ಅಕ್ಷರ ಜ್ಯೋತಿ

ಅಕ್ಷರ ಜ್ಯೋತಿಯ ಬೆಳಗೋಣ ನಾವ್
ಅಕ್ಷರ ಸುಖವನು ಪಡೆಯೋಣ ||ಪ||

ಬಾಳಿನ ನೆಮ್ಮದಿ ಸುಖ ಸೌಭಾಗ್ಯದ
ಮನ್ವಂತರಕಿದು ಮೊದಲ ಪಣ
ನೂತನ ಸಮಾಜ ಕಟ್ಟೋಣ ನಾವ್
ಭವ್ಯ ಭಾರತವ ಬೆಳೆಸೋಣ ||೧||

ಅಜ್ಞಾನವೆಂಬ ಕತ್ತಲೆ ಮನೆಯಲಿ
ಕೊಳೆಯುತ ಬಾಳೋದು ಸಾಕಣ್ಣ
ಜ್ಞಾನದ ದೀಪವ ಹಚ್ಚೋಣ ನಾವ್
ಬೆಳಕಿನ ಮಕ್ಕಳು ಆಗೋಣ ||೨||

ಮೂಢ ನಂಬಿಕೆಯ ಜಡಪತಂಗಗಳು
ದೀಪದ ಉರಿಯಲಿ ಸುಡುತಾವೆ
ಹಣೆಬರವಾದದ ಕಣ್ಕಪ್ಪಡಿಗಳು
ತಂತಾವೆಲ್ಲೋ ಓಡ್ತಾವೆ ||೩||

ಅನಾರೋಗ್ಯದಾ ಹಳಸಲು ನಾತವು
ಇಲ್ಲದೆ ಮನೆ ತಿಳಿಯಾಗುವುದು
ಕೊರಡುಗಟ್ಟಿರುವ ದಾರಿದ್ರ್ಯದ ಅಂ
ಗಾಂಗಗಳಿಗೆ ಬಲವಾಗುವುದು ||೪||

ಅಕ್ಷರ ದೀಪವ ಹಚ್ಚೋಣ ಅದು
ಶಕ್ತಿಯು ಮುಕ್ತಿಯು ಎನ್ನೋಣ
ಮನೆ ಮನೆ ಊರೂರ್ ಕೇರಿಕೇರಿಗಳ
ಬೆಳಕಿನ ಲೋಕವ ಮಾಡೋಣ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನಪಿನಂಗಳದಲ್ಲಿ
Next post ಬೈಕ್ ಆಥವಾ ಸ್ಕೂಟರ್ : ಆಯ್ಕೆ ನಿಮ್ಮದು

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys