Home / ಲೇಖನ / ವಿಜ್ಞಾನ / ಅಸ್ತಮಾರೋಗಕ್ಕೆ ಸಂಜೀವಿನಿ ಸೂಜಿಮದ್ದು

ಅಸ್ತಮಾರೋಗಕ್ಕೆ ಸಂಜೀವಿನಿ ಸೂಜಿಮದ್ದು

ವಯಸ್ಸಾದವರು ಇಡೀ ರಾತ್ರಿ ಕೆಮ್ಮುತ್ತ ಅಕ್ಕಪಕ್ಕದವರಿಗೆ ನಿದ್ರೆಗೆಡಿಸುತ್ತಾರೆ. ಒಂದೊಂದು ಸಲ ಈ ಆಸ್ತಮಾ- ದಿಂದಲೇ ಸಾವನ್ನು ಅಪ್ಪುಬಹುದು. ಉಸಿರಾಟದ ತೊಂದರೆಯಿಂದ ನರಳುತ್ತಾರೆ. ಒಂದೊಂದು ಸಲ ರಕ್ತವೂ ಕಫದೊಂದಿಗೆ ಬಂದು ಪ್ರಾಣಾಂತಿಕವಾಗುತ್ತದೆ. ಇದು ಕೂಡ ವಯಸ್ಸಾದವರಿಗೆ ಕಾಡುವ ಕ್ರೂರ ಕಾಯಿಲೆ. ಇದನ್ನು ಹೋಗಲಾಡಿಸಲೇಬೇಕೆಂದು ಪ್ರಯತ್ನಪಟ್ಟು ಲಂಡನ್ ಮತ್ತು ಫ್ರಾನ್ಸ್ ದೇಶದ ವಿಜ್ಞಾನಿಗಳು ಒಂದು ಸೂಜಿ ಮದ್ದನ್ನು ಕಂಡು ಹಿಡಿದರು.

ಕರುಳಿನಲ್ಲಿ ಗೊತ್ತಾದ ಒಂದು ಬಗೆಯ ‘ಎನ್‌ಜೈಮ್‌ಗಳು ನೈಟ್ರಿಕ್’ ಆಮ್ಲವನ್ನು ಉತ್ಪತ್ತಿ ಮಾಡುವುದರಿಂದಲೂ, ಈ ನೈಟ್ರಿಕ್ ಆಮ್ಲವು ಉಸಿರಾಟದ ನಾಳವನ್ನು ಬಾಧಿಸುವುದರಿಂದಲೂ ಆಸ್ತ್ಮವೂ ಬರುತ್ತದೆ. ಈ ರೋಗಕ್ಕೆ  ಪರಿಹಾರವಾಗಿ ‘ನೈಟ್ರಿಕ್ ಆಮ್ಲ ಉತ್ಪತ್ತಿ ಯಾಗದಂತೆ ತಡೆಯೊಡ್ಡುವ ಔಷಧಿಯುಳ್ಳ ಇಂಜಕ್ಷನ್ ಕೊಟ್ಟರೆ ಆಗ ಈ ಆಮ್ಲ ತನ್ನ ಉತ್ಪತ್ತಿಯನ್ನು ನಿಲ್ಲಿಸಿ ಬಿಡುತ್ತದೆ. ಆಗ ಕೆಮ್ಮು ಕಫ, ಉಬ್ಬಸಗಳೆಲ್ಲ ನಿಂತುಹೋಗುತ್ತದೆ.

ಪ್ಯಾಕ್‌ ಬಾಕ್ಸ್: 3 IN ONE
ಇಂದೊಂದು ಆಶ್ಚರ್ಯಕರ ಪೆಟ್ಟಿಗೆ ವಾಣಿಜ್ಯೋದ್ಯಮಗಳಿಗೆ ಹೇಳಿ ಮಾಡಿಸಿದ ಸಾಧನ. ಅವರಿಗಷ್ಟೇ ಅಲ್ಲ ಸಂಶೋಧಕರಿಗೆ ಬಹರಗಾರರಿಗೆ, ಪತ್ರಕರ್ತರಿಗೆ, ಒಂದಿಲ್ಲ ಒಂದು ವಿಧದಲ್ಲಿ ಈ ಪೆಟ್ಟಿಗೆ ಸಹಾಯ ಮಾಡುತ್ತದೆ. ಅಮೇರಿಕಾದ ವಿಜ್ಞಾನಿಗಳು ತಯಾರಿಸಿದ ಇದರಲ್ಲಿ ದೂರವಾಣಿ ಇದೆ. ಪ್ಯಾಕ್ಸ್ ಸುದ್ದಿ ಕಳಿಸುವ ಸೌಲಭ್ಯವಿದೆ. ಪೇಪರ್‌ನ್ನು ಸ್ಟೋರ್ ಮಾಡುವ ಸೌಲಭ್ಯವಿದೆ. ಯಾರು ಯಾವಾಗಲಾದರೂ ಎಲ್ಲೆಂದರಲ್ಲಿ ಇದರ ಉಪಯೋಗವನ್ನು
ಪಡೆದುಕೊಳ್ಳಬಹುದು. ಮುಚ್ಚಿದರೆ ಒಂದು V.I.P. ಸೂಟ್‌ಕೇಶ್ ಇದ್ದಂತಿದೆ ಇದರ ಬೆಲೆ ರೂ. 2,000 ಡಾಲರ್.

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...