ಒಬ್ಬೊಬ್ಬ ಸೂರ್ಯನ ಕೊಡಿ

ಅಕ್ಕ ತಂಗಿಯರೇ!
ಪ್ರತಿಯೊಬ್ಬರೂ ಒಬ್ಬೊಬ್ಬ ಸೂರ್ಯನನ್ನು ದೇಶಕ್ಕೆ ಕೊಡಿ
ಕನಿಷ್ಟ ಪಕ್ಷ ನಕ್ಷತ್ರವನ್ನಾಗಲೀ ಕೊನೆಗೆ ಹಣತೆಯನ್ನಾಗಲೀ ಕೊಡಿ

ಎರವಲು ಬೆಳಕಿನಿಂದ ಮೆರೆವ
ಗ್ರಹ ಉಪಗ್ರಹಗಳನ್ನೋ
ಉಲ್ಕೆಗಳನ್ನೋ ಕೊಡಬೇಡಿ

ಒಂದರೊಳಗೊಂದು ಸಿಕ್ಕಾ ಸಿಕ್ಕಾಗಿ ಗೋಜಲುಗೊಂಡು
ಒಂದನೊಂದು ಕಿತ್ತು ತಿನ್ನುವ ಕೆಲವು
ಹೆಗ್ಗಣ ಹದ್ದು ನಾಯಿ ನರಿಗಳಿಗಂಜಿ
ಪುತು ಪುತು ತಿಪ್ಪೆ ಸೇರಿಕೊಳ್ಳುವ
ಅಲ್ಲೇ ಕೈಲಾಸ ವೈಕುಂಠಗಳ ತೇಲುಗಣ್ಣಿನಲ್ಲಿ ಕಾಣುವ
ಬರೀ ಹುರುಳಿಲ್ಲದ ನರಳಾಟದ ನರಸತ್ತ
ನರಹುಳಗಳನ್ನು ಮಾತ್ರ ಕೊಡಬೇಡಿ

ತಮ್ಮ ತಮ್ಮೊಳಗೆ ಹೆಣೆದುಕೊಂಡ
ಬೇಲಿಗಳಿಗಾಗಿ ಇರಿದಾಡಿ ಸಾಯುವುದರಲ್ಲೇ
ತಮ್ಮ ಪೌರುಷ ಶೌರ್ಯಗಳನ್ನೆಲ್ಲ ಕಳೆದುಕೊಳ್ಳುತ್ತಿರುವ
ಮೃಗಗಳನ್ನು ಮಾತ್ರ ಕೊಡಬೇಡಿ
ಹೆಗ್ಗಣ ಹದ್ದು ನಾಯಿ ನರಿಗಳೇನಾದರೂ
ನಿಮ್ಮೊಡಲಿಂದ ಹುಟ್ಟಿದರೆ
ಹೆತ್ತವರಿಗೆ ಹೆಗ್ಗಣ ಮುದ್ದೆಂದು ಮುದ್ದಾಡಬೇಡಿ
ಪಾಪ ಎಂದು ಕರುಣೆ ತೋರಿಸಬೇಡಿ
ಬಲಿತಂತೆಲ್ಲ ಅವು ನಿಮ್ಮನ್ನೇ |
ಅಥವಾ ನಿಮ್ಮಂಥ ಎಷ್ಟೋ ತಾಯಿ ಅಕ್ಕ ತಂಗಿಯರನ್ನೇ
ಹರಿದು ಕಿತ್ತು ತಿನ್ನುತ್ತ ಹೋದರೆ
ಅಂಥ ರಕ್ಕಸಗಳ್ಳಿಗಳನ್ನು ಹಡೆದ ನಿಮ್ಮನ್ನು
ದೇಶದ ಹೆತ್ತಮ್ಮ ಕ್ಷಮಿಸಳು
*****
೧೦.೬.೮೬

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಾಕಶಾಸ್ತ್ರದ ಪಾಠಶಾಲೆ
Next post ಬಲ್ಪಿನ ಬೆಳಕು

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…