Home / ಕವನ / ಕವಿತೆ / ಗೆಳತಿ, ಅತ್ತು ಬಿಡು ಒಂದು ಸಲ

ಗೆಳತಿ, ಅತ್ತು ಬಿಡು ಒಂದು ಸಲ

ಗೆಳತಿ ಅತ್ತು ಬಿಡು ಒಂದು ಸಲ
ಈ ಆಷಾಢ ಮಳೆಯ ಮುಸುಲಧಾರೆಯಂತೆ
ಗೆಳತಿ ತೂರಿ ಬಿಡು ಮನದ ಜಡಭಾವನೆಗಳನ್ನು
ಈ ಸುಂಟರಗಾಳಿಯಂತೆ,
ಗೆಳತಿ ತೇಲಿಸಿಬಿಡು ಅವರಿವರ ಮಾತುಗಳನ್ನು
ಮಹಾಪೂರದಲ್ಲಿ ಕಡ್ಡಿ ಕಸದಂತೆ
ಗೆಳತಿ, ನೇಣು ಹಾಕಿಕೊಳ್ಳಬೇಡ
ಬಾವಿ ಬೀಳಬೇಡ, ಮನೆಯವರ
ಒದೆತ ತಿನ್ನಲೂ ಬೇಡ.
ಒಳಗೊಳಗೆ ಬೆಂಕಿ ಮಂಜುಗಡ್ಡೆ ಆಗಲೂ ಬೇಡ
ಬಾ! ನೀನು ನೀನಾಗು ಬಾ
ಬೆಳಗಿನ ಎಳೆ ಬಿಸಿಲಿನಂತೆ
ನಸುಕಿನ ಹೂವಿನಂತೆ
ಕಡಲ ತೊರೆಯ ನೊರೆಯಂತೆ
ಚಿಗುರು ಹುಲ್ಲಿನಂತೆ
ಬೆಳಗಿನ ಮೃದು ಮಣ್ಣಿನಂತೆ.
ಆದರೂ ನೀನು ನೀನಾಗುತ್ತಿಲ್ಲ
ಕೊನೆಗೆ ನೀನು ನೀನಾಗಲೇ ಇಲ್ಲ.
ನಿನ್ನ ಸಹನೆಯ ರಕ್ತ
ನನ್ನಲ್ಲಿಳಿಸಿದೆ ಕಿಚ್ಚು
ಮೊಗ್ಗೆಗಳೇ ಹೂವುಗಳಾಗಿ ಯಾಕೆ ಅರಳುತ್ತೀರಿ
ಅನ್ನುತ್ತೇನೆ
ಯಾವ ಕಟುಕರು ಮುಡಿದುಕೊಳ್ಳಲು
ನೀವು ಚಿತ್ತಾರದ ರಂಗಿನ ಸೊಬಗಾಗುತ್ತೀರಿ,
ಚಿನ್ನರ ಲೋಕದ ಚೆಲುವಿನಲ್ಲಷ್ಟೇ ಖುಷಿ ನಿಮಗೆ
ಭವಿಷ್ಯದ ಭೋರ್ಗರೆವ ಹೊಡೆತಕ್ಕೆ ಸಿಗುತ್ತಿರಲ್ಲ;
ಪ್ರಕೃತಿ ಮಾತೆ
ಅದೆಷ್ಣು ಮುಗ್ಧ ಮೊಗ್ಗುಗಳಿಗೆ
ಜನ್ಮ ಕೊಟ್ಟು ಕಿಚ್ಚಿಡುವ
ನಿನ್ನ ಬಸಿರಿನ್ನೂ ಶಾಂತವಾಗಿಲ್ಲವೆ?
ಸಾಕಿನ್ನು ಬಂಜರಾಗು
ಇದ್ದ ಮೊಗ್ಗುಗಳಿಗೆ ಇದೇ ಕಡೆಯೆಂದು
ಶಾಪವೂ ಹಾಕು
ಒಮ್ಮೆ ನೀನು ಬರಡಾಗು
ಮರುಭೂಮಿಯಾಗು
ಇದ್ದ ನಾಯಿಗಳೆಲ್ಲ ಬೊಗಳಿ
ಬೊಬ್ಬೆ ಹೊಡೆದು ಬಿದ್ದುಹೋಗುವಾಗ
ನೀನು ಓಯಸಿಸ್ ಆಗು
ತುಂಬಿ ಹರಿವ ಗಂಗೆ ಮಾತ್ರ
ಎಂದೂ ಆಗಬೇಡ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...