Home / ಕಥೆ / ಕಿರು ಕಥೆ / ಮೀಸೆಯ ಪ್ರತಾಪ

ಮೀಸೆಯ ಪ್ರತಾಪ

ಒಬ್ಬ ತನ್ನ ಮಿತ್ರನನ್ನು ಬಹಳ ದಿನಗಳ ನಂತರ ಸಂಧಿಸಿದ. ಅವನಿಗೆ ಆಶ್ಚರ್ಯವೆನಿಸಿದ್ದು ಎಂದರೆ ಅವನ ಮೀಸೆ. ಕಿವಿಗಳವರೆಗೂ ದಟ್ಟವಾಗಿ ಬೆಳೆದ ಮೀಸೆಯ ಮೇಲೆ ಗೆಳೆಯನ ಅಭಿಮಾನ ನೋಡಿ ಇವನಿಗೆ ಸೋಜಿಗವೆನಿಸಿತು.

“ಏನಪ್ಪ, ಇಷ್ಟು ದೊಡ್ಡ ಮೀಸೆ? ಯಾವ ಕಾರ್ಯಕ್ಕಾಗಿ, ಯಾವ ಸಾಧನೆಗಾಗಿ?” ಎಂದ.

“ಅದು ನನ್ನ ಮರ್ಯಾದೆ, ಪ್ರತಿಷ್ಟತೆಯ ಪ್ರತೀಕ, ನನ್ನ ಬಾಳಿನ ಸಂತಸ. ನನ್ನ ಚೇತನ, ನನ್ನ ಕನಸು. ನನ್ನ ಸರ್ವಸ್ವ. ಅದು ನನ್ನ ಆತ್ಮ ವಿಶ್ವಾಸ ನನ್ನ ನಂಬಿಕೆಯ ನಾರಾಯಣ”- ಎಂದ.

“ಸಾಕಯ್ಯ, ನಿನ್ನ ಸುಂದರ ಮೀಸೆಯ ಒಂದು ಕೂದಲನ್ನು ನನಗೆ ಉಡುಗೊರೆಯಾಗಿ ಕೊಡು” ಎಂದು ಕೇಳಿದ.

“ಖಂಡಿತ ಇಲ್ಲ. ಅಂತಹ ತ್ಯಾಗ ಮಾಡಲಾರೆ. ಅದು ನನ್ನ ಮುಖದ ಶೋಭೆ. ಒಂದೆಳೆ ಕಡಿಮೆಯಾದರೂ ನನ್ನ ಮರ್ಯಾದೆಗೆ ಭಂಗ ಬರುತ್ತದೆ. ಬೇಕಾದರೆ ನನ್ನ ತಲೆ ಕೂದಲೊಂದನ್ನು ಕೊಡುವೆ” ಎಂದು ತಲೆಯನ್ನು ಮುಂದೆ ತಂದ.

“ನೋಡಿದರೆ ಬಟ್ಟತಲೆ! ಒಂದು ಕೂದಲೂ ಇಲ್ಲ. ಇದೇನಯ್ಯಾ? ಬಟ್ಟ ತಲೆಯಿಂದ ಕೂದಲೆಳೆ ಕೊಡುವೆ ಎನ್ನುತ್ತಿರುವೆಯಲ್ಲ – ಇದು ಮೋಸ! ಬರಿ ಮೋಸ” ಎಂದ.

“ಇಲ್ಲ ನೀನು ಒಂದು ಜನ್ಮ ಕಾಯಿ, ನೀ ಕೇಳಿದಂತೆ ಒಂದಳೆ ಅಲ್ಲ, ನೂರು ಎಳೆ ಕೊಡುವೆ, ಇದು ಮೋಸವಲ್ಲ. ನಿಜ”- ಎಂದ. ನೀನು ಕೇಳಿದ ಮೀಸೆ ನೋಡು ಅದು ಬೇಕಾದರೆ ಮೋಸ, ಮುಖವಾಡ, ಕೃತಕ. ಅದು ಬರಿ ದ್ಯೋತಕ, ಪ್ರೇರಕ. ನನ್ನ ಮರ್ಯಾದೆಗೆ ತಾರಕ.” ಎಂದು ಮೀಸೆ ತೆಗೆದು ತೋರಿಸಿದ. ಗೆಳೆಯನಿಗೆ ಯಾವುದು ದಿಟ, ಯಾವುದು ಸುಳ್ಳು ಎನ್ನುವ ಅರಿವಾದಾಗ, ಬಂಗರದಂತೆ ಅವನ ತಲೆ ಸುತ್ತಿತು.
*****

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...