Home / ಕವನ / ಕವಿತೆ / ಹೈದರಾಬಾದಿನಲ್ಲಿ

ಹೈದರಾಬಾದಿನಲ್ಲಿ

ಮೊದಲು ಹವೆಯ ಬಗ್ಗೆ ಮಾತಾಡಿದೆವು
ಬಿಸಿಲ ಬೇಗೆ-ನೆಲದ ಧಗೆ-ಧೂಳು ಸುಳಿಗಾಳಿ
ಪಕೋಡಾ ಮಸಾಲೆ ಮೆಣಸು
ಕಾಯಿಸುವ ಹೊಗೆ
ಸೈಕಲು ರಿಕ್ಷಾಗಳ ಅಗತ್ಯ-ಅನಗತ್ಯ
ಎಮ್ಮೆಗಳ ಅಸಾಂಗತ್ಯ
ಹೈದರಾಬಾದಿನ ರಚನೆಯ ಕುರಿತು ಮಾತಾಡಿದೆವು
ವಾಸ್ತುಶಿಲ್ಪದ ಪ್ರಕಾರ
ಇದಕ್ಕೆ ಆಕಾರವಿಲ್ಲ ಆದರೆ
ನಡೆದಲ್ಲಿ ಬೆಳೆಯುವ
ನೋಡಿದಲ್ಲಿ ಏಳುವ
ಪವಾಡವಿದೆ
ನಿಜಾಮನನ್ನು ಬಯ್ದೆವು

ಒಬ್ಬರು ಹೇಳಿದರು-
ಹತ್ತು ವರ್ಷಗಳ ಕೆಳಗೆ
ನಾನೀ ನಗರವನ್ನು ಪ್ರೀತಿಸಿದ್ದೆ ಆಗ
ಗಾಳಿ ಬೆಳಕು ಮಳೆಯಿತ್ತು.  ಇಷ್ಟು ಜನ ಇರಲಿಲ್ಲ.
ಇನ್ನೊಬ್ಬರೆಂದರು-
ಹಿಂದೆ ಇದರ ಹೆಸರು ಭಾಗ್ಯನಗರ
ಒಂದು ಸಣ್ಣ ಪೇಟೆ
ಅದಕ್ಕೂ ಮೊದಲು ಇಲ್ಲಿ ಜನರೇ ಇರಲಿಲ್ಲ.
ಮೊತ್ತೊಬ್ಬರು ಕೇಳಿದರು-
ಹಾಗಾದರೆ ಈ ಶತಮಾನದ ಮೇಲೆ
ಇದರ ಅವಸ್ಥೆ ಏನು?
ಹೀಗೆ ಪ್ರಾಕ್ತನಾದ ರಹಸ್ಯ ಮತ್ತು
ಭವಿಷ್ಯದ ಆತಂಕದ ಮಧ್ಯೆ
ಹೈದರಾಬಾದಿಗಾಗಿ ನಾವು ಪರಿತಪಿಸಿದೆವು.

ನಾನೆಂದೆ-
ನನಗೆ ಈ ಹೈದರಾಬಾದು ಸುತ್ತಬೇಕು
ಇದರ ಆರಂಭ ಮತ್ತು ಅಂತ್ಯವನ್ನು ನೋಡಬೇಕು
ಇದರ ಜೋತುಬಿದ್ದ ಮಹಡಿಗಳನ್ನೂ
ಮತಾಡುತ್ತ ನಿಂತ ಮನುಷ್ಯರನ್ನೂ ದಾಟಿ
ಆಂಧ್ರಕ್ಕೆ ಆಂಧ್ರದಿಂದ ಹೊರಕ್ಕೆ
ತಲುಪುವ ದಾರಿಯನ್ನು ಕಂಡು ಹುಡುಕಬೇಕು.
ಆಚೆಗೆ ಕುಳಿತಿದ್ದ ವ್ಯಕ್ತಿಯೊಬ್ಬ ನಕ್ಕು ಹೇಳಿದ-
ಆಂಧ್ರವೆಂದರೆ ಇಂದಿರಾಗಾಂಧಿಯ ಸೀರೆ
ತೆಲಂಗಾಣ ಮಾತ್ರ ಬೇರೆ.
ನಾನು ತೆಲಂಗಾಣದ ಕವಿ.
ಯಾರೋ ಎತ್ತರದ ಧ್ವನಿಯಲ್ಲಿ ಹೇಳಿದರು-
ಎಲೆ ಕವಿ,
ನಿನಗೆ ಪ್ರಣಾಮ.  ನಿನಗಾಗಿ ನಾವು
ಎಷ್ಟು ಕಾಲದಿಂದ ಕಾಯುತ್ತಿಲ್ಲ!
ನಕ್ಸಲೀಯ,
ನಿನ್ನ ಗಡ್ಡ ಮೀಸೆಯ ಹಿಂದೆ ಮನುಷ್ಯ ಜನಾಂಗದ ಎಷ್ಟು
ಸಂಕಟವನ್ನು ಹಿಡಿದಿಟ್ಟಿದ್ದೀಯ.
ಅವನೆಂದ-
ನನ್ನ ನಕ್ಸಲೀಯ ಗೆಳೆಯನೊಬ್ಬ
ಮುಶೀರಾಬಾದ್ ಜೈಲಿನಿಲ್ಲಿದ್ದಾನೆ.
ಆತ ಕವಿತೆ ಬರೆಯಲಿಲ್ಲ.
ಆದರೂ ಕವಿಯಾಗಿದ್ದ.
ಆಮೇಲೆ ಎಲ್ಲರೂ ಕವಿತೆಯ ಬಗ್ಗೆ ಮಾತಾಡುತ್ತ ಕೂತರು.
ನಾನೆಂದೆ-
ನನಗೆ ಈ ಕೂಡಲೇ ಮುಶೀರಾಬಾದಿಗೆ ಹೋಗಬೇಕು.
ಯಾರು ಕೇಳಿಸಿಕೊಳ್ಳಲಿಲ್ಲ.

ಮತ್ತೆ ಹೊರ ಬಂದಾಗ ರಾತ್ರಿ ಬಹಳ ಸರಿದಿತ್ತು
ಅಬೀಡ್ಸಿನಿಂದ ಕೋಠಿಯ ನಡುವೆ
ಏನಿತ್ತು ಏನಿರಲಿಲ್ಲ
ಬೀದಿಯಲ್ಲಿ ಜನರಿದ್ದರೆ
ಇವರ ಕಣ್ಣುಗಳಲ್ಲಿ ಕಲ್ಲಿದ್ದಲೆ
ಯಾರೋ ನನ್ನನ್ನು ಕೂಗಿದರೆ
ನೆನಪಿಲ್ಲ
ಮಧ್ಯೆ ಒಂದೆರಡು ಬಾರಿ ಕಕ್ಕಿದ್ದು ಮಾತ್ರ ಗೊತ್ತು
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