ಗುಬ್ಬಿಮರಿ

ಮಬ್ಬುಗವಿದು ಕತ್ತಲಾಗೆ
ಎತ್ತ ಏನು ಕಾಣದಾಗೆ
ಮಳೆಯ ಹನಿಯು ಮೊತ್ತವಾಗಿ
ಬಂದು ಮೊಗವ ತಿವಿಯುತಿರಲು
ಸತ್ತು ಬಿದ್ದ ಬಂಟನಂತೆ
ಇಳೆಯು ಸುಮ್ಮನೊರಗುತಿರಲು
ಕತ್ತನೆತ್ತಿ ಅತ್ತ ಇತ್ತ
ನೋಡುತಿಹುದು ಗುಬ್ಬಿ ಎತ್ತ
ತನ್ನ ಪಯಣ ಬೆಳೆಸಿತೋ!
ತನ್ನ ಮನವ ಕಳಿಸಿತೋ!

ಮೇಲಿನಿಂದ ಬಿದ್ದ ಮರಿ!
ಸುತ್ತಲಿಹವು ನಾಯಿ ನರಿ!
ಭೋರೆಂದು ಗಾಳಿಮೊಳಗು!
ನೀರೆ ನೀರು ಮೇಲು ಕೆಳಗು!
ಎತ್ತಣಿಂದೆತ್ತ ಪಯಣ?
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು!

ಮೋಡದಾಚೆ ತಮ್ಮ ಬೆಳಕ
ಬಯ್ತಿರಿಸಿತು ಅರಿಲ ಗಣವು.
ಮನೆಯೊಳೆಲ್ಲ ನಗೆಯ ಬೀರಿ
ನಲಿಯುತಿತ್ತು ಮರ್‍ತ್ಯಗಣವು.
ಮರಿಯು ನಿಲ್ಲಲದರ ಸಾವು
ಬರಲದೊಂದೆ, ಒಂದೆ, ಕ್ಷಣವು!
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು!

ರಕ್ತಪಾತದಿಂದ ಬಲಿತ
ರಾಜ್ಯಗಳಿಗೆ ಸಾವೆ ಇಲ್ಲ!
ವ್ಯರ್‍ಥವಿರುವನರ್‍ಥಗಳಾ
ಮೊನೆಗೆ ಕೊನೆಯೆ ಕೊನೆಯೆ ಇಲ್ಲ!
ನಿರಪರಾಧಿಯಾದ ಬಾಳು
ಏಕೊ ಏನೊ! ಹಾಳು ಎಲ್ಲ!
ನಾಣ್ದೊರೆದನೊ ಲೋಕದೊಡೆಯ?
ಸಣ್ಣ ಮರಿಯ ಕಾವರಿಲ್ಲ!
ಕತ್ತ ನೆತ್ತಿ ಎದೆಯನೊತ್ತಿ
ಮರಿಯು ಹೆಜ್ಜೆಯೆಳೆಯಿತು.
ಸಾಯುವಂಥ ಬೀಳುವಂಥ
ಮಳೆಯ ಸೆಳೆತ ಸೆಳೆಯಿತು

ಎತ್ತಿಕೊಂಡೆ ಸಣ್ಣ ಮರಿಯ,
ಅದುವೆ ಕಿರಿಯ, ನಾನು ಹಿರಿಯ!
ಚಳಿಗೆ ಮರಿಯ ಮೈ ಮುದುಡಿತು
ಅದಕೆ ನನ್ನ ಬಗೆ ಕದಡಿತು
ಕೈಯ್ಯಲಿಟ್ಟು ಕೊಂಡೆ ಇನ್ನು
ತೆರೆಯದಿರುವದದರ ಕಣ್ಣು
ನೆಲಮುಗಿಲಿನ ನಡುವೆ, ಮರಿಯೆ!
ಕೂಡಿ ನಡೆವೆವೆಂದೆನು!
ಇದ್ದ ದೇವನೆಡೆಗೆ ಹೋಗಿ
ಮೊರೆಯಿಡೋಣವೆಂದೆನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾತ್ಮನಿಗೆ
Next post ಕಾರುಗಳ್ಳೀ ವೀರಾಜಯ್ಯ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…