Home / ಕವನ / ಕವಿತೆ / ಹೈದರಾಬಾದಿನ ಬಾನು

ಹೈದರಾಬಾದಿನ ಬಾನು

ಹದಿನೆಂಟರ ಬಾನು
ಕನಸುಗಳ ಸರಮಾಲೆ ಹೊತ್ತು
ಹಾರಿ ಬಂದಿದ್ದಾಳೆ
ಹೈದರಾಬಾದಿನಿಂದ ಅರೇಬಿಯಕ್ಕೆ
ಅರಬ್ಬನ ದರ್ಬಾರಿನಲ್ಲಿ
ರಾಣಿಯಹಾಗಿರಬಹುದೆಂದು
ಮೈ ತುಂಬ ವಸ್ತ್ರ ಒಡವೆಗಳು ತೊಟ್ಟು
ಮರ್ಸಿಡಿಸ್ ಕಾರಿನಲ್ಲಿ
ಮೆರೆಯಬಹುದೆಂದು
ಕೈಕಾಲಿಗೊಂದೊಂದು
ನೌಕರಿ ಚಾಕರಿ ಇಟ್ಟುಕೊಂಡು
ನಶ್ಯ ಏರಿಸಬಹುದೆಂದು.

ಕತ್ತಲೆ ಓಡಿಹೋಯಿತು
ನನಸಿನ ಬೆಳಕು ಚುಮು ಚುಮುವಾಗಿ
ಮುದ ನೀಡುತ್ತದೆ
ಅಬ್ದುಲ್ ಬಾನುಳನ್ನು ಬಾಚಿ ತಬ್ಬಿದ
ಯೌವನದ ಬಾನು
ಮುದಿ ಅಬ್ದುಲ್‌ನ ತೆಕ್ಕೆ ತುಂಬಿದಳು

ಈಗ ಅಬ್ದುಲ್‌ನ ವಠಾರಿನಲ್ಲಿ
ದಡ್ಡಿಗಳ ಗೊಬ್ಬೆದ್ದಿದೆ
ಗಡ್ಡದ ತುಂಬ ನೊಣಗಳು ಹಾರುತ್ತಿವೆ
ಬಾನೂಳ ಕನಸುಗಳು
ಒಂದೊಂದೇ ನೇಣು ಹಾಕಿಕೊಳ್ಳುವಾಗ
ಮಕ್ಕಳ ದೊಡ್ಡಿ ಇಂಬಾಗುತ್ತದೆ.
ಅಬ್ದುಲ್‌ನ ಮೊದಲ ರಾಣಿ
ಇಜಿಪ್ಷಿಯನ್ ತಾಷಾ
ಲಿಬನಾನಿನ ಹನಿಫಾಳನ್ನು
ಕಟ್ಟಿಕೊಂಡವನು
ಇರಾನಿನ ರಫಿಕಾಳನ್ನು ಇಟ್ಟುಕೊಂಡವನು
ಆಗಲೇ ಬಿಟ್ಟಿದ್ದಾನೆ
ಕುವೈತಿನ ಶಬಾನಾಳನು

ಬಾನುವಿಗೆ ಈಗ ಬೆಳಕಿಲ್ಲ
ಕಣ್ಣುತುಂಬ ಕನಸುಗಳಿಲ್ಲ ಕಣ್ಣೀರೂ ಇಲ್ಲ,
ಧಗಿಸುವ ಸೂರ್ಯನಡಿ ಬಿದ್ದು
ದೂರದ ಹೈದರಾಬಾದಿನಲ್ಲಿ
ಸಲೀಮ್ ಸೈಕಲ್ ತುಳಿಯುತ್ತ
ಮನೆ ಮುಂದೆ ಗಂಟೆ ಹೊಡೆಯುತ್ತ
ಹೋಗುತ್ತಿದ್ದವನು
ಈಗ ಹುಚ್ಚನಾಗಿದ್ದಾನೋ ಏನೋ?
ಚಿಂತಿಸುವ ಬಾನು
ಈಗ ಮನೆಯವರೆಲ್ಲರ ನೌಕರಳಾಗಿ
ಗುಂಡಿ ತೊಳೆಯುತ್ತ ಮುಳುಗಿಹೋಗಿದ್ದಾಳೆ.
*****

ಪುಸ್ತಕ: ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...