Home / ಕವನ / ಕವಿತೆ / ಈಗಿಲ್ಲದ

ಈಗಿಲ್ಲದ


(ಈಗಿಲ್ಲದ) ಅಡಗೂಲಜ್ಜಿಯ ಮನೆಜಗಲಿಯಲ್ಲೊಬ್ಬ ಹುಡುಗ
ಮಲಗಿ ಸೊಳ್ಳೆ ಹೊಡೆಯುತ್ತ, ಆರಡಿ ದಪ್ಪ ಗಾದಿಯ ಕೆಳಗೆ
ಎಲ್ಲೋ ಸಿಕ್ಕ ಕೂದಲೆಳೆ ಕಾರಣ ನಿದ್ದೆಯಿಲ್ಲದೆ ಹೊರಳುವ
ರಾಜಕುಮಾರಿಯನ್ನು ನೆನೆಯುತ್ತ ನಿದ್ರಿಸಿದಾಗ ಕೊನೆಗೆ
ಅವನ ಮೈಮೇಲೆ ಒಂದೆರಡು ಜಿರಳೆಗಳು
ಹರಿದ ವಿರೋಧಾಭಾಸ


ಆಳೆತ್ತರ ಗಾಂಧೀಚಿತ್ರದ ಕೆಳಗೆ (ಈಗಿಲ್ಲದ) ಉಮೇಶರಾಯರು,
ಅವರ ಮುಂದೆ ಕಾಸರಗೋಡು ಚಳುವಳಿಯಲ್ಲಿ
ಧುಮುಕಲು ಹೊರಟ ನಮ್ಮ ಪ್ರತಿಜ್ಞೆ: ಸತ್ಯವನ್ನೇ ಹೇಳುವೆವು,
ಹಿಂಸೆ ಮಾಡೆವು.  ಆ ಮೇಲೆ ಸಬ್‌ಜೈಲಿನಲ್ಲಿ
ಎಷ್ಟೋ ಎತ್ತರದಲ್ಲಿದ್ದ ಬೆಳಕಿಂಡಿಯನ್ನು ನೋಡುತ್ತ
ಕಳೆದ ಒಂದು ರಾತ್ರಿ

(ಈಗಿಲ್ಲದ) ವಸಂತಭವನದ ಮಾಳಿಗೆಯಲ್ಲಿ
ಒಂದು ಕಡೆ ಬಾಣಲೆತುಂಬ ಕರಿಯುವ ಬಾಳೆಹಣ್ಣಿನ ಪೋಡಿ
ಇನ್ನೊಂದು ಕಡೆ ಈ ಊರನ್ನು ಸಾಂಸ್ಕೃತಿಕ ಕ್ರಾಂತಿಗೆ
ಬಡಿದೆಬ್ಬಿಸುತ್ತೇವೆಂದು ಒಂದೊಂದು ಬೀಡಿ
ಹಚ್ಚಿ ಸೇದುತ್ತ ಯಾವ ವಿಡಂಬನೆಯನ್ನೂ ಉದ್ದೇಶಿಸದೆ ಕಾಯುವ
ನಾಲ್ಕಾರು ಮಂದಿ ನಾವು


ಈ ಊರಿನ ಹುಡುಗಿಯರಿಗೆ ಹೊಸ ಹೊಸ ಫ್ಯಾಶನು ಕಲಿಸು
ಕಲಿಸಿ ಅವರನ್ನು ನಮ್ಮೊಂದಿಗೆ ತಿರುಗಲು ಬಿಡು
ಅದಕ್ಕೋಸ್ಕರ ನಮಗೆ ಒಂದೆರಡು ಜತೆ ಒಳ್ಳೆ ಶರ್ಟುಗಳನ್ನೂ
ಕೊಲ್ಲಾಪುರ ಚಪ್ಪಲಿಗಳನ್ನೂ ಹಾಗೆಯೆ ಸ್ವಲ್ಪ ಧೈರ್ಯವನ್ನೂ ಕೊಡು
-ಎಂದು ನಾವು ಒಳಗೊಳಗೇ ಪ್ರಾರ್ಥಿಸಿ ಖಂಡಿತಕ್ಕೂ ನಂಬಿದ
(ಈಗಿಲ್ಲದ) ದೇವರು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...