ಗೆಳತಿ, ಅತ್ತು ಬಿಡು ಒಂದು ಸಲ

ಗೆಳತಿ ಅತ್ತು ಬಿಡು ಒಂದು ಸಲ
ಈ ಆಷಾಢ ಮಳೆಯ ಮುಸುಲಧಾರೆಯಂತೆ
ಗೆಳತಿ ತೂರಿ ಬಿಡು ಮನದ ಜಡಭಾವನೆಗಳನ್ನು
ಈ ಸುಂಟರಗಾಳಿಯಂತೆ,
ಗೆಳತಿ ತೇಲಿಸಿಬಿಡು ಅವರಿವರ ಮಾತುಗಳನ್ನು
ಮಹಾಪೂರದಲ್ಲಿ ಕಡ್ಡಿ ಕಸದಂತೆ
ಗೆಳತಿ, ನೇಣು ಹಾಕಿಕೊಳ್ಳಬೇಡ
ಬಾವಿ ಬೀಳಬೇಡ, ಮನೆಯವರ
ಒದೆತ ತಿನ್ನಲೂ ಬೇಡ.
ಒಳಗೊಳಗೆ ಬೆಂಕಿ ಮಂಜುಗಡ್ಡೆ ಆಗಲೂ ಬೇಡ
ಬಾ! ನೀನು ನೀನಾಗು ಬಾ
ಬೆಳಗಿನ ಎಳೆ ಬಿಸಿಲಿನಂತೆ
ನಸುಕಿನ ಹೂವಿನಂತೆ
ಕಡಲ ತೊರೆಯ ನೊರೆಯಂತೆ
ಚಿಗುರು ಹುಲ್ಲಿನಂತೆ
ಬೆಳಗಿನ ಮೃದು ಮಣ್ಣಿನಂತೆ.
ಆದರೂ ನೀನು ನೀನಾಗುತ್ತಿಲ್ಲ
ಕೊನೆಗೆ ನೀನು ನೀನಾಗಲೇ ಇಲ್ಲ.
ನಿನ್ನ ಸಹನೆಯ ರಕ್ತ
ನನ್ನಲ್ಲಿಳಿಸಿದೆ ಕಿಚ್ಚು
ಮೊಗ್ಗೆಗಳೇ ಹೂವುಗಳಾಗಿ ಯಾಕೆ ಅರಳುತ್ತೀರಿ
ಅನ್ನುತ್ತೇನೆ
ಯಾವ ಕಟುಕರು ಮುಡಿದುಕೊಳ್ಳಲು
ನೀವು ಚಿತ್ತಾರದ ರಂಗಿನ ಸೊಬಗಾಗುತ್ತೀರಿ,
ಚಿನ್ನರ ಲೋಕದ ಚೆಲುವಿನಲ್ಲಷ್ಟೇ ಖುಷಿ ನಿಮಗೆ
ಭವಿಷ್ಯದ ಭೋರ್ಗರೆವ ಹೊಡೆತಕ್ಕೆ ಸಿಗುತ್ತಿರಲ್ಲ;
ಪ್ರಕೃತಿ ಮಾತೆ
ಅದೆಷ್ಣು ಮುಗ್ಧ ಮೊಗ್ಗುಗಳಿಗೆ
ಜನ್ಮ ಕೊಟ್ಟು ಕಿಚ್ಚಿಡುವ
ನಿನ್ನ ಬಸಿರಿನ್ನೂ ಶಾಂತವಾಗಿಲ್ಲವೆ?
ಸಾಕಿನ್ನು ಬಂಜರಾಗು
ಇದ್ದ ಮೊಗ್ಗುಗಳಿಗೆ ಇದೇ ಕಡೆಯೆಂದು
ಶಾಪವೂ ಹಾಕು
ಒಮ್ಮೆ ನೀನು ಬರಡಾಗು
ಮರುಭೂಮಿಯಾಗು
ಇದ್ದ ನಾಯಿಗಳೆಲ್ಲ ಬೊಗಳಿ
ಬೊಬ್ಬೆ ಹೊಡೆದು ಬಿದ್ದುಹೋಗುವಾಗ
ನೀನು ಓಯಸಿಸ್ ಆಗು
ತುಂಬಿ ಹರಿವ ಗಂಗೆ ಮಾತ್ರ
ಎಂದೂ ಆಗಬೇಡ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೈದರಾಬಾದಿನಲ್ಲಿ
Next post ಶಕುನ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

cheap jordans|wholesale air max|wholesale jordans|wholesale jewelry|wholesale jerseys