Home / ಕಥೆ / ಕಿರು ಕಥೆ / ಝೆನ್ ಎಂದರೇನು?

ಝೆನ್ ಎಂದರೇನು?

ಒಮ್ಮೆ, ಶಿಷ್ಯನೊಬ್ಬ ಗುರುಗಳಲ್ಲಿ ಬಂದು ಪೆಚ್ಚು ಮುಖ ಹಾಕಿಕೊಂಡು ಕುಳಿತ. ಶಿಷ್ಯನ ಮುಖವನ್ನು ನೋಡಿ ಅವನ ಮನದ ಕಲ್ಲೋಲವನ್ನು ಗಮನಿಸಿದ ಗುರುಗಳು-
“ಶಿಷ್ಯಾ! ನಿನ್ನ ಕಾಡುತ್ತಿರುವ ವಿಷಯವೇನು?” ಎಂದರು. “ಗುರುಗಳೇ! ವನ ವನ ಸುತ್ತಾಡಿದೆ. ಕಾಡು ಮೇಡು ಅಲೆದಾಡಿದೆ. ಬೆಟ್ಟ ಗುಡ್ಡ ಹತ್ತಿದೆ. ಸಮುದ್ರಯಾನ ಮಾಡಿದೆ. ಆಗಸವ ಅವಲೋಕಿಸಿದೆ. ಆದರೆ ನನ್ನ ಮನದಲ್ಲಿ ಒಂದು ರೀತಿಯ ಆಂದೋಲನವಿದೆ. ವನ ವನವ ಸುತ್ತಿದಾಗ, ಅದೆಷ್ಟು ವಿಧದ ಸಸ್ಯಾಕಾರ, ಅದೆಷ್ಟು ವಿಧದ ಬಣ್ಣ, ಮೋಹಕ ಹಸಿರಿನ ಪ್ರದರ್ಶನ ಇದರ ಸ್ವಚ್ಛಂಧತೆಯಲ್ಲಿ ನನ್ನ ಕಣ್ಣು ಕಾಣಬೇಕಾದುದೇನು? ಅದರ ನಿಜ ಮರ್ಮ ನನ್ನ ಅರಿವಿಗೆ ಬರುತ್ತಿಲ್ಲ. ಕಾಡುಮೇಡುಗಳಲ್ಲಿ ಅಲೆದಾಡುವಾಗ ವಿವಿಧ ಖಗಮೃಗಗಳ, ವೈವಿಧ್ಯತೆಯಲ್ಲಿ ತಡಕಾಡಿದೆ, ಹುಡುಕಾಡಿದೆ ಕೊನೆಗೆ ಅರ್ಥವಿಸದಾದೆ. ಇನ್ನು ಆಕಾಶವನ್ನು ಅವಲೋಕಿಸುವಾಗ ಆ ವಿಸ್ತಾರ ನೀಲಿಮೆ; ಅಪಾರ ನಕ್ಷತ್ರಮಾಲೆ; ಬೆಳಗು ರಾತ್ರಿಯಲ್ಲಿ ಚಂದ್ರಸೂರ್ಯ ಗ್ರಹ ನಿಹಾರಿಕೆಗಳ ವೈಭವ. ಅರ್ಥವಿಸಲಾರದ ಅನಂತತೆ ನನ್ನ ದಿ಼ಙ್ಮೂಢನನ್ನಾಗಿ ಮಾಡಿತು. ಇನ್ನು ಸಮುದ್ರಯಾನ ಮಾಡುವಾಗ ಆ ಜಲ ಸಮಾವೇಶದಲ್ಲಿ ಅದೆಷ್ಟು ರಭಸ, ಅದೆಷ್ಟು ಸೆಳೆತ, ಅದೆಷ್ಟು ಭೋರ್ಗರತೆ, ಅದೆಷ್ಟು ಜೀವಚರ, ಅದೆಷ್ಟು ನಿಶ್ಚಲ ಆಳ, ಅದೆಷ್ಟು ವೇಗ, ಅದೆಷ್ಟು ಅಸೀಮ, ಅಪಾರತೀರ, ಎಲ್ಲವೂ ಪ್ರಚೋದಿಸಿತು. ನನ್ನೊಳ ಆಳವನ್ನು ಕಂಪಿಸಿತು. ನನ್ನ ಸ್ಥಿರತೆಗೆ ಭಂಗ ತಂದಿತು. ಇಲ್ಲಿ ಅಳೆಯ ಬೇಕಾದುದು ಏನು? ಇಲ್ಲಿ ಮಥಿಸ ಬೇಕಾದುದು ಏನು? ಒಂದೂ ತಿಳಿಯದೇ, ಏನೋ ಪಡೆದಂತೆ, ಏನೋ ಕಳೆದುಕೊಂಡವನಂತೆ ನಿಮ್ಮಲ್ಲಿಗೆ ಬಂದಿರುವೆನು ಗುರುವರ್ಯ!” ಎಂದ ಶಿಷ್ಯ ಕಂಪಿಸುತ್ತ.

