Home / ಕವನ / ಕವಿತೆ / ಹೈದರಾಬಾದಿನ ಬಾನು

ಹೈದರಾಬಾದಿನ ಬಾನು

ಹದಿನೆಂಟರ ಬಾನು
ಕನಸುಗಳ ಸರಮಾಲೆ ಹೊತ್ತು
ಹಾರಿ ಬಂದಿದ್ದಾಳೆ
ಹೈದರಾಬಾದಿನಿಂದ ಅರೇಬಿಯಕ್ಕೆ
ಅರಬ್ಬನ ದರ್ಬಾರಿನಲ್ಲಿ
ರಾಣಿಯಹಾಗಿರಬಹುದೆಂದು
ಮೈ ತುಂಬ ವಸ್ತ್ರ ಒಡವೆಗಳು ತೊಟ್ಟು
ಮರ್ಸಿಡಿಸ್ ಕಾರಿನಲ್ಲಿ
ಮೆರೆಯಬಹುದೆಂದು
ಕೈಕಾಲಿಗೊಂದೊಂದು
ನೌಕರಿ ಚಾಕರಿ ಇಟ್ಟುಕೊಂಡು
ನಶ್ಯ ಏರಿಸಬಹುದೆಂದು.

ಕತ್ತಲೆ ಓಡಿಹೋಯಿತು
ನನಸಿನ ಬೆಳಕು ಚುಮು ಚುಮುವಾಗಿ
ಮುದ ನೀಡುತ್ತದೆ
ಅಬ್ದುಲ್ ಬಾನುಳನ್ನು ಬಾಚಿ ತಬ್ಬಿದ
ಯೌವನದ ಬಾನು
ಮುದಿ ಅಬ್ದುಲ್‌ನ ತೆಕ್ಕೆ ತುಂಬಿದಳು

ಈಗ ಅಬ್ದುಲ್‌ನ ವಠಾರಿನಲ್ಲಿ
ದಡ್ಡಿಗಳ ಗೊಬ್ಬೆದ್ದಿದೆ
ಗಡ್ಡದ ತುಂಬ ನೊಣಗಳು ಹಾರುತ್ತಿವೆ
ಬಾನೂಳ ಕನಸುಗಳು
ಒಂದೊಂದೇ ನೇಣು ಹಾಕಿಕೊಳ್ಳುವಾಗ
ಮಕ್ಕಳ ದೊಡ್ಡಿ ಇಂಬಾಗುತ್ತದೆ.
ಅಬ್ದುಲ್‌ನ ಮೊದಲ ರಾಣಿ
ಇಜಿಪ್ಷಿಯನ್ ತಾಷಾ
ಲಿಬನಾನಿನ ಹನಿಫಾಳನ್ನು
ಕಟ್ಟಿಕೊಂಡವನು
ಇರಾನಿನ ರಫಿಕಾಳನ್ನು ಇಟ್ಟುಕೊಂಡವನು
ಆಗಲೇ ಬಿಟ್ಟಿದ್ದಾನೆ
ಕುವೈತಿನ ಶಬಾನಾಳನು

ಬಾನುವಿಗೆ ಈಗ ಬೆಳಕಿಲ್ಲ
ಕಣ್ಣುತುಂಬ ಕನಸುಗಳಿಲ್ಲ ಕಣ್ಣೀರೂ ಇಲ್ಲ,
ಧಗಿಸುವ ಸೂರ್ಯನಡಿ ಬಿದ್ದು
ದೂರದ ಹೈದರಾಬಾದಿನಲ್ಲಿ
ಸಲೀಮ್ ಸೈಕಲ್ ತುಳಿಯುತ್ತ
ಮನೆ ಮುಂದೆ ಗಂಟೆ ಹೊಡೆಯುತ್ತ
ಹೋಗುತ್ತಿದ್ದವನು
ಈಗ ಹುಚ್ಚನಾಗಿದ್ದಾನೋ ಏನೋ?
ಚಿಂತಿಸುವ ಬಾನು
ಈಗ ಮನೆಯವರೆಲ್ಲರ ನೌಕರಳಾಗಿ
ಗುಂಡಿ ತೊಳೆಯುತ್ತ ಮುಳುಗಿಹೋಗಿದ್ದಾಳೆ.
*****

ಪುಸ್ತಕ: ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...