ಗುಬ್ಬಿಮರಿ

ಮಬ್ಬುಗವಿದು ಕತ್ತಲಾಗೆ
ಎತ್ತ ಏನು ಕಾಣದಾಗೆ
ಮಳೆಯ ಹನಿಯು ಮೊತ್ತವಾಗಿ
ಬಂದು ಮೊಗವ ತಿವಿಯುತಿರಲು
ಸತ್ತು ಬಿದ್ದ ಬಂಟನಂತೆ
ಇಳೆಯು ಸುಮ್ಮನೊರಗುತಿರಲು
ಕತ್ತನೆತ್ತಿ ಅತ್ತ ಇತ್ತ
ನೋಡುತಿಹುದು ಗುಬ್ಬಿ ಎತ್ತ
ತನ್ನ ಪಯಣ ಬೆಳೆಸಿತೋ!
ತನ್ನ ಮನವ ಕಳಿಸಿತೋ!

ಮೇಲಿನಿಂದ ಬಿದ್ದ ಮರಿ!
ಸುತ್ತಲಿಹವು ನಾಯಿ ನರಿ!
ಭೋರೆಂದು ಗಾಳಿಮೊಳಗು!
ನೀರೆ ನೀರು ಮೇಲು ಕೆಳಗು!
ಎತ್ತಣಿಂದೆತ್ತ ಪಯಣ?
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು!

ಮೋಡದಾಚೆ ತಮ್ಮ ಬೆಳಕ
ಬಯ್ತಿರಿಸಿತು ಅರಿಲ ಗಣವು.
ಮನೆಯೊಳೆಲ್ಲ ನಗೆಯ ಬೀರಿ
ನಲಿಯುತಿತ್ತು ಮರ್‍ತ್ಯಗಣವು.
ಮರಿಯು ನಿಲ್ಲಲದರ ಸಾವು
ಬರಲದೊಂದೆ, ಒಂದೆ, ಕ್ಷಣವು!
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು!

ರಕ್ತಪಾತದಿಂದ ಬಲಿತ
ರಾಜ್ಯಗಳಿಗೆ ಸಾವೆ ಇಲ್ಲ!
ವ್ಯರ್‍ಥವಿರುವನರ್‍ಥಗಳಾ
ಮೊನೆಗೆ ಕೊನೆಯೆ ಕೊನೆಯೆ ಇಲ್ಲ!
ನಿರಪರಾಧಿಯಾದ ಬಾಳು
ಏಕೊ ಏನೊ! ಹಾಳು ಎಲ್ಲ!
ನಾಣ್ದೊರೆದನೊ ಲೋಕದೊಡೆಯ?
ಸಣ್ಣ ಮರಿಯ ಕಾವರಿಲ್ಲ!
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು

ಎತ್ತಿಕೊಂಡೆ ಸಣ್ಣ ಮರಿಯ,
ಅದುವೆ ಕಿರಿಯ, ನಾನು ಹಿರಿಯ!
ಚಳಿಗೆ ಮರಿಯ ಮೈ ಮುದುಡಿತು
ಅದಕೆ ನನ್ನ ಬಗೆ ಕದಡಿತು
ಕೈಯ್ಯಲಿಟ್ಟು ಕೊಂಡೆ ಇನ್ನು
ತೆರೆಯದಿರುವದದರ ಕಣ್ಣು
ನೆಲಮುಗಿಲಿನ ನಡುವೆ, ಮರಿಯೆ!
ಕೂಡಿ ನಡೆವೆವೆಂದೆನು!
ಇದ್ದ ದೇವನೆಡೆಗೆ ಹೋಗಿ
ಮೊರೆಯಿಡೋಣವೆಂದೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾತ್ಮನಿಗೆ
Next post ಕಾರುಗಳ್ಳೀ ವೀರಾಜಯ್ಯ

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys