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…
-
ಮೃಗಜಲ
"People are trying to work towards a good quality of life for tomorrow instead of living for today, for many… Read more…