Home / ಲೇಖನ / ವಿಜ್ಞಾನ / ಅಸ್ತಮಾರೋಗಕ್ಕೆ ಸಂಜೀವಿನಿ ಸೂಜಿಮದ್ದು

ಅಸ್ತಮಾರೋಗಕ್ಕೆ ಸಂಜೀವಿನಿ ಸೂಜಿಮದ್ದು

ವಯಸ್ಸಾದವರು ಇಡೀ ರಾತ್ರಿ ಕೆಮ್ಮುತ್ತ ಅಕ್ಕಪಕ್ಕದವರಿಗೆ ನಿದ್ರೆಗೆಡಿಸುತ್ತಾರೆ. ಒಂದೊಂದು ಸಲ ಈ ಆಸ್ತಮಾ- ದಿಂದಲೇ ಸಾವನ್ನು ಅಪ್ಪುಬಹುದು. ಉಸಿರಾಟದ ತೊಂದರೆಯಿಂದ ನರಳುತ್ತಾರೆ. ಒಂದೊಂದು ಸಲ ರಕ್ತವೂ ಕಫದೊಂದಿಗೆ ಬಂದು ಪ್ರಾಣಾಂತಿಕವಾಗುತ್ತದೆ. ಇದು ಕೂಡ ವಯಸ್ಸಾದವರಿಗೆ ಕಾಡುವ ಕ್ರೂರ ಕಾಯಿಲೆ. ಇದನ್ನು ಹೋಗಲಾಡಿಸಲೇಬೇಕೆಂದು ಪ್ರಯತ್ನಪಟ್ಟು ಲಂಡನ್ ಮತ್ತು ಫ್ರಾನ್ಸ್ ದೇಶದ ವಿಜ್ಞಾನಿಗಳು ಒಂದು ಸೂಜಿ ಮದ್ದನ್ನು ಕಂಡು ಹಿಡಿದರು.

ಕರುಳಿನಲ್ಲಿ ಗೊತ್ತಾದ ಒಂದು ಬಗೆಯ ‘ಎನ್‌ಜೈಮ್‌ಗಳು ನೈಟ್ರಿಕ್’ ಆಮ್ಲವನ್ನು ಉತ್ಪತ್ತಿ ಮಾಡುವುದರಿಂದಲೂ, ಈ ನೈಟ್ರಿಕ್ ಆಮ್ಲವು ಉಸಿರಾಟದ ನಾಳವನ್ನು ಬಾಧಿಸುವುದರಿಂದಲೂ ಆಸ್ತ್ಮವೂ ಬರುತ್ತದೆ. ಈ ರೋಗಕ್ಕೆ  ಪರಿಹಾರವಾಗಿ ‘ನೈಟ್ರಿಕ್ ಆಮ್ಲ ಉತ್ಪತ್ತಿ ಯಾಗದಂತೆ ತಡೆಯೊಡ್ಡುವ ಔಷಧಿಯುಳ್ಳ ಇಂಜಕ್ಷನ್ ಕೊಟ್ಟರೆ ಆಗ ಈ ಆಮ್ಲ ತನ್ನ ಉತ್ಪತ್ತಿಯನ್ನು ನಿಲ್ಲಿಸಿ ಬಿಡುತ್ತದೆ. ಆಗ ಕೆಮ್ಮು ಕಫ, ಉಬ್ಬಸಗಳೆಲ್ಲ ನಿಂತುಹೋಗುತ್ತದೆ.

ಪ್ಯಾಕ್‌ ಬಾಕ್ಸ್: 3 IN ONE
ಇಂದೊಂದು ಆಶ್ಚರ್ಯಕರ ಪೆಟ್ಟಿಗೆ ವಾಣಿಜ್ಯೋದ್ಯಮಗಳಿಗೆ ಹೇಳಿ ಮಾಡಿಸಿದ ಸಾಧನ. ಅವರಿಗಷ್ಟೇ ಅಲ್ಲ ಸಂಶೋಧಕರಿಗೆ ಬಹರಗಾರರಿಗೆ, ಪತ್ರಕರ್ತರಿಗೆ, ಒಂದಿಲ್ಲ ಒಂದು ವಿಧದಲ್ಲಿ ಈ ಪೆಟ್ಟಿಗೆ ಸಹಾಯ ಮಾಡುತ್ತದೆ. ಅಮೇರಿಕಾದ ವಿಜ್ಞಾನಿಗಳು ತಯಾರಿಸಿದ ಇದರಲ್ಲಿ ದೂರವಾಣಿ ಇದೆ. ಪ್ಯಾಕ್ಸ್ ಸುದ್ದಿ ಕಳಿಸುವ ಸೌಲಭ್ಯವಿದೆ. ಪೇಪರ್‌ನ್ನು ಸ್ಟೋರ್ ಮಾಡುವ ಸೌಲಭ್ಯವಿದೆ. ಯಾರು ಯಾವಾಗಲಾದರೂ ಎಲ್ಲೆಂದರಲ್ಲಿ ಇದರ ಉಪಯೋಗವನ್ನು
ಪಡೆದುಕೊಳ್ಳಬಹುದು. ಮುಚ್ಚಿದರೆ ಒಂದು V.I.P. ಸೂಟ್‌ಕೇಶ್ ಇದ್ದಂತಿದೆ ಇದರ ಬೆಲೆ ರೂ. 2,000 ಡಾಲರ್.

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...