‘ಶಾರ್ ಕಣಿವೆ’ಯಲ್ಲಿ

ಇಕ್ಕಟ್ಟು ‘ಶಾರ್ ಕಣಿವೆ’ ಮಾರ್ಗ
ಧೂಳು ತುಂಬಿದ ಭಯಾನಕ ಪೊದೆಗಳು
ಕಣಿವೆ ಎದೆಗೆ ತಬ್ಬಿದ್ದ
ಮುಳ್ಳು ಗೋರಂಟಿಗಳ
ಹಳದಿ ಹೂವುಗಳ ತುಂಬ
ಜೇಡರ ಬಲೆಗಳು
ಹಾರಾಡುತ್ತಿವೆ ಹುಳು ಹುಪ್ಪಡಿಗಳು
ಚಿರ್ ಚಿರ್ ಚಿಪ್ ಚಿಪ್‌ಗೂಡುತ್ತ
ಕಂದಕದಾಳಕ್ಕೆ ಬೈನಾಕ್ಯುಲರ್ ಸ್ಪರ್ಶಿಸದೆ
ಪಕ್ಷಿಗಳ ಕೀಟಗಳ
ಒಂದಕ್ಕೊಂದರ ಬೇಟೆಯಾಟ
ಕಪ್ಪು ಪತಂಗಗಳ, ರಣಹದ್ದುಗಳ
ಕಿಚ್ ಕಿಚ್ ಶಬ್ದ
ಹರಿದಾಡುವ ಪೆಟ್ರೋ ವಾಹನಗಳಲ್ಲಿ
ಹೆಪ್ಪುಗಟ್ಟಿವೆ ಪುರಾತನ
ಅರೇಬಿಯ ವ್ಯಾಪಾರಿ ಮಾರ್ಗಗಳು
ಆದರೂ ಕಾಣುತ್ತೇನೆ ಅಲ್ಲಲ್ಲಿ
ಕಾಲ್ನಡಿಗೆಯಿಂದಲೇ
ಹಾದಿಕೊಂದ ಜನರನ್ನು
ಸೊಂಟಕ್ಕೆ ಬಿಗಿದ ಖಡ್ಗಗಳನ್ನು
ತಲೆಗೆ ಸುತ್ತಿದ ‘ಘೋತ್ರಾ’ ಗಳನ್ನು
ನನ್ನದು ನಿನ್ನದು ಎಂದು
ಕಾದಾಡಿದ ಜನರನ್ನು
ಕೊಳ್ಳೆ ಹೊಡೆದ ಕೊಲೆಗಡುಕರನ್ನು
ಕೊಳ್ಳಕ್ಕೆ ಹರಿದ ನೆತ್ತರನ್ನು
ಮರುಭೂಮಿಯಲ್ಲಿ ಹೂತು ಹೋದ
ಎಲುಬುಗಳನ್ನು, ಅವುಗಳೆದೆಯ ಮೇಲೆ
ಬೆಳೆದ ಪೊದೆಗಳನ್ನು.
ಇಂದು ಒಂಟೆಗಳು
ಸ್ವತಂತ್ರತೆಯ ಖುಷಿಯಲ್ಲಿ
ಧ್ವನಿ ಕಳೆದುಕೊಂಡಿವೆ.
ಬುರ್ಕಾದ ಕಾಲು ತೊಡೆತಕ್ಕೆ ಬಿದ್ದೇಳುವ
ಕುರಿ ಕಾಯುವ ತುಂಟು ಹುಡುಗಿಯರು
ಕೆಂಡ ಸಂಪಿಗೆಯಂತೆ
ತುಂಬು ಗುಲಾಬಿಗಳಂತೆ
ಅರಳುತ್ತಿದ್ದಾರೆ, ಅಷ್ಟೇ
ಕನಸು ಕಾಣದ ಕೋಮಲೆಯರು
ಸುಡುತ್ತಲೂ ಇದ್ದಾರೆ.
ಈಗ ಎಲ್ಲವೂ ನಿಶ್ಶಬ್ದ
ಶತ ಶತಮಾನಗಳ
ಪರಿಪೂರ್ಣತೆಗೆ ಕೃತಜ್ಞತೆಗಳು ಎಂದು
ಸೂರ್ಯ ತೆಪ್ಪಗಾಗುತ್ತಿದ್ದಾನೆ.
ಹೊಸ ಶತಮಾನದ ಉಬ್ಬರಕ್ಕೆ
ಸ್ವಾಗತದ ಹೆಜ್ಜೆಗಳು
ಪುಟಿ ಪುಟಿದು ಓಡಾಡುತ್ತಿವೆ.

(ಅರೇಬಿಯದ ದಕ್ಷಿಣ ಭಾಗದಲ್ಲಿ ಆಳವಾದ ‘ಶಾರ್ ಕಣಿವೆ’ ಮಾರ್ಗಗಳಲ್ಲಿ ಪ್ರವಾಸ ಕೈಗೊಂಡಾಗ ನೋಡಿದ ದೃಶ್ಯ)
*****

ಪುಸ್ತಕ: ಗಾಂಜಾ ಡಾಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾತಾವರಣದ ತೂಕ ?!
Next post ದೂರವಿರಲಿ ಪ್ರೇಮಿಸಿರುವ ಹೆಣ್ಣು

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

cheap jordans|wholesale air max|wholesale jordans|wholesale jewelry|wholesale jerseys