ಬೆಳಗಾಗಿದೆ ಮೇಲೇಳೋ ಕೃಷ್ಣಾ

ಬೆಳಗಾಗಿದೆ ಮೆಲೇಳು ಕೃಷ್ಣಾ
ಬಿಸಿಲಿಣುಕಿದೆ ಮೇಲೇಳು
ತೆರೆದಿದೆ ಮನೆಗಳ ಬಾಗಿಲು – ಹಸು ಕರು
ಆಂಭಾ ಎನುತಿದೆ ಏಳು

ಕೇಳಿಸದೇನೋ ಮೊಸರನು ಕಡೆಯುವ
ಗೋಪೀ ಕೈಬಳೆ ಸದ್ದು,
ಆಗಲೆ ಬಾಗಿಲ ಬಳಿಯಲಿ ಗೆಳೆಯರು
ಆಟಕೆ ಹೋಗಲು ಕದ್ದು!

ಮರಗಿಡಬಳ್ಳಿ ಓಲಾಡುತ್ತಿವೆ
ಕಮ್ಮನೆ ಗಾಳಿಯ ಹೀರಿ
ಬರುವನಿನ್ನೇನು ಕ್ಳಷ್ಣ ಎಂದು
ಖುಷಿಯಲಿ ತಲೆಗಳ ತೂಗಿ

ಆ ಕಡೆ ಈ ಕಡೆ ಜಿಗಿದಿವೆ ಕರುಗಳು
ಕೊರಳಿನ ಗಂಟೆ ದನಿಸಿ
ಈಗ ಬರುವ ಹರಿ ಎಂದು – ಹೊರ
ಗೋಡಲು ಬಾಲವ ಕುಣಿಸಿ

ಏಳೋ ಕ್ಟಷ್ಣ ಬೇಗೇಳೋ ಲೋಕವೆ
ಕಾದಿದೆ ನಿನ್ನನು ಕಾಣಲು
ಕಾತರಿಸಿವೆ ಜಡ ಜಂಗಮ ಮೀರಾ
ಗಿರಿಧರನನ್ನು ಕೂಡಲು

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆಡಂಗುರ-೧೪೧
Next post ಗಾಜಿಗಿಂತಲೂ ಹಗುರವಾದ ಪೆಕ್ಸಿಗ್ಲಾಸ್

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…