Home / ಕವನ / ಕವಿತೆ / ಈ ತಿಂಗಳು ಜನವರೀ

ಈ ತಿಂಗಳು ಜನವರೀ

(೧೯೫೨ ರಲ್ಲಿ ಭಕ್ತಾಭಕ್ತರ ಮಾತು)

ಈ ತಿಂಗಳು ಜನವರೀ
(ಏನಾದರೆ ಏನರೀ?)

ರವಿ ತಿರುಗಿದನುತ್ತರಕ್ಕೆ
(ಸಮಯವೆಳ್ಳು ಬೆಲ್ಲ ಮುಕ್ಕೆ)
ಕ್ರಾಂತಿ ಸಂಕ್ರಾಂತಿಯಕ್ಕೆ!
(ನಮಗುಳಿವುದೋ ನಮ್ಮ ಹಕ್ಕೆ?)
ಈ ತಿಂಗಳು ಜನವರೀ!
(ಏನಾದರೆ ಏನರೀ?)

ಈ ತಿಂಗಳು ಗಾಂಧಿಸತ್ತ
(ಸತ್ತು ಕಳೆದನಾರ ಕುತ್ತ?)
ನಾಡಿದಾಯ್ತು ಸುಸ್ವತಂತ್ರ
(ಆವ ಕಲಿಯ ಕುಹಕತಂತ್ರ?)
ಇಂದಾಯಿತು ಜನವರೀ!
(ಏನಾದರೆ ಏನರೀ?)

ಈ ತಿಂಗಳು ಮೊದಲಿಟ್ಟಿತು
ಮೂಗುಜನದ ಮೊಗದಾಯ್ಕೆ.
(ಜಡಧಿಯೊಳಾರುತ್ಸವ ಕೀ
ಧನ ದಾಕ್ಷಿಣ್ಯದ ಹಾಯ್ಕೆ?)

ಪ್ರಜೆಗೆ ಸಂದಿತೀ ತಿಂಗಳು
ಬಹುಕಾಲದ ಪೂಣ್ಕೆ.
(ಕುದುರೆಗಂತು ಕೋಲತುದಿಯ
ಕೆಂಗೆಣಸಿನ ಕಾಣ್ಕೆ!)
ಈ ತಿಂಗಳು ಜನವರೀ
(ಅದು ಸರಿ ಮುಂದೇನರೀ?)

ಇನ್ನು ಬೆಳೆವುದೆಮ್ಮ ಕಲಾ.
(ಏನೀ ವೃದ್ಧರ ಚಪಲ!)
ಹುಲುಸುವುದಿನ್ನೆಮ್ಮ ನುಡಿ.
(ನಮಗೇಕೀ ನಾಲಗೆ ಮಡಿ!)
ನಮ್ಮ ವಿದ್ಯೆಯಿನ್ನೆಮಗೆ.
(ಬಂದಿತೆ ಗುಹೆವಾಸದ ಬಗೆ?)
ನಮ್ಮ ನಮ್ಮದೀ ರಾಜ್ಯ!
(ಯಾರದು ಯಾರಿಗೆ ತ್ಯಾಜ್ಯ!)
ಈ ತಿಂಗಳು ಜನವರಿ!
(ಸರಿ ಸರಿ ಮತ್ತೇನರೀ?)

ಎಲೆಲೇ ಪಾಯಸಮಕ್ಷಿಕ,
ನಿನಗೇಕೀ ಕಿಂಕೃತಿ?
ಭೋ, ವಾರ್ಷಿಕ ಹೃಷ್ಟಭೇಕ,
ಮೊಳಗಿಸು ಜಯ ಝಂಕೃತಿ!
ಇಂದಾಯಿತು ಜನವರೀ!
ಅದರಿಂದೆಮಗೇನರೀ?
*****

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...