ಬೆಳಗಾಗಿದೆ ಮೇಲೇಳೋ ಕೃಷ್ಣಾ

ಬೆಳಗಾಗಿದೆ ಮೆಲೇಳು ಕೃಷ್ಣಾ
ಬಿಸಿಲಿಣುಕಿದೆ ಮೇಲೇಳು
ತೆರೆದಿದೆ ಮನೆಗಳ ಬಾಗಿಲು – ಹಸು ಕರು
ಆಂಭಾ ಎನುತಿದೆ ಏಳು

ಕೇಳಿಸದೇನೋ ಮೊಸರನು ಕಡೆಯುವ
ಗೋಪೀ ಕೈಬಳೆ ಸದ್ದು,
ಆಗಲೆ ಬಾಗಿಲ ಬಳಿಯಲಿ ಗೆಳೆಯರು
ಆಟಕೆ ಹೋಗಲು ಕದ್ದು!

ಮರಗಿಡಬಳ್ಳಿ ಓಲಾಡುತ್ತಿವೆ
ಕಮ್ಮನೆ ಗಾಳಿಯ ಹೀರಿ
ಬರುವನಿನ್ನೇನು ಕ್ಳಷ್ಣ ಎಂದು
ಖುಷಿಯಲಿ ತಲೆಗಳ ತೂಗಿ

ಆ ಕಡೆ ಈ ಕಡೆ ಜಿಗಿದಿವೆ ಕರುಗಳು
ಕೊರಳಿನ ಗಂಟೆ ದನಿಸಿ
ಈಗ ಬರುವ ಹರಿ ಎಂದು – ಹೊರ
ಗೋಡಲು ಬಾಲವ ಕುಣಿಸಿ

ಏಳೋ ಕ್ಟಷ್ಣ ಬೇಗೇಳೋ ಲೋಕವೆ
ಕಾದಿದೆ ನಿನ್ನನು ಕಾಣಲು
ಕಾತರಿಸಿವೆ ಜಡ ಜಂಗಮ ಮೀರಾ
ಗಿರಿಧರನನ್ನು ಕೂಡಲು

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಡಂಗುರ-೧೪೧
Next post ಗಾಜಿಗಿಂತಲೂ ಹಗುರವಾದ ಪೆಕ್ಸಿಗ್ಲಾಸ್

ಸಣ್ಣ ಕತೆ

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…