Home / ಲೇಖನ / ಇತರೆ / ಮಾತಿನಲಿ ಹೃದಯವಿರಲಿ

ಮಾತಿನಲಿ ಹೃದಯವಿರಲಿ

ಪ್ರಿಯ ಸಖಿ,
ಇಂದು ನಾವು ಆಡುತ್ತಿರುವ ಮಾತು ತನ್ನ ಮೌಲ್ಯವನ್ನೇ ಕಳೆದುಕೂಂಡಿದೆ. ಬೇಕಾದಾಗ ಬೇಕಾದಂತೆ ಮಾತಾಡುವ, ಅದಕ್ಕೆ ಬದ್ಧರಾಗಿರಬೇಕೆಂಬ ಯಾವುದೇ ಸಿದ್ಧಾಂತವನ್ನೂ ನಾವಿಂದು ಇಟ್ಟುಕೊಂಡಿಲ್ಲ. ಆಡುವ ಮಾತಿಗೂ ನಡೆದುಕೊಳ್ಳುವ ರೀತಿಗೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಅದನ್ನು ಕಂಡೇ ಕವಿ ಬಿ. ಅರ್. ಲಕ್ಷ್ಮಣರಾವ್ ಅವರು ತಮ್ಮ ‘ಇಂದು’ ಎಂಬ ಹನಿಗವನದಲ್ಲಿ ಹೀಗೆನ್ನುತ್ತಾರೆ.

     ಮಾತು
ತನ್ನ ನಂಬಿಕೆ ಕಳೆದುಕೊಂಡಿರುವ
ಇಂದು
ಪ್ರತಿ ದಿನವೂ
ಏಪ್ರಿಲ್ ಒಂದು

ಯಾರದೋ ಮಾತನ್ನು ನಂಬಿಕೂತವನು ಇಂದು ಮೂರ್ಖನಾಗುವ ಕಾಲ ಬಂದಿದೆ. ‘ಮಾತನಾಡುವ ಮೊದಲು ಅದರಲ್ಲಿ ನಿನ್ನ ಹೃದಯವಿದೆಯೇ ಎಂದು ಪರೀಕ್ಷಿಸು ಎನ್ನುವ ಹಳೆಯ ನಾನ್ನುಡಿಯೊಂದು ನಮ್ಮಲ್ಲಿದೆ. ಹೃದಯವಿರಲಿ ಇಂದು ಮಾತಿನಲ್ಲಿ ನಾಲಿಗೆಯೂ ಇರುವುದಿಲ್ಲ. ಬರಿಯ ಗಾಳಿಯಲ್ಲಿ ಮಾತುಗಳು ಹಾರಾಡುತ್ತವೆ.

ಮಾನವೀಯ ಮೌಲ್ಯಗಳು ಕಳೆದು ಹೋಗುತ್ತಿರುವ ಇಂದಿನ ದಿನಗಳಲ್ಲಿ ಮಾತೂ ತನ್ನ ಅರ್ಥ ಕಳೆದುಕೊಳ್ಳುತ್ತಿದೆ. ತನ್ನ ಲಾಭಕ್ಕಾಗಿ ಯಾವ ಮಾತನ್ನಾದರೂ ಹೇಗೆ ಬೇಕಾದರೂ ಆಡಿ ಕಾರ್ಯ ಸಾಧಿಸಿಕೊಳ್ಳುವ ಹಂತಕ್ಕೆ ಮನುಷ್ಯ ಬಂದು ಮುಟ್ಟಿದ್ದಾನೆ. ಅವನಿಗೆ ತನ್ನ ಸ್ವಾರ್ಥ, ಸ್ವಹಿತಗಳೇ ಮುಖ್ಯ. ಇಂತಹ ನಾಟಕಗಳನ್ನರಿಯದ ಮುಗ್ಧ ವ್ಯಕ್ತಿಗಳೂ ನಮ್ಮಲ್ಲಿದ್ದಾರೆ. ಅವರೆಲ್ಲ ಇಂತಹ ಕಪಟ ಮಾತುಗಾರರ ಮಾತುಗಳನ್ನು ನಂಬಿ ಕ್ಷಣ ಕ್ಷಣವೂ ಮೂರ್ಖರಾಗುತ್ತಿರುತ್ತಾರೆ.

ನುಡಿದಂತೆ ನಡೆಯಬೇಕು ನಡೆದಂತೆ ನುಡಿಯಬೇಕು ಎಂಬ ತತ್ವಕ್ಕೆ ನಾವು ಯಾವಾಗ ಬದ್ಧರಾಗುವುದಿಲ್ಲವೋ ಅಲ್ಲಿಯವರೆಗೂ ನಾವು ಆತ್ಮವಂಚನೆ ಮಾಡಿಕೊಳ್ಳುತ್ತಲೇ ಇರುತ್ತೇವೆ. ಮಾತಿಗೂ ಅದರದ್ದೇ ಮಹತ್ವವಿದೆ. ಪ್ರಾಮಾಣಿಕ ಮಾತಿನಿಂದಲೇ ಮಾನವನಿಗೆ ಗೌರವ, ಪ್ರತಿಷ್ಠೆಗಳು ಬರುತ್ತವೆ ಎಂದು ಎಲ್ಲಿಯವರೆಗೆ ಮನುಷ್ಯ ತಿಳಿದು ಕೊಳ್ಳುವದಿಲ್ಲವೋ ಅಲ್ಲಿಯವರೆಗೆ ಬೇರೆ ಯಾರೇ ಅವನನ್ನು ಕ್ಷಮಿಸಿದರೂ ಅವನ ಆತ್ಮ ಅವನನ್ನು ಎಂದೂ ಕ್ಷಮಿಸುವುದಿಲ್ಲ. ಈ ಕುರಿತು ನಿನ್ನ ನಿಲುವೇನು ಸಖಿ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...