ಹೈದರಾಬಾದಿನಲ್ಲಿ

ಮೊದಲು ಹವೆಯ ಬಗ್ಗೆ ಮಾತಾಡಿದೆವು
ಬಿಸಿಲ ಬೇಗೆ-ನೆಲದ ಧಗೆ-ಧೂಳು ಸುಳಿಗಾಳಿ
ಪಕೋಡಾ ಮಸಾಲೆ ಮೆಣಸು
ಕಾಯಿಸುವ ಹೊಗೆ
ಸೈಕಲು ರಿಕ್ಷಾಗಳ ಅಗತ್ಯ-ಅನಗತ್ಯ
ಎಮ್ಮೆಗಳ ಅಸಾಂಗತ್ಯ
ಹೈದರಾಬಾದಿನ ರಚನೆಯ ಕುರಿತು ಮಾತಾಡಿದೆವು
ವಾಸ್ತುಶಿಲ್ಪದ ಪ್ರಕಾರ
ಇದಕ್ಕೆ ಆಕಾರವಿಲ್ಲ ಆದರೆ
ನಡೆದಲ್ಲಿ ಬೆಳೆಯುವ
ನೋಡಿದಲ್ಲಿ ಏಳುವ
ಪವಾಡವಿದೆ
ನಿಜಾಮನನ್ನು ಬಯ್ದೆವು

ಒಬ್ಬರು ಹೇಳಿದರು-
ಹತ್ತು ವರ್ಷಗಳ ಕೆಳಗೆ
ನಾನೀ ನಗರವನ್ನು ಪ್ರೀತಿಸಿದ್ದೆ ಆಗ
ಗಾಳಿ ಬೆಳಕು ಮಳೆಯಿತ್ತು.  ಇಷ್ಟು ಜನ ಇರಲಿಲ್ಲ.
ಇನ್ನೊಬ್ಬರೆಂದರು-
ಹಿಂದೆ ಇದರ ಹೆಸರು ಭಾಗ್ಯನಗರ
ಒಂದು ಸಣ್ಣ ಪೇಟೆ
ಅದಕ್ಕೂ ಮೊದಲು ಇಲ್ಲಿ ಜನರೇ ಇರಲಿಲ್ಲ.
ಮೊತ್ತೊಬ್ಬರು ಕೇಳಿದರು-
ಹಾಗಾದರೆ ಈ ಶತಮಾನದ ಮೇಲೆ
ಇದರ ಅವಸ್ಥೆ ಏನು?
ಹೀಗೆ ಪ್ರಾಕ್ತನಾದ ರಹಸ್ಯ ಮತ್ತು
ಭವಿಷ್ಯದ ಆತಂಕದ ಮಧ್ಯೆ
ಹೈದರಾಬಾದಿಗಾಗಿ ನಾವು ಪರಿತಪಿಸಿದೆವು.

ನಾನೆಂದೆ-
ನನಗೆ ಈ ಹೈದರಾಬಾದು ಸುತ್ತಬೇಕು
ಇದರ ಆರಂಭ ಮತ್ತು ಅಂತ್ಯವನ್ನು ನೋಡಬೇಕು
ಇದರ ಜೋತುಬಿದ್ದ ಮಹಡಿಗಳನ್ನೂ
ಮತಾಡುತ್ತ ನಿಂತ ಮನುಷ್ಯರನ್ನೂ ದಾಟಿ
ಆಂಧ್ರಕ್ಕೆ ಆಂಧ್ರದಿಂದ ಹೊರಕ್ಕೆ
ತಲುಪುವ ದಾರಿಯನ್ನು ಕಂಡು ಹುಡುಕಬೇಕು.
ಆಚೆಗೆ ಕುಳಿತಿದ್ದ ವ್ಯಕ್ತಿಯೊಬ್ಬ ನಕ್ಕು ಹೇಳಿದ-
ಆಂಧ್ರವೆಂದರೆ ಇಂದಿರಾಗಾಂಧಿಯ ಸೀರೆ
ತೆಲಂಗಾಣ ಮಾತ್ರ ಬೇರೆ.
ನಾನು ತೆಲಂಗಾಣದ ಕವಿ.
ಯಾರೋ ಎತ್ತರದ ಧ್ವನಿಯಲ್ಲಿ ಹೇಳಿದರು-
ಎಲೆ ಕವಿ,
ನಿನಗೆ ಪ್ರಣಾಮ.  ನಿನಗಾಗಿ ನಾವು
ಎಷ್ಟು ಕಾಲದಿಂದ ಕಾಯುತ್ತಿಲ್ಲ!
ನಕ್ಸಲೀಯ,
ನಿನ್ನ ಗಡ್ಡ ಮೀಸೆಯ ಹಿಂದೆ ಮನುಷ್ಯ ಜನಾಂಗದ ಎಷ್ಟು
ಸಂಕಟವನ್ನು ಹಿಡಿದಿಟ್ಟಿದ್ದೀಯ.
ಅವನೆಂದ-
ನನ್ನ ನಕ್ಸಲೀಯ ಗೆಳೆಯನೊಬ್ಬ
ಮುಶೀರಾಬಾದ್ ಜೈಲಿನಿಲ್ಲಿದ್ದಾನೆ.
ಆತ ಕವಿತೆ ಬರೆಯಲಿಲ್ಲ.
ಆದರೂ ಕವಿಯಾಗಿದ್ದ.
ಆಮೇಲೆ ಎಲ್ಲರೂ ಕವಿತೆಯ ಬಗ್ಗೆ ಮಾತಾಡುತ್ತ ಕೂತರು.
ನಾನೆಂದೆ-
ನನಗೆ ಈ ಕೂಡಲೇ ಮುಶೀರಾಬಾದಿಗೆ ಹೋಗಬೇಕು.
ಯಾರು ಕೇಳಿಸಿಕೊಳ್ಳಲಿಲ್ಲ.

ಮತ್ತೆ ಹೊರ ಬಂದಾಗ ರಾತ್ರಿ ಬಹಳ ಸರಿದಿತ್ತು
ಅಬೀಡ್ಸಿನಿಂದ ಕೋಠಿಯ ನಡುವೆ
ಏನಿತ್ತು ಏನಿರಲಿಲ್ಲ
ಬೀದಿಯಲ್ಲಿ ಜನರಿದ್ದರೆ
ಇವರ ಕಣ್ಣುಗಳಲ್ಲಿ ಕಲ್ಲಿದ್ದಲೆ
ಯಾರೋ ನನ್ನನ್ನು ಕೂಗಿದರೆ
ನೆನಪಿಲ್ಲ
ಮಧ್ಯೆ ಒಂದೆರಡು ಬಾರಿ ಕಕ್ಕಿದ್ದು ಮಾತ್ರ ಗೊತ್ತು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನುಂಟು ಮಾರಾಯ್ರೆ
Next post ಗೆಳತಿ, ಅತ್ತು ಬಿಡು ಒಂದು ಸಲ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys