Home / ಕಥೆ / ಕಿರು ಕಥೆ / ಸಂಸಾರಿ

ಸಂಸಾರಿ

ಒಬ್ಬ ಸಂಸಾರಿ, ತಾಪತ್ರಯಗಳಲ್ಲಿ ಸಿಲುಕಿ, ನಾಲಿಗೆ ತುದಿಯಲ್ಲಿ “ಈಶ್ವರ! ಈಶ್ವರ! ಎನ್ನುತ್ತಿದ್ದ. ಇಪ್ಪತ್ತು ನಾಲ್ಕು ಘಂಟೆ ಅವನಿಗೆ ಸಂಸಾರದ ಗೋಳು. ಹೆಂಡತಿ ಮಕ್ಕಳ ಕಾಟ, ಭವದ ಬವಣೆ, ಬಾಯಲಿ ಮಾತ್ರ ಈಶ್ವರ ಭಕ್ತಿ, ಕರ್ಮಗಳನ್ನು ಮಾಡುತ್ತ ಫಲಾಪೇಕ್ಷೆಗಾಗಿ ಪರಿತಪಿಸುತ್ತಿದ್ದ. ಕರ್ಮಮಾಡುವಾಗ ಗೋಳಿಡುತ್ತಿದ್ದ. ಇದರೊಡನೆ ಈಶ್ವರ ಧ್ಯಾನ ಮಾಡಿದ್ದರು ಅವನ ಮನವು ಕರ್ಮಗಳ ಬಂಧನದಲ್ಲಿ ಸುತ್ತಿಕೊಂಡಿತ್ತು. ಅವನಿಗೆ ಯಾವ ರೀತಿಯ ನೆಮ್ಮದಿ, ಶಾಂತಿ ದೊರೆಯಲಿಲ್ಲ. ಸದಾ ಭವಸಾಗರದಿಂದ ಪಾರುಮಾಡು ಈಶ್ವರ ಎನ್ನುತ್ತಿದ್ದ. ಆದರೆ ಸಂಸಾರ ಕೂಪದಿಂದ ಮೇಲೆ ಏಳಲಾಗುತ್ತಿರಲಿಲ್ಲ.

ಅವನು ತನ್ನ ಮಿತ್ರನನ್ನು ನೋಡಿ ಯಾವಾಗಲೂ ಅಸೂಯೆ ಪಡುತ್ತಿದ್ದ. ಮಿತ್ರನಿಗೆ ಧ್ಯಾನ, ಧಾರಣ, ಸಮಾಧಿ ಯಾವುದೆಂದು ತಿಳಿಯದಿದ್ದರು ಅವನು ಝೆನ್ ಹೆಜ್ಜೆಯಿಟ್ಟು ನಡೆದಿದ್ದ. ಅತ್ಯಂತ ಸರಳ ಸಹಜತೆಯಲ್ಲಿ ದೈವಾರ್ಪಣದಲ್ಲಿ ಫಲಾಪೇಕ್ಷೆ ತೊರದಿದ್ದ. ಕರ್ಮ ವಿಮುಕ್ತನಾಗಿದ್ದ. ಈಶ್ವರ ಪ್ರಣಿಧಾನದಲ್ಲಿ ಶಾಂತಿ ಪಡೆದಿದ್ದ. ಸೂರ್ಯನ ಬೆಳಕಿನಲ್ಲಿ ಅರಳುವ ಹೂವಿನಂತೆ ಅವನ ಮನವು ಸಹಜತೆಗೆ ತೆರೆದುಕೊಂಡಿತ್ತು.

ಸಂಸಾರಿಗೆ ಮಿತ್ರನ ಬಾಳು, ದಾರಿ ತೋರಿತು. ಕೆಸರಿನಿಂದ ಕಮಲದಂತೆ ಮೇಲೆದ್ದಿತು. ಅವನ ಹೃದಯಿ, ಸಹಜತೆಯ ಗುಟ್ಟು ಸತ್ಯಕ್ಕೆ ದರ್ಶನ ಮಾಡಿಸಿತು.
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...