“ಶಿಷ್ಯಾ! ವನವನದಲ್ಲಿ ಇರುವ ಒಟ್ಟು ಸಸ್ಯ ಜೀವ ಚೇತನದ ಚೈತನ್ಯದ ಸಹಜತೆಯನ್ನು ಗುರುತಿಸು. ಅದನ್ನು ಸತ್ಯದಾಳದಲಿ ಅನುಭವಿಸು, ನಿನ್ನ ಮನದ ಆಂದೋಲನಕ್ಕೆ ಮೌನದ ದೃಷ್ಟಿಕೊಡು, ಅಲ್ಲಿ ಅರಳುತ್ತದೆ ನಿನ್ನ ಮನ. ಅದು ತೃಪ್ತಿ ಕೊಡುತ್ತದೆ ಮೌನದಲ್ಲಿ. ಇದು ಮನದ ಝುನ್ ಪ್ರಕೃತಿಯಿಂದ ಮನವು ಪಡೆವ ಮುಕ್ತತೆ. ಝುನ್ ಒಂದು ಒಟ್ಟಾರೆ ಜೀವನ ದರ್ಶನ. ಇದು ಪ್ರಕೃತಿಯ ಮುಚ್ಚು ಮರೆ ಇಲ್ಲದ ತೆರೆದಿಟ್ಟ ಸತ್ಯ. ಅದನ್ನು ಅರಿಯಲು ಶೂನ್ಯತೆಯ ಅರಿವು ಪಡೆದುಕೊಳ್ಳಬೇಕು. ಶೂನ್ಯತೆ ನಕಾರಾತ್ಮಕವಾದುದಲ್ಲ ಅದು ಸಕಾರಾತ್ಮಕ. ಎಲ್ಲವೂ ಒಂದು ಗೂಡುವಿಕೆ. ವನವನದಂತೆ ಕಾಡುಮೇಡಿನಂತೆ, ಸಕಲಜಲದ ಸಮಾವೇಶವಾದ ಸಮುದ್ರದಂತೆ, ಸಕಲಗ್ರಹ, ನಕ್ಷತ್ರ, ನಿಹಾರಿಕೆ ಸೂರ್ಯಚಂದ್ರಮರಿಂದ ಕೂಡಿದ ಆಕಾಶದಂತೆ. ಇಲ್ಲಿ ದ್ವಂದ್ವವಿಲ್ಲ. ಭಿನ್ನತೆಯಿಲ್ಲ. ಎಲ್ಲಾ ಎಲ್ಲವೂ ಒಂದಾಗುವಿಕೆ. ಯಾವುದರಿಂದಲೂ ಹೊರಹೋಗದಿರುವಿಕೆ, ಸರ್ವಸ್ವ ಗ್ರಹಣವೇ ಶೂನ್ಯತೆ. ಆಗ ಮನಕ್ಕೆ ಎಲ್ಲಿಯ ಗೊಂದಲ? ಎಲ್ಲಿಯ ಕಳವಳ?

ಈಗ ನಿನ್ನ ದಾರಿಗೆ ದೀಪ ನೀ ಹಚ್ಚಿಕೋ. ಅದು ನಿನ್ನದು. ನಿನ್ನ ಅನುಭವದ್ದು. ನಿನ್ನ ಮನಃಸ್ಫುರಣದ್ದು. ನಿನ್ನ ಪ್ರಜ್ಞೆಯ ಹೊಳಹು, ನಿನ್ನ ಕಣ್ಣಿನ ಮಿಂಚು. ನಿನ್ನ ಹೃದಯದ ಕೊನೆಯ ಅಂಚು! ಎಂಬ ಗುರುವಿನ ವಾಣಿ ಕೇಳುತ್ತಾ ಶಿಷ್ಯ ಝುನ್‌ನಲ್ಲಿ ಒಂದಾದವು.
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...