Home / ಕವನ / ಕವಿತೆ / ಹೈದರಾಬಾದಿನ ಬಾನು

ಹೈದರಾಬಾದಿನ ಬಾನು

ಹದಿನೆಂಟರ ಬಾನು
ಕನಸುಗಳ ಸರಮಾಲೆ ಹೊತ್ತು
ಹಾರಿ ಬಂದಿದ್ದಾಳೆ
ಹೈದರಾಬಾದಿನಿಂದ ಅರೇಬಿಯಕ್ಕೆ
ಅರಬ್ಬನ ದರ್ಬಾರಿನಲ್ಲಿ
ರಾಣಿಯಹಾಗಿರಬಹುದೆಂದು
ಮೈ ತುಂಬ ವಸ್ತ್ರ ಒಡವೆಗಳು ತೊಟ್ಟು
ಮರ್ಸಿಡಿಸ್ ಕಾರಿನಲ್ಲಿ
ಮೆರೆಯಬಹುದೆಂದು
ಕೈಕಾಲಿಗೊಂದೊಂದು
ನೌಕರಿ ಚಾಕರಿ ಇಟ್ಟುಕೊಂಡು
ನಶ್ಯ ಏರಿಸಬಹುದೆಂದು.

ಕತ್ತಲೆ ಓಡಿಹೋಯಿತು
ನನಸಿನ ಬೆಳಕು ಚುಮು ಚುಮುವಾಗಿ
ಮುದ ನೀಡುತ್ತದೆ
ಅಬ್ದುಲ್ ಬಾನುಳನ್ನು ಬಾಚಿ ತಬ್ಬಿದ
ಯೌವನದ ಬಾನು
ಮುದಿ ಅಬ್ದುಲ್‌ನ ತೆಕ್ಕೆ ತುಂಬಿದಳು

ಈಗ ಅಬ್ದುಲ್‌ನ ವಠಾರಿನಲ್ಲಿ
ದಡ್ಡಿಗಳ ಗೊಬ್ಬೆದ್ದಿದೆ
ಗಡ್ಡದ ತುಂಬ ನೊಣಗಳು ಹಾರುತ್ತಿವೆ
ಬಾನೂಳ ಕನಸುಗಳು
ಒಂದೊಂದೇ ನೇಣು ಹಾಕಿಕೊಳ್ಳುವಾಗ
ಮಕ್ಕಳ ದೊಡ್ಡಿ ಇಂಬಾಗುತ್ತದೆ.
ಅಬ್ದುಲ್‌ನ ಮೊದಲ ರಾಣಿ
ಇಜಿಪ್ಷಿಯನ್ ತಾಷಾ
ಲಿಬನಾನಿನ ಹನಿಫಾಳನ್ನು
ಕಟ್ಟಿಕೊಂಡವನು
ಇರಾನಿನ ರಫಿಕಾಳನ್ನು ಇಟ್ಟುಕೊಂಡವನು
ಆಗಲೇ ಬಿಟ್ಟಿದ್ದಾನೆ
ಕುವೈತಿನ ಶಬಾನಾಳನು

ಬಾನುವಿಗೆ ಈಗ ಬೆಳಕಿಲ್ಲ
ಕಣ್ಣುತುಂಬ ಕನಸುಗಳಿಲ್ಲ ಕಣ್ಣೀರೂ ಇಲ್ಲ,
ಧಗಿಸುವ ಸೂರ್ಯನಡಿ ಬಿದ್ದು
ದೂರದ ಹೈದರಾಬಾದಿನಲ್ಲಿ
ಸಲೀಮ್ ಸೈಕಲ್ ತುಳಿಯುತ್ತ
ಮನೆ ಮುಂದೆ ಗಂಟೆ ಹೊಡೆಯುತ್ತ
ಹೋಗುತ್ತಿದ್ದವನು
ಈಗ ಹುಚ್ಚನಾಗಿದ್ದಾನೋ ಏನೋ?
ಚಿಂತಿಸುವ ಬಾನು
ಈಗ ಮನೆಯವರೆಲ್ಲರ ನೌಕರಳಾಗಿ
ಗುಂಡಿ ತೊಳೆಯುತ್ತ ಮುಳುಗಿಹೋಗಿದ್ದಾಳೆ.
*****

ಪುಸ್ತಕ: ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...