ಬಯಲು ಬಯಕೆ

ಕತ್ತಲಲ್ಲಿ ನಡುರಾತ್ರಿಯಲ್ಲಿ ಸುಡುಗಾಡಿನಲ್ಲಿ ನಡೆವ
ಬೆತ್ತಲಾಗಿ ಬರಿ ಹುಚ್ಚನಂತೆ ಸುತ್ತಾಡಿ ನೋಡಿಬಿಡುವ

ಹರಕು ಅಂಗಿಯಲಿ ಪರಕು ಮೈಯಿಯಲಿ ಭಿಕ್ಷೆ ಬೇಡಲೆಂಬ
ಸರಕು ಗಿರಕುಗಳ ತುತ್ತ ತೂರಿ ಕುಣಿದಾಡಿ ನಲಿಯಲೆಂಬ

ಜನರ ಜಾತ್ರೆಯಲಿ ನೂರು ವೇಷಗಳ ತೊಟ್ಟು ಮೆರೆಯಲೆಂಬ
ಮನವು ಒಯ್ದ ಕಡೆ ಊರು ಊರುಗಳ ಬೆದಕಿ ತಿರುಗಲೆಂಬ

ಹಗಲು ರಾತ್ರಿಗಳ ಹುಟ್ಟು ಸ್ವಾವುಗಳ ಹೆಣ್ಣು ಗಂಡು ಭೇದ
ಹೊಗದ ರೂಪವನು ಜಗದಿ ತಾಳಿ ನಗುತಳುತ ಬಾಳುವಂಥ

ಬಿಡುತೆ ಜೀವನವ ಬಾಳಲೆಂದು ಮನ ಮನನ ಮಾಡುತಿಹುದು
ಸುಡುತ ಚಿಂತೆಗಳ ಒಡಕು ಕಂತೆಗಳ ತೊರೆವುದೆಂದು ಬಹುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀರು ಪಾಲಾದ ‘ನೀರಾ’
Next post ನಗೆ ಡಂಗುರ – ೧೬೪

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…