ಮಾತಿನಲಿ ಹೃದಯವಿರಲಿ

ಪ್ರಿಯ ಸಖಿ,
ಇಂದು ನಾವು ಆಡುತ್ತಿರುವ ಮಾತು ತನ್ನ ಮೌಲ್ಯವನ್ನೇ ಕಳೆದುಕೂಂಡಿದೆ. ಬೇಕಾದಾಗ ಬೇಕಾದಂತೆ ಮಾತಾಡುವ, ಅದಕ್ಕೆ ಬದ್ಧರಾಗಿರಬೇಕೆಂಬ ಯಾವುದೇ ಸಿದ್ಧಾಂತವನ್ನೂ ನಾವಿಂದು ಇಟ್ಟುಕೊಂಡಿಲ್ಲ. ಆಡುವ ಮಾತಿಗೂ ನಡೆದುಕೊಳ್ಳುವ ರೀತಿಗೂ ಒಂದಕ್ಕೊಂದು ಸಂಬಂಧವೇ ಇರುವುದಿಲ್ಲ. ಅದನ್ನು ಕಂಡೇ ಕವಿ ಬಿ. ಅರ್. ಲಕ್ಷ್ಮಣರಾವ್ ಅವರು ತಮ್ಮ ‘ಇಂದು’ ಎಂಬ ಹನಿಗವನದಲ್ಲಿ ಹೀಗೆನ್ನುತ್ತಾರೆ.

     ಮಾತು
ತನ್ನ ನಂಬಿಕೆ ಕಳೆದುಕೊಂಡಿರುವ
ಇಂದು
ಪ್ರತಿ ದಿನವೂ
ಏಪ್ರಿಲ್ ಒಂದು

ಯಾರದೋ ಮಾತನ್ನು ನಂಬಿಕೂತವನು ಇಂದು ಮೂರ್ಖನಾಗುವ ಕಾಲ ಬಂದಿದೆ. ‘ಮಾತನಾಡುವ ಮೊದಲು ಅದರಲ್ಲಿ ನಿನ್ನ ಹೃದಯವಿದೆಯೇ ಎಂದು ಪರೀಕ್ಷಿಸು ಎನ್ನುವ ಹಳೆಯ ನಾನ್ನುಡಿಯೊಂದು ನಮ್ಮಲ್ಲಿದೆ. ಹೃದಯವಿರಲಿ ಇಂದು ಮಾತಿನಲ್ಲಿ ನಾಲಿಗೆಯೂ ಇರುವುದಿಲ್ಲ. ಬರಿಯ ಗಾಳಿಯಲ್ಲಿ ಮಾತುಗಳು ಹಾರಾಡುತ್ತವೆ.

ಮಾನವೀಯ ಮೌಲ್ಯಗಳು ಕಳೆದು ಹೋಗುತ್ತಿರುವ ಇಂದಿನ ದಿನಗಳಲ್ಲಿ ಮಾತೂ ತನ್ನ ಅರ್ಥ ಕಳೆದುಕೊಳ್ಳುತ್ತಿದೆ. ತನ್ನ ಲಾಭಕ್ಕಾಗಿ ಯಾವ ಮಾತನ್ನಾದರೂ ಹೇಗೆ ಬೇಕಾದರೂ ಆಡಿ ಕಾರ್ಯ ಸಾಧಿಸಿಕೊಳ್ಳುವ ಹಂತಕ್ಕೆ ಮನುಷ್ಯ ಬಂದು ಮುಟ್ಟಿದ್ದಾನೆ. ಅವನಿಗೆ ತನ್ನ ಸ್ವಾರ್ಥ, ಸ್ವಹಿತಗಳೇ ಮುಖ್ಯ. ಇಂತಹ ನಾಟಕಗಳನ್ನರಿಯದ ಮುಗ್ಧ ವ್ಯಕ್ತಿಗಳೂ ನಮ್ಮಲ್ಲಿದ್ದಾರೆ. ಅವರೆಲ್ಲ ಇಂತಹ ಕಪಟ ಮಾತುಗಾರರ ಮಾತುಗಳನ್ನು ನಂಬಿ ಕ್ಷಣ ಕ್ಷಣವೂ ಮೂರ್ಖರಾಗುತ್ತಿರುತ್ತಾರೆ.

ನುಡಿದಂತೆ ನಡೆಯಬೇಕು ನಡೆದಂತೆ ನುಡಿಯಬೇಕು ಎಂಬ ತತ್ವಕ್ಕೆ ನಾವು ಯಾವಾಗ ಬದ್ಧರಾಗುವುದಿಲ್ಲವೋ ಅಲ್ಲಿಯವರೆಗೂ ನಾವು ಆತ್ಮವಂಚನೆ ಮಾಡಿಕೊಳ್ಳುತ್ತಲೇ ಇರುತ್ತೇವೆ. ಮಾತಿಗೂ ಅದರದ್ದೇ ಮಹತ್ವವಿದೆ. ಪ್ರಾಮಾಣಿಕ ಮಾತಿನಿಂದಲೇ ಮಾನವನಿಗೆ ಗೌರವ, ಪ್ರತಿಷ್ಠೆಗಳು ಬರುತ್ತವೆ ಎಂದು ಎಲ್ಲಿಯವರೆಗೆ ಮನುಷ್ಯ ತಿಳಿದು ಕೊಳ್ಳುವದಿಲ್ಲವೋ ಅಲ್ಲಿಯವರೆಗೆ ಬೇರೆ ಯಾರೇ ಅವನನ್ನು ಕ್ಷಮಿಸಿದರೂ ಅವನ ಆತ್ಮ ಅವನನ್ನು ಎಂದೂ ಕ್ಷಮಿಸುವುದಿಲ್ಲ. ಈ ಕುರಿತು ನಿನ್ನ ನಿಲುವೇನು ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚುಟುಕುಗಳು
Next post ವೀರಗಲ್ಲು

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys