Home / ಬಾಲ ಚಿಲುಮೆ / ಕವಿತೆ / ಚುಟುಕುಗಳು

ಚುಟುಕುಗಳು

ನಾಯಿ ಬೆಕ್ಕು ಕುರಿ
ಹಚ್ಚಿ ದೊಡ್ಡ ಉರಿ
ಕಾಡು ತುಂಬ ಬೆಂಕಿ ಹತ್ತಿ
ಚಳಿ ಕಾಸಿತು ನರಿ!
***

ಡೊಳ್ಳು ಹೊಟ್ಟೆ ಗುಂಡ
ತಿನ್ನೋದ್ರಲ್ಲಿ ಭಂಡ,
ಕೇಳಿ ಕೇಳಿ ಹಾಕಿಸ್ಕೊಂಡು
ತಿಂದ ನೂರು ಬೋಂಡ.
***

ಊಟ ಗುಂಡಂಗ್ ಇಷ್ಟ
ಪಾಠ ಮಾತ್ರ ಕಷ್ಟ
ಕ್ಲಾಸಿನಲ್ಲಿ ಗೊರಕೆ ಹೊಡೆದು
ಭಾರೀ ಹೂಸು ಬಿಟ್ಟ!
***

ಬಿಸಿಲು ಬಿದ್ದಿದೆ – ಜೊತೆಗೆ
ಮಳೆ ಬರ್‍ತಿದೆ
ಕಾಗೆಗೂ ನರಿಗೂ ಎಲ್ಲೋ
ಮದುವೆ ಆಗ್ತಿದೆ!
***

ಉಂಡೆ ಉಂಡೆ ಉಂಡೆ
ತನ್ನಿ ಒಂದು ಹಂಡೆ
ಒಳಕ್ಕೆ ಇಳಿದು ತಿಂದ್ಹಾಕ್ತೀವಿ
ಇಡೇ ಸಂಡೇ ಮಂಡೆ
***

ಚಕ್ಲಿ ನಂಗೆ ಇಷ್ಟ
ಹೊರಕ್ ತರೋದೇ ಕಷ್ಟ
ರೌಡಿ ಗುಂಡ ಓಡಿ ಬಂದು
ಕಸ್ಕೋತಾನೆ ದುಷ್ಟ!
***

ಪುಟ್ಟ ಪುಟ್ಟ ರೊಟ್ಟಿ
ಬೆಣ್ಣೆ ಸವರಿ ತಟ್ಟಿ
ಕೊಡು ಅಜ್ಜಿ ಆಗ್ತೀನಿ
ಭೀಮಗಿಂತ ಗಟ್ಟಿ
***

ನನ್ನನ್ ಅಪ್ಕೊಂಡ್ ಮುದ್ಮಾಡೋದು
ಬಲೇ ಇಷ್ಟ ಅಜ್ಜಿಗೆ
ಅಜ್ಜಿ ಅಂದ್ರೆ ನಂಗಂತೂ
ಅನಾನಸ್ಸಿನ್ ಸಜ್ಜಿಗೆ
***

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...