Home / ಲೇಖನ / ಇತರೆ / ಮಾತಿನಲಿ ಹೃದಯವಿರಲಿ

ಮಾತಿನಲಿ ಹೃದಯವಿರಲಿ

ಪ್ರಿಯ ಸಖಿ,
ಇಂದು ನಾವು ಆಡುತ್ತಿರುವ ಮಾತು ತನ್ನ ಮೌಲ್ಯವನ್ನೇ ಕಳೆದುಕೂಂಡಿದೆ. ಬೇಕಾದಾಗ ಬೇಕಾದಂತೆ ಮಾತಾಡುವ, ಅದಕ್ಕೆ ಬದ್ಧರಾಗಿರಬೇಕೆಂಬ ಯಾವುದೇ ಸಿದ್ಧಾಂತವನ್ನೂ ನಾವಿಂದು ಇಟ್ಟುಕೊಂಡಿಲ್ಲ. ಆಡುವ ಮಾತಿಗೂ ನಡೆದುಕೊಳ್ಳುವ ರೀತಿಗೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಅದನ್ನು ಕಂಡೇ ಕವಿ ಬಿ. ಅರ್. ಲಕ್ಷ್ಮಣರಾವ್ ಅವರು ತಮ್ಮ ‘ಇಂದು’ ಎಂಬ ಹನಿಗವನದಲ್ಲಿ ಹೀಗೆನ್ನುತ್ತಾರೆ.

     ಮಾತು
ತನ್ನ ನಂಬಿಕೆ ಕಳೆದುಕೊಂಡಿರುವ
ಇಂದು
ಪ್ರತಿ ದಿನವೂ
ಏಪ್ರಿಲ್ ಒಂದು

ಯಾರದೋ ಮಾತನ್ನು ನಂಬಿಕೂತವನು ಇಂದು ಮೂರ್ಖನಾಗುವ ಕಾಲ ಬಂದಿದೆ. ‘ಮಾತನಾಡುವ ಮೊದಲು ಅದರಲ್ಲಿ ನಿನ್ನ ಹೃದಯವಿದೆಯೇ ಎಂದು ಪರೀಕ್ಷಿಸು ಎನ್ನುವ ಹಳೆಯ ನಾನ್ನುಡಿಯೊಂದು ನಮ್ಮಲ್ಲಿದೆ. ಹೃದಯವಿರಲಿ ಇಂದು ಮಾತಿನಲ್ಲಿ ನಾಲಿಗೆಯೂ ಇರುವುದಿಲ್ಲ. ಬರಿಯ ಗಾಳಿಯಲ್ಲಿ ಮಾತುಗಳು ಹಾರಾಡುತ್ತವೆ.

ಮಾನವೀಯ ಮೌಲ್ಯಗಳು ಕಳೆದು ಹೋಗುತ್ತಿರುವ ಇಂದಿನ ದಿನಗಳಲ್ಲಿ ಮಾತೂ ತನ್ನ ಅರ್ಥ ಕಳೆದುಕೊಳ್ಳುತ್ತಿದೆ. ತನ್ನ ಲಾಭಕ್ಕಾಗಿ ಯಾವ ಮಾತನ್ನಾದರೂ ಹೇಗೆ ಬೇಕಾದರೂ ಆಡಿ ಕಾರ್ಯ ಸಾಧಿಸಿಕೊಳ್ಳುವ ಹಂತಕ್ಕೆ ಮನುಷ್ಯ ಬಂದು ಮುಟ್ಟಿದ್ದಾನೆ. ಅವನಿಗೆ ತನ್ನ ಸ್ವಾರ್ಥ, ಸ್ವಹಿತಗಳೇ ಮುಖ್ಯ. ಇಂತಹ ನಾಟಕಗಳನ್ನರಿಯದ ಮುಗ್ಧ ವ್ಯಕ್ತಿಗಳೂ ನಮ್ಮಲ್ಲಿದ್ದಾರೆ. ಅವರೆಲ್ಲ ಇಂತಹ ಕಪಟ ಮಾತುಗಾರರ ಮಾತುಗಳನ್ನು ನಂಬಿ ಕ್ಷಣ ಕ್ಷಣವೂ ಮೂರ್ಖರಾಗುತ್ತಿರುತ್ತಾರೆ.

ನುಡಿದಂತೆ ನಡೆಯಬೇಕು ನಡೆದಂತೆ ನುಡಿಯಬೇಕು ಎಂಬ ತತ್ವಕ್ಕೆ ನಾವು ಯಾವಾಗ ಬದ್ಧರಾಗುವುದಿಲ್ಲವೋ ಅಲ್ಲಿಯವರೆಗೂ ನಾವು ಆತ್ಮವಂಚನೆ ಮಾಡಿಕೊಳ್ಳುತ್ತಲೇ ಇರುತ್ತೇವೆ. ಮಾತಿಗೂ ಅದರದ್ದೇ ಮಹತ್ವವಿದೆ. ಪ್ರಾಮಾಣಿಕ ಮಾತಿನಿಂದಲೇ ಮಾನವನಿಗೆ ಗೌರವ, ಪ್ರತಿಷ್ಠೆಗಳು ಬರುತ್ತವೆ ಎಂದು ಎಲ್ಲಿಯವರೆಗೆ ಮನುಷ್ಯ ತಿಳಿದು ಕೊಳ್ಳುವದಿಲ್ಲವೋ ಅಲ್ಲಿಯವರೆಗೆ ಬೇರೆ ಯಾರೇ ಅವನನ್ನು ಕ್ಷಮಿಸಿದರೂ ಅವನ ಆತ್ಮ ಅವನನ್ನು ಎಂದೂ ಕ್ಷಮಿಸುವುದಿಲ್ಲ. ಈ ಕುರಿತು ನಿನ್ನ ನಿಲುವೇನು ಸಖಿ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...